ಕ್ಷಮಿಸಿ‌‌ ನಿಮ್ಮ ಖಾತೆಯಲ್ಲಿ ಹಣವಿಲ್ಲ”.ಚಿತ್ರದ ಲಿರಿಕಲ್ ಸಾಂಗ್ ಬಿಡುಗಡೆ ಮಾಡಿದ ಗೋಲ್ಡನ್ ಸ್ಟಾರ್…

Published on

316 Views

ಕೊರೋನ ಎರಡನೇ ಅಲೆ ಪೂರ್ತಿ ಮುಗಿದಿಲ್ಲ. ಚಿತ್ರಮಂದಿರಗಳಲ್ಲಿ ಚಿತ್ರ ಬಿಡುಗಡೆಗೆ ಇನ್ನೂ ಅವಕಾಶ ಸಿಕ್ಕಿಲ್ಲ.
ಆದರೆ ಕೆಲವು ಚಟುವಟಿಕೆಗಳಿಗೆ ಸರ್ಕಾರ ಅನುಮತಿ ನೀಡಿದೆ.
ಈಗ ಕನ್ನಡ ಚಿತ್ರರಂಗದ ಕಾರ್ಯ‌ಚಟುವಟಿಕೆ ನಿಧಾನವಾಗಿ ಆರಂಭವಾಗಿದೆ.‌
ತಾರಾಜೋಡಿ ದಿಗಂತ್ – ಐಂದ್ರಿತಾ ರೇ ಬಹಳವರ್ಷಗಳ ನಂತರ ನಾಯಕ – ನಾಯಕಿಯಾಗಿ ನಟಿಸಿರುವ “ಕ್ಷಮಿಸಿ‌ ನಿಮ್ಮ ಖಾತೆಯಲ್ಲಿ ಹಣವಿಲ್ಲ” ಚಿತ್ರದ ಲಿರಿಕಲ್ ಸಾಂಗ್ ಬಿಡುಗಡೆಯಾಗಿದೆ.
ಗೋಲ್ಡನ್ ಸ್ಟಾರ್ ಗಣೇಶ್ ಈ ಲಿರಿಕಲ್ ಸಾಂಗ್ ಬಿಡುಗಡೆಗೊಳಿಸಿ ಚಿತ್ರತಂಡಕ್ಕೆ ಶುಭ ಕೋರಿದರು.

ಕಳೆದ ಒಂದೂವರೆ ವರ್ಷಗಳಿಂದ ಕೊರೋನ ಕಾರಣದಿಂದ ಒಬ್ಬರನ್ನೊಬ್ಬರು ಭೇಟಿಯಾಗಲು ಸಾಧ್ಯವಿರಲಿಲ್ಲ.. ಇಂದು ಈ ಸಮಾರಂಭದಲ್ಲಿ ಮಾಧ್ಯಮದ ಮಿತ್ರರನ್ನು ಹಾಗೂ ಚಿತ್ರೋದ್ಯಮದ ಗೆಳೆಯರನ್ನು ನೋಡಿ ಬಹಳ ಆನಂದವಾಗಿದೆ. ಚಿತ್ರಮಂದಿರಗಳು ಬೇಗ ಆರಂಭವಾಗಲಿ.. ಚಿತ್ರೋದ್ಯಮದ ಚಟುವಟಿಕೆಗಳು ಮುಂಚಿನಂತೆ ಆಗಲಿ.. ಎಲ್ಲರ ಖಾತೆಗೂ ಹಣ ಬರಲಿ ಎಂದು ಗಣೇಶ್ ಹಾರೈಸಿದರು.
ನಾನು ಮೂಲತಃ ಮಲೆನಾಡಿನವನು.. ಅಡಿಕೆ ಬೆಳೆ ಬೆಳೆದು ನನಗೆ ಅಭ್ಯಾಸವಿದೆ.. ಈ ಸಿನಿಮಾ ಮಲೆನಾಡಿನ ಹುಡುಗನ‌ ಕಥೆಯನ್ನೇ ಆಧರಿಸಿರುವುದರಿಂದ ನನಗೆ ನಟಿಸಲು ಸುಲಭವಾಯಿತು ಎಂದು ತಿಳಿಸಿದ ನಾಯಕ ದಿಗಂತ್, ಚಿತ್ರ ಉತ್ತಮವಾಗಿ ಮೂಡಿ ಬರಲು ಸಹಕರಿಸಿದ ನಿರ್ಮಾಪಕ,‌ ನಿರ್ದೇಶಕ ಸೇರಿದಂತೆ ಇಡೀ ಚಿತ್ರತಂಡಕ್ಕೆ ಧನ್ಯವಾದ ತಿಳಿಸಿದರು.

ಚಿತ್ರದ ಕಥಾವಸ್ತು ತುಂಬಾ ಇಷ್ಟವಾಯಿತು.. ಚಿತ್ರದ ಕಥೆ ಕೇಳಿದ ಕೂಡಲೇ ನನಗೆ ಈ ಪಾತ್ರದಲ್ಲಿ ನಟಿಸುವ ಮನಸ್ಸಾಯಿತು. ಜನ ಈಗ ಉತ್ತಮ ಕಥಾವಸ್ತುವುಳ್ಳ ಚಿತ್ರಗಳನ್ನು ಇಷ್ಟಪಡುತ್ತಿದ್ದಾರೆ. ನಮ್ಮ ಚಿತ್ರವನ್ನು ಕನ್ನಡ ಕಲಾರಸಿಕರು ಇಷ್ಟಪಟ್ಟು ಯಶಸ್ವಿಗಳಿಸುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂಬುದು ಚಿತ್ರದ ಮತ್ತೊಬ್ಬ ನಾಯಕಿ ರಂಜನಿ ರಾಘವನ್ ಅವರ ಅಭಿಪ್ರಾಯ.

ನಮ್ಮ ಚಿತ್ರದ ಚಿತ್ರೀಕರಣ ‌ಪೂರ್ಣವಾಗಿ ರೀರೆಕಾರ್ಡಿಂಗ್ ಹಂತದಲ್ಲಿದೆ.
ಮಲೆನಾಡ ಹುಡುಗನ ಜೀವನದಲ್ಲಿ ನಡೆಯುವ ಕಥಾವಸ್ತುವಿನ ಚಿತ್ರವಾಗಿರುವುದರಿಂದ ಮಲೆನಾಡಿನ ಭಾಗದಲ್ಲೇ ಹೆಚ್ಚು ಚಿತ್ರೀಕರಣ ಮಾಡಿದ್ದೇವೆ. ಚಿತ್ರದಲ್ಲಿ ಮನೋರಂಜನೆಗೆ ಹೆಚ್ಚಿನ ಒತ್ತು ನೀಡಿದ್ದೇವೆ‌. ಕೊನೆಯಲ್ಲಿ ಉತ್ತಮ ಸಂದೇಶ ಕೂಡ ಇರುತ್ತದೆ ಎಂದು ತಿಳಿಸಿದ ನಿರ್ದೇಶಕ ವಿನಾಯಕ ಕೋಡ್ಸರ, ಕೊರೋನ ಹಾವಳಿ ಕಡಿಮೆ ಆದರೆ ಸೆಪ್ಟೆಂಬರ್ ವೇಳೆಗೆ ಚಿತ್ರವನ್ನು ತೆರೆಗೆ ತರುತ್ತೇವೆ ಎಂದರು.
ನಿರ್ಮಾಪಕ ಸಿಲ್ಕ್ ಮಂಜು ಹಾಗೂ ಚಿತ್ರದ ಆಡಿಯೋ ಹಕ್ಕು ಪಡೆದಿರುವ ಲಹರಿ ಸಂಸ್ಥೆ ವೇಲು ಅವರು ಸಹ ಚಿತ್ರದ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡರು.

ನಿರ್ಮಾಪಕರ ಸ್ನೇಹಿತರಾದ ದೇವೇಂದ್ರ ರೆಡ್ಡಿ, ಯಶ್ ರಾಜ್, ಪ್ರಕಾಶ್ ಮುಂತಾದವರು ಈ ಸಮಾರಂಭಕ್ಕೆ ಆಗಮಿಸಿ ಶುಭ ಕೋರಿದರು.
ವಿಶ್ವಜಿತ್ ರಾವ್ ಬರೆದಿರುವ ಈ ಚಿತ್ರದ ಲಿರಿಕಲ್ ಹಾಡು ಲಹರಿ ಮ್ಯೂಸಿಕ್ ಮೂಲಕ ಬಿಡುಗಡೆಯಾಗಿದೆ‌. ಪ್ರಜ್ವಲ್ ಪೈ ಈ ಚಿತ್ರದ ಸಂಗೀತ ನಿರ್ದೇಶಕರು.

More Buzz

Buzz 4 days ago

ಕೇವಲ ಮೋಷನ್ ಪೋಸ್ಟರ್ ಮೂಲಕವೇ ದೊಡ್ಡ ಕ್ರೇಜ಼್ ಹುಟ್ಟಿಸಿದ ‘ಕೆಂಡ’- ಟೀಸರ್ ಇಲ್ಲಿದೆ ನೋಡಿ

Buzz 5 days ago

ಎರಡನೇ ದಿನವೂ ಪ್ರಭಾಸ್ ನಟನೆಯ ಕಲ್ಕಿ 2898AD ಕಮಾಲ್ – ಎರಡೇ ದಿನದಲ್ಲಿ ಚಿತ್ರ ಗಳಿಸಿದ್ದೆಷ್ಟು ಗೊತ್ತಾ?

BuzzTollywood Buzz 5 days ago

ಈ ಓಟಿಟಿಯಲ್ಲಿ ಶೀಘ್ರವೇ ಬರಲಿದೆ Kalki 2898 AD – ಆದರೂ‌ ಚಿತ್ರದ ಥಿಯೇಟರ್ ಅನುಭವವೇ ಬೇರೆ

Buzzfilm of the dayGalleryTollywood Buzz 1 week ago

ಕಲ್ಕಿ 2898 AD ಟಿಕೆಟ್‌ಗೆ ರಾಜಮೌಳಿ ಕ್ಯೂ ನಿಂತ ಫೋಟೋ ವೈರಲ್ – ಮೂವೀ ಪವರ್ ಎಂದ ನೆಟ್ಟಿಗರು

Buzzfilm of the dayFull MoviesTollywood Buzz 1 week ago

ಸಾಕಷ್ಟು ನಿರೀಕ್ಷೆ ಹುಟ್ಟಿಸಿದ್ದ ಕಲ್ಕಿ 2898 AD ಚಿತ್ರ ಹೇಗಿದೆ? – ಇಲ್ಲಿದೆ ನೋಡಿ ಚುಟುಕು ವಿಮರ್ಶೆ

Buzz 1 week ago

ತರುಣ್‌ ಸುಧೀರ್‌ ಜೊತೆ ಹಸೆಮಣೆ ಏರಲಿದ್ದಾರೆಯೇ ರಾಬರ್ಟ್‌ ಬೆಡಗಿ ಸೋನಲ್!? – ಇಲ್ಲಿದೆ ವೈರಲ್ ಸುದ್ದಿಯ ಅಸಲಿಯತ್ತು

BuzzGalleryTrailers 1 week ago

ಕಲ್ಕಿ 2898 AD ಚಿತ್ರದ ಬುಜ್ಜಿ ಚಲಾಯಿಸಿದ ರಿಷಭ್ ಶೆಟ್ಟಿ – ಇಲ್ಲಿದೆ ನೋಡಿ ಎಕ್ಸ್’ಕ್ಲೂಸಿವ್ ವಿಡಿಯೋ

Buzz 1 week ago

“ಹಾಯ್‌ ಟೈಗರ್, ಹಾಯ್‌ ಬಾಸ್”!!!! – ಜೈಲಿನಲ್ಲಿ ದರ್ಶನ್ ಭೇಟಿ ಮಾಡಿದ್ದು ಯಾರು?

Buzzfilm of the dayFull Movies 2 weeks ago

ಲವ್ಲಿ ಆಗಿ ಜನರ ಮನಸ್ಸು ಗೆದ್ದ ವಸಿಷ್ಟ ಸಿಂಹರ ಲವ್…ಲಿ

Buzz 3 weeks ago

ಚಂದನ್‌ ಶೆಟ್ಟಿ ಹಾಗೂ ನಿವೇದಿತಾ ಗೌಡ ವಿಚ್ಛೇದನಕ್ಕೆ ಕೊನೆಗೂ ಬಯಲಾಯ್ತು ಕಾರಣ – ಇಲ್ಲಿದೆ ನೋಡಿ ಸತ್ಯ

Buzz 3 weeks ago

ಯುವರಾಜ್‌ ಕುಮಾರ್‌ ದಂಪತಿಗಳ ವಿಚ್ಛೇದನಕ್ಕೆ ಸಪ್ತಮಿ ಗೌಡ ಕಾರಣ!!? ಏನಿದು ವಿವಾದ?

Buzz 3 weeks ago

ಸ್ಯಾಂಡಲ್ ವುಡ್ ನಲ್ಲಿ ಕೊಲೆ ಸದ್ದು – ನಟ ದರ್ಶನ್ ತನ್ನ ಅಭಿಮಾನಿಗೆ ಮಾಡಿದ್ದೇನು?

Copyright ©2024 . All Rights Reserved. privacy | terms Whatsapp: 9538193653 Email: hello@flixoye.com