ಉದಯ ಟಿವಿಯ ಹೊಸ ಧಾರಾವಾಹಿ “ಯಾರಿವಳು” ಆಗಸ್ಟ್ ೩೧ರಿಂದ ಸೊಮವಾರದಿಂದ ಶುಕ್ರವಾರ ರಾತ್ರಿ 8ಕ್ಕೆ

Published on

622 Views

ಉದಯ ವಾಹಿನಿಯ ಸತತ ಮನರಂಜನೆಯ ಭಿನ್ನ ಪ್ರಯತ್ನಕ್ಕೆ ಹೊಸದೊಂದು ಧಾರಾವಾಹಿ ಸೇರಲಿದೆ. ನಂದಿನಿ, ಮನಸಾರೆ, ಕಾವ್ಯಾಂಜಲಿ, ಆಕೃತಿ, ಕಸ್ತೂರಿ ನಿವಾಸದಂತಹ ಕೂತೂಹಲಕಾರಿ ಕಥೆಗಳನ್ನು ನೀಡಿದ ವಾಹಿನಿಯ ಹೆಗ್ಗಳಿಕೆ ಹೆಚ್ಚಿಸಲು‘ಯಾರಿವಳು’ ಹೆಸರಿನ ಹೊಸ ಧಾರಾವಾಹಿಯು ವೀಕ್ಷಕರ ಮನೆ ಬಾಗಿಲಿಗೆ ಬರಲಿದೆ. ಯಾರಿವಳು ಆಗಷ್ಟ್‌ ೩೧ ರಿಂದ ಸೋಮವಾರದಿಂದ ಶುಕ್ರವಾರದವರಗೆ ರಾತ್ರಿ ೮ಕ್ಕೆ ಉದಯ ಟಿವಿಯಲ್ಲಿ ಪ್ರಸಾರವಾಗಲಿದೆ.
“ಬದಲಾಗ್ತಿದೆ ಸಮಯ ಬದಲಾಗ್ತಿದೆ ಉದಯ” ಟ್ಯಾಗ್ ಲೈನ್ ಗೆ ಅನುಗುಣವಾಗಿ ʼಯಾರಿವಳುʼ ಕಥೆಯು ಹಿಂದೆAದಿಗಿAತ ಹೊಸರೂಪದಲ್ಲಿ ಅದ್ದೂರಿಯಾಗಿ ಕಿರುತರೆಗೆ ಪಾದಾರ್ಪಣೆ ಆಗಲಿದೆ. ಬೆಳ್ಳಿತೆರೆಯಷ್ಟೇ ಅತ್ಯುತ್ತಮ ಗುಣಮಟ್ಟದ ಕಥೆ, ಚಿತ್ರಕಥೆ, ಮೇಕಿಂಗ್ ಹಾಗೂ ತಾರಾಬಳಗವನ್ನು ಕಥೆ ಒಳಗೊಂಡಿದೆ.

ಶ್ರೀಮಂತ ಮನೆತನಕ್ಕೆ ಸೇರಿದ ಶ್ರೇಷ್ಟ ಸ್ವಂತ ಅಪ್ಪ ಅಮ್ಮನ ಪ್ರೀತಿ ವಂಚಿತ ಮಗು. ಅಪ್ಪ ಪ್ರೀತಿ ತೋರದಿರಲು ಸ್ವಂತ ಮಗಳ ಹೆಸರಲ್ಲಿರುವ ಆಸ್ತಿ. ಇನ್ನು ಸ್ವಂತ ಅಮ್ಮನನ್ನು ಕಾಣೆಯಾಗಿಸಿ ಹೊಸ ಅಮ್ಮನನ್ನು ಇವಳೇ ನಿಮ್ಮಮ್ಮ ಎಂದು ನಂಬಿಸುತ್ತಿರುವ ಅಪ್ಪ. ಈ ಇಬ್ಬರ ಹಿಂಸೆಗೆ ಮೂಲೆ ಗುಂಪಾದವರಲ್ಲಿ ಶ್ರೇಷ್ಟಳ ಅಜ್ಜ ದೇವರಾಯ ಕೂಡ. ಶ್ರೇಷ್ಟಳ ಕಷ್ಟಕ್ಕೆ ಬೆನ್ನೆಲುಬಾಗಿ ಮಂಗಳಮುಖಿಯೊಬ್ಬಳು ಈ ಕಥೆಯಲ್ಲಿ ಮಹತ್ವದ ಪಾತ್ರವನ್ನು ನಿರ್ವಹಿಸುತ್ತಿರುವುದು ವಿಶೇಷ. ಈ ವಿಶೇಷ ಪಾತ್ರದ ಜೊತೆಗೆ ಪೋಷಕ ಪಾತ್ರಗಳಿಗೆ ತಂಡವು ಮಂಗಳಮುಖಿ ಸಮುದಾಯದ ಸದಸ್ಯರನ್ನೇ ಆಯ್ಕೆ ಮಾಡಿಕೊಂಡಿರುವುದು ಈ ಧಾರಾವಾಹಿಯ ಹೆಗ್ಗಳಿಕೆಯಾಗಿದೆ.

ಇದೆಲ್ಲ ಒಂದೆಡೆಯಾದ್ರೆ ಮತ್ತೊಂದೆಡೆ ನಮ್ಮ ಕಥಾನಾಯಕಿ ಮಾಯಾ, ಆಂಜನೇಯನ ಪರಮ ಭಕ್ತೆ. ಏಲ್ಲ ಕೆಲಸದಲ್ಲೂ ಭಜರಂಗಿಯನ್ನು ನೆನಯುವ ಇವಳು ಭಂಡ ಧೈರ್ಯದಿಂದ ಮುನ್ನುಗ್ಗುವ ಸ್ವಭಾವದವಳು. ಇವಳು ಮತ್ತು ಮಗು ಶ್ರೇಷ್ಟಳ ಸ್ವಂತ ಅಮ್ಮ ಅಹಲ್ಯ ನೋಡಲು ಒಂದೇ ತರ ಇದ್ದು, ಇವರಿಬ್ಬರಿಗಿರುವ ಅವಿನಾಭಾವ ಸಂಬAಧವನ್ನು ಕಥೆಯಲ್ಲಿ ಹೆಣೆಯಲಾಗಿದೆ. ಅಹಲ್ಯ ತರ ಇರುವ ಮಾಯಾ ಯಾರು? ಮಾಯಾ ಹಿಂದಿನ ಕಥೆಯೇನು? ಯಾರಿವಳು ಎಂಬ ಶೀರ್ಷಿಕೆಗೆ ಉತ್ತರ ಈ ಕಥೆಯಲ್ಲಡಗಿದೆ.

ಬಾಹುಬಲಿ ಸರಣಿ ಚಿತ್ರಗಳನ್ನು ಹಾಗೂ ಬಾಲಿವುಡ್ ಕ್ಷೇತ್ರದಲ್ಲಿ ಜನಪ್ರಿಯ ಹೈ ಬಜೆಟ್ ಧಾರಾವಾಹಿಗಳನ್ನು ಕೊಟ್ಟ ನಿರ್ಮಾಣ ಸಂಸ್ಥೆ ಅರ್ಕಾ ಮೀಡಿಯಾ ಧಾರಾವಾಹಿಯನ್ನು ನಿರ್ಮಿಸುತ್ತಿದ್ದು ದರ್ಶಿತ್ ಭಟ್ ನಿರ್ದೇಶಿಸುತ್ತಿದ್ದಾರೆ. ಮಂಡ್ಯ ಮಂಜು ಅವರ ಛಾಯಾಗ್ರಹಣವಿದೆ. ಕಥಾನಾಯಕಿಯಾಗಿ ಬ್ಯೂಟಿಫುಲ್ ಮನಸುಗಳು, ಕಮರೊಟ್ಟು ಚೆಕ್‌ಪೋಸ್ಟ್, ವೆನಿಲ್ಲಾ, ಕಟ್ಟುಕಥೆ ಸಿನಿಮಾಗಳಲ್ಲಿ ಮುಖ್ಯ ಪಾತ್ರಗಳನ್ನು ನಿರ್ವಹಿಸಿದ ಸ್ವಾತಿ ಕೊಂಡೆ ಮಾಯಾ ಪಾತ್ರವನ್ನು, ಕಥಾ ನಾಯಕ ನಿಖಿಲ್ ಪಾತ್ರವನ್ನು ನಂದಿನಿ ಧಾರಾವಾಹಿ ಖ್ಯಾತಿಯ ಆರವ್ ಸೂರ್ಯ ನಿರ್ವಹಿಸುತ್ತಿದ್ದು ಶ್ರೇಷ್ಟ ಪಾತ್ರವನ್ನು ಜಂಟಲ್‌ ಮ್ಯಾನ್‌ ಸಿನೇಮಾ ಖ್ಯಾತಿಯ ಬಾಲ ನಟಿ ಆರಾಧ್ಯ ನಿರ್ವಹಿಸುತ್ತಿದ್ದಾರೆ. ಕಥೆಯ ಖಳ ಪಾತ್ರಗಳನ್ನು ಅಂಬರೀಶ್ ಸಾರಂಗಿ ಹಾಗೂ ಶರ್ಮಿತಾ ನಿರ್ವಹಿಸುತ್ತಿದ್ದು, ಮುಖ್ಯ ಭೂಮಿಕೆಯಲ್ಲಿ ಹಿರಿಯಕಲಾವಿದ ಅಶೋಕ ಹೆಗಡೆ, ಬಾಲರಾಜ್, ವಾಣಿಶ್ರೀ, ದೀಪಾ ಪಾರ್ವತಿ, ನಾಗರಾಜ್ ಭಟ್, ಮಂಗಳಮುಖಿ ಪಾತ್ರಧಾರಿಗಳಾಗಿ ಸನಾ ಸುಮನ್ ಹಾಗೂ ಲೋಹಿತ್ ಪಟೇಲ್ ಇದ್ದಾರೆ.
ಇದೇ ಆಗಸ್ಟ್ ೩೧ರಿಂದ ಸೋಮವಾರದಿಂದ ಶುಕ್ರವಾರ ರಾತ್ರಿ ೮ಕ್ಕೆ ಉದಯ ಟಿವಿಯಲ್ಲಿ “ಯಾರಿವಳು” ಪ್ರಾರಂಭವಾಗಲಿದೆ.

More Buzz

Buzz 4 days ago

Swastik Productions celebrates the iconic success of Shrimad Ramayan and the grand launch of Veer Hanuman

Trailers 10 months ago

Rudra Garuda Purana Official Teaser Starring Rishi, Priyanka

Trailers 10 months ago

Pepe Kannada Movie Trailer Starring Vinay Rajkumar

BuzzKollywood Buzz 10 months ago

The GOAT Movie: Trailer ಗೂ ಟ್ರೈಲರ್ ರಿಲೀಸ್ ಮಾಡಿದ ವಿಜಯ್ ನಟನೆಯ ಚಿತ್ರತಂಡ

Buzz 10 months ago

Daali Pictures: ವಿದ್ಯಾಪತಿ ಮೂಲಕ ಕರಾಟೆ ಕಿಂಗ್ ಆದ ನಾಗಭೂಷಣ, ಪ್ರೊಮೋ ಬಗ್ಗೆ ಸಿಕ್ತು ಬಿಗ್ ಅಪ್ ಡೇಟ್

BuzzTrailers 10 months ago

Laughing Buddha Trailer – ಪ್ರಮೋದ್ ಶೆಟ್ರ ಡೊಳ್ಳೊಟ್ಟೆ ಪೊಲೀಸ್ ಪಾತ್ರ ನೋಡಿದ್ರಾ? ಟ್ರೈಲರ್ ಇಲ್ಲಿದೆ ನೋಡಿ.

Buzz 10 months ago

Samarjith Lankesh: ಇಂದ್ರಜಿತ್ ಲಂಕೇಶ್ ಮಗನ ಜೊತೆ ಹುಚ್ಚೆದ್ದು ಕುಣಿದು ‘ಕಿಸ್’ ಕೊಟ್ಟ ಉಪೇಂದ್ರ – ವೈರಲ್ ವಿಡಿಯೋ ಇಲ್ಲಿದೆ!

Buzz 10 months ago

Abhishek Aishwarya Divorce – ನಾವು ಡಿವೋರ್ಸ್ ಪಡೆಯಲಿದ್ದೇವೆ ಎಂದ ಅಭಿಷೇಕ್‌ ಬಚ್ಚನ್ ವಿಡಿಯೋ ವೈರಲ್ – ಅಸಲಿಯತ್ತೇನು?

Buzz 10 months ago

Tharun Sonal Marriage: ಸಪ್ತಪದಿ ತುಳಿಯಲಿರುವ ತರುಣ್ – ಸೋನಲ್, ನಟಿ ನಿರ್ದೇಶಕ ಜೋಡಿಗೆ ಹಲವಾರು ಗಣ್ಯರ ಆಶೀರ್ವಾದ

Buzz 10 months ago

Bheema Movie Review: ಫುಲ್ ಆಕ್ಷನ್, ಸ್ಟಾರ್ಟ್ ಟು ಎಂಡ್ ಸಖತ್ ಮಾಸ್ – ದುನಿಯಾ ವಿಜಿ ಭೀಮ ಥಿಯೇಟರ್ ಕಿಂಗ್

BuzzTollywood Buzz 10 months ago

Naga Chaithanya – Shobhitha Dhulipala: ದೀರ್ಘಕಾಲದ ಗೆಳತಿಯೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡ ಸಮಂತಾ ಮಾಜಿ ಪತಿ ನಾಗಚೈತನ್ಯ

BuzzTollywood Buzz 10 months ago

Mr.Bachchan ಆದ ರವಿತೇಜ – ಚಿತ್ರದ ಟ್ರೈಲರ್ ನಲ್ಲಿ ‘ಮಾಸ್ ಮಹಾರಾಜ’ನ ಕಮಾಲ್

Copyright ©2025 . All Rights Reserved. privacy | terms Whatsapp: 9538193653 Email: hello@flixoye.com