ಚಿತ್ರರಂಗವನ್ನಗಲಿದ ಖ್ಯಾತ ನಿರ್ದೇಶಕ:‌ ಮತ್ತೆ ಶೋಕಸಾಗರದಲ್ಲಿ ಕನ್ನಡ ಚಿತ್ರರಂಗ

Published on

423 Views

ಎಂತಹ ಕಾಲವನ್ನು ಕಾಣುತ್ತಿದ್ದೇವೆ. ಕನ್ನಡ ಚಿತ್ರರಂಗ ಕಳೆದ ಎರಡು ಮೂರು ವರ್ಷಗಳಿಂದ ದಿಗ್ಗಜರನ್ನೇ ಕಳೆದುಕೊಂಡು ಶೋಕಸಾಗರದಲ್ಲಿ ಮುಳುಗಿದೆ. ಕೋವಿಡ್ ಕಾರಣದಿಂದ ಕೆಲವರಾದರೆ, ಇನ್ನು ಕೆಲವರು ಅನಿರೀಕ್ಷಿತ-ಅಸಹಜವೋ ಎನ್ನುವಂತೆ ರಾಜ್ಯಕ್ಕೆ ರಾಜ್ಯವೇ ಶೋಕಿಸುವಂತೆ ಅಗಲಿದ್ದಂತೂ ಸುಳ್ಳಲ್ಲ.

ಆ ನೋವುಗಳು ಆರದಂತೆಯೇ ಕನ್ನಡ ಚಿತ್ರರಂಗ ಮತ್ತೊಬ್ಬ ಸ್ಟಾರ್ ನಿರ್ದೇಶಕನನ್ನು ಕಳೆದುಕೊಂಡಿದೆ. ಕನ್ನಡ ಚಿತ್ರರಂಗದಲ್ಲಿ ನಾಲ್ಕು ದಶಕಗಳ ಕಾಲ ನಿರ್ದೇಶಕ, ನಟ, ನಿರ್ಮಾಪಕ ಮತ್ತು ಡಬ್ಬಿಂಗ್ ಕಲಾವಿದರಾಗಿಯೂ ಸೇವೆ ಸಲ್ಲಿಸಿದ ಕಟ್ಟೆ ರಾಮಚಂದ್ರ, ತನ್ನ ಪತ್ನಿವಿಯೋಗದ 5 ದಿನಗಳ ನಂತರ, ಇಹಲೋಕ ತ್ಯಜಿಸಿದ್ದಾರೆ.

75 ವರ್ಷ ವಯಸ್ಸಾಗಿದ್ದ ಅವರು ವಯೋಸಹಜ ಕಾಯಿಲೆಯಿಂದ ವಿಶ್ರಾಂತಿ ಪಡೆಯುತ್ತಿದ್ದರು.

ಡಾ.ವಿಷ್ಣುವರ್ಧನ್ ನಟನೆಯ. ವೈಶಾಖದ ದಿನಗಳು ಹಿಟ್ ಚಿತ್ರವನ್ನು ನಿರ್ದೇಶಿಸಿದ್ದ ರಾಮಚಂದ್ರ ಅವರು, ಮಹಾಲಕ್ಷ್ಮಿ, ಅರಿವು ಮುಂತಾದ ಚಿತ್ರಗಳನ್ನು, ಸಮರ್ಥವಾಗಿ ನಿರ್ದೇಶಿಸಿದ್ದರು.

ಕೇವಲ ನಿರ್ದೇಶಕರಾಗಿ ಅಷ್ಟೇ ಅಲ್ಲದೆ, ‌ನಿರ್ಮಾಪಕರಾಗಿಯೂ ಕಟ್ಟೆ ರಾಮಚಂದ್ರ ಅವರ ಕೊಡುಗೆ ಅಮೋಘ. ಪನಿಯಮ್ಮ ಚಿತ್ರದಲ್ಲಿ ನಿರ್ಮಾಣ ವ್ಯವಸ್ಥಾಪಕರಾಗಿ ಕೆಲಸ ಮಾಡಿದ್ದ ರಾಮಚಂದ್ರ ಅವರು ಅಲೆಗಳು, ಮನೆ ಮನೆ ಕಥೆ ಧಾರಾವಾಹಿಗಳಿಗೆ ನಿರ್ಮಾಪಕರಾಗಿದ್ದರು.

ಪರಭಾಷೆಗಳಲ್ಲೂ ಕಮಾಲ್ ಮಾಡುತ್ತಿರುವ ʼಕಥೆಯೊಂದು ಶುರುವಾಗಿದೆʼ ಖ್ಯಾತಿಯ ಕನ್ನಡ ನಿರ್ದೇಶಕ ಸೆನ್ನಾ ಹೆಗ್ಡೆ

ನಟರಾಗಿ ಬಣ್ಣ ಹಚ್ಚಿದ್ದ ಇವರು, ಗನ್, ಬಿಂಬ, ಕಾಡಿನ ಬೆಂಕಿ, ಬ್ಯಾಂಕರ್ ಮಾರ್ಗಯ್ಯ, ಅಂತರಾಳ, ಪ್ರೇಮ ಮತ್ಸರ, ಗ್ರಹಣ, ನಮ್ಮಮ್ಮ ತಾಯಿ ಅಣ್ಣಮ್ಮ, ಒಂದು ಪ್ರೇಮದ ಕಥೆ, ತಬ್ಬಲಿಯು ನೀನಾದೆ ಮಗನೆ ಮುಂತಾದ ಚಿತ್ರಗಳಲ್ಲಿ ನಟನಾ ಕೌಶಲ್ಯವನ್ನು ಪ್ರದರ್ಶಿಸಿದ್ದರು.

ಮಾರ್ಚ್ 3 ರಿಂದ ಆರಂಭವಾಗಲಿದೆ 13 ನೇ ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವ

ಕಟ್ಟೆ ರಾಮಚಂದ್ರ ಒಬ್ಬ ಸವ್ಯಸಾಚಿ ಕಲಾವಿದ ಎನ್ನುವುದಕ್ಕೆ ಅವರ ಸರ್ವಾಂಗೀಣ ಪ್ರತಿಭೆಗಳೇ ಸಾಕ್ಷಿ. ಹುಲಿಯ ‍ಚಿತ್ರಕ್ಕೆ ವಸ್ತ್ರಾಲಂಕಾರ ಕಲಾವಿದರಾಗಿದ್ದ ಇವರು ಒಬ್ಬ ಅತ್ಯುತ್ತಮ ಕಂಠದಾನ ಕಲಾವಿದರಾಗಿದ್ದರು. ಗೀಜಗನ‌ ಗೂಡು, ಚೋಮನ ದುಡಿ, ಘಟಶ್ರಾದ್ಧ ಮುಂತಾದ ಚಿತ್ರಗಳಿಗೆ ಡಬ್ಬಿಂಗ್ ಆರ್ಟಿಸ್ಟ್ ಆಗಿ ದುಡಿದಿದ್ದ ಇವರು, ರಾಷ್ಟ್ರಪ್ರಶಸ್ತಿ ವಿಜೇತ ಸಿನಿಮಾಗಳನ್ನು ನಿರ್ದೇಶಿಸಿದ್ದರು ಎನ್ನುವುದು ಕನ್ನಡ ಚಿತ್ರರಂಗಕ್ಕೇ ಹೆಮ್ಮೆಯ ವಿಚಾರ.

ಇಂತಹ ಪರಿಪೂರ್ಣ ಕಲಾವಿದನ ಅಗಲುವಿಕೆಯು ಕನ್ನಡ ಚಿತ್ರರಂಗವನ್ನು ನೋವಿನ ಸಾಗರದಲ್ಲಿ ಮುಳುಗಿಸಿದ್ದು, ಖ್ಯಾತ ನಟರು, ನಿರ್ದೇಶಕರು, ನಿರ್ಮಾಪಕರು ಈ ಹಿರಿಯ ಕಲಾವಿದರ ಅಗಲುವಿಕೆಗೆ ಸಂತಾಪ ಸೂಚಿಸಿದ್ದಾರೆ.

ಇಂತಹ ಹಿರಿಯ ದಿಗ್ಗಜ ಕಲಾವಿದರ ನೆನಪು ಕನ್ನಡ ಚಿತ್ರರಂಗದಲ್ಲಿ ಚಿರವಾಗಿರಲಿ, ಅಗಲಿದ ದಿವ್ಯಾತ್ಮಕ್ಕೆ ಚಿರಶಾಂತಿ ದೊರಕಲಿ ಎಂದು ಪ್ರಾರ್ಥಿಸೋಣ.

More Buzz

Buzz 4 days ago

ಕೇವಲ ಮೋಷನ್ ಪೋಸ್ಟರ್ ಮೂಲಕವೇ ದೊಡ್ಡ ಕ್ರೇಜ಼್ ಹುಟ್ಟಿಸಿದ ‘ಕೆಂಡ’- ಟೀಸರ್ ಇಲ್ಲಿದೆ ನೋಡಿ

Buzz 5 days ago

ಎರಡನೇ ದಿನವೂ ಪ್ರಭಾಸ್ ನಟನೆಯ ಕಲ್ಕಿ 2898AD ಕಮಾಲ್ – ಎರಡೇ ದಿನದಲ್ಲಿ ಚಿತ್ರ ಗಳಿಸಿದ್ದೆಷ್ಟು ಗೊತ್ತಾ?

BuzzTollywood Buzz 5 days ago

ಈ ಓಟಿಟಿಯಲ್ಲಿ ಶೀಘ್ರವೇ ಬರಲಿದೆ Kalki 2898 AD – ಆದರೂ‌ ಚಿತ್ರದ ಥಿಯೇಟರ್ ಅನುಭವವೇ ಬೇರೆ

Buzzfilm of the dayGalleryTollywood Buzz 1 week ago

ಕಲ್ಕಿ 2898 AD ಟಿಕೆಟ್‌ಗೆ ರಾಜಮೌಳಿ ಕ್ಯೂ ನಿಂತ ಫೋಟೋ ವೈರಲ್ – ಮೂವೀ ಪವರ್ ಎಂದ ನೆಟ್ಟಿಗರು

Buzzfilm of the dayFull MoviesTollywood Buzz 1 week ago

ಸಾಕಷ್ಟು ನಿರೀಕ್ಷೆ ಹುಟ್ಟಿಸಿದ್ದ ಕಲ್ಕಿ 2898 AD ಚಿತ್ರ ಹೇಗಿದೆ? – ಇಲ್ಲಿದೆ ನೋಡಿ ಚುಟುಕು ವಿಮರ್ಶೆ

Buzz 1 week ago

ತರುಣ್‌ ಸುಧೀರ್‌ ಜೊತೆ ಹಸೆಮಣೆ ಏರಲಿದ್ದಾರೆಯೇ ರಾಬರ್ಟ್‌ ಬೆಡಗಿ ಸೋನಲ್!? – ಇಲ್ಲಿದೆ ವೈರಲ್ ಸುದ್ದಿಯ ಅಸಲಿಯತ್ತು

BuzzGalleryTrailers 1 week ago

ಕಲ್ಕಿ 2898 AD ಚಿತ್ರದ ಬುಜ್ಜಿ ಚಲಾಯಿಸಿದ ರಿಷಭ್ ಶೆಟ್ಟಿ – ಇಲ್ಲಿದೆ ನೋಡಿ ಎಕ್ಸ್’ಕ್ಲೂಸಿವ್ ವಿಡಿಯೋ

Buzz 1 week ago

“ಹಾಯ್‌ ಟೈಗರ್, ಹಾಯ್‌ ಬಾಸ್”!!!! – ಜೈಲಿನಲ್ಲಿ ದರ್ಶನ್ ಭೇಟಿ ಮಾಡಿದ್ದು ಯಾರು?

Buzzfilm of the dayFull Movies 2 weeks ago

ಲವ್ಲಿ ಆಗಿ ಜನರ ಮನಸ್ಸು ಗೆದ್ದ ವಸಿಷ್ಟ ಸಿಂಹರ ಲವ್…ಲಿ

Buzz 3 weeks ago

ಚಂದನ್‌ ಶೆಟ್ಟಿ ಹಾಗೂ ನಿವೇದಿತಾ ಗೌಡ ವಿಚ್ಛೇದನಕ್ಕೆ ಕೊನೆಗೂ ಬಯಲಾಯ್ತು ಕಾರಣ – ಇಲ್ಲಿದೆ ನೋಡಿ ಸತ್ಯ

Buzz 3 weeks ago

ಯುವರಾಜ್‌ ಕುಮಾರ್‌ ದಂಪತಿಗಳ ವಿಚ್ಛೇದನಕ್ಕೆ ಸಪ್ತಮಿ ಗೌಡ ಕಾರಣ!!? ಏನಿದು ವಿವಾದ?

Buzz 3 weeks ago

ಸ್ಯಾಂಡಲ್ ವುಡ್ ನಲ್ಲಿ ಕೊಲೆ ಸದ್ದು – ನಟ ದರ್ಶನ್ ತನ್ನ ಅಭಿಮಾನಿಗೆ ಮಾಡಿದ್ದೇನು?

Copyright ©2024 . All Rights Reserved. privacy | terms Whatsapp: 9538193653 Email: hello@flixoye.com