ಅಂಜನಾನಗರದಲ್ಲಿನ ಲಕ್ಷ್ಮೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ‘ಸೂಪರ್ ಸ್ಟಾರ್’ ಚಿತ್ರಕ್ಕೆ ಅದ್ಧೂರಿ ಮುಹೂರ್ತ

Published on

415 Views

ಅದ್ಧೂರಿ ಮುಹೂರ್ತ ಮುಗಿಸಿಕೊಂಡಿರುವ ‘ಸೂಪರ್ ಸ್ಟಾರ್‌’ ಸಿನಿಮಾಕ್ಕೆ ನಿರ್ದೇಶಕ ವೆಂಕಟೇಶ್ ಬಾಬು ಅವರ ತಾಯಿ ಶ್ರೀಮತಿ ಗೌರಮ್ಮ ಮುನಿಯಪ್ಪನವರು ಕ್ಲಾಪ್ ಹಾಗೂ ಶ್ರೀಮತಿ ಲಕ್ಷ್ಮೀ ಕ್ಯಾಮರಾಕ್ಕೆ ಚಾಲನೆ ನೀಡುವ ಮೂಲಕ ಚಿತ್ರದ ಚಿತ್ರೀಕರಣಕ್ಕೆ ಚಾಲನೆ ನೀಡಿದ್ದರು. ಮೊದಲ ಬಾರಿಗೆ ನಾಯಕ ನಟರಾಗಿ ನಿರಂಜನ್ ಅಭಿನಯಿಸುತ್ತಿದ್ದು, ಈ ಚಿತ್ರದಲ್ಲಿ ಖ್ಯಾತ ಡ್ಯಾನ್ಸ್ ಮಾಸ್ಟರ್ ಮೂಗೂರು ಸುಂದರ್ ಚಿತ್ರದಲ್ಲಿಯೂ ಡ್ಯಾನ್ಸ್ ಮಾಸ್ಟರ್ ಆಗಿ ಕಾಣಿಸಿಕೊಳ್ಳಲಿದ್ದಾರೆ.

ಸಿನಿಮಾದ ಬಗ್ಗೆ ಮಾತನಾಡಿದ ನಟ ಉಪೇಂದ್ರ “ಯಾರು ಸುಮ್ಮನೆ ಸೂಪರ್ ಸ್ಟಾರ್ ಆಗಲು ಸಾಧ್ಯವಿಲ್ಲ. ಅದೊಂದು‌ ದೊಡ್ಡ ಪದವಿ. ಎರಡು ವರ್ಷಗಳಿಂದ ಚಿತ್ರತಂಡ ತುಂಬ ಶ್ರಮವಹಿಸಿದೆ. ನಿರ್ದೇಶಕರು, ನಿರ್ಮಾಪಕರು, ಹೀರೋ ಎಲ್ಲರೂ ಶಕ್ತಿ ಮೀರಿ ಶ್ರಮ ಹಾಕುತ್ತಿದ್ದಾರೆ. ಜಿಮ್ ,ಡ್ಯಾನ್ಸ್‌, ಡ್ರಾಮಾ ಹೀಗೆ ಹೀರೋ ನಿರಂಜನ್ ಸಿನಿಮಾಕ್ಕಾಗಿ ತುಂಬಾನೇ ಶ್ರಮ ಹಾಕುತ್ತಿದ್ದಾನೆ. ಶ್ರಮಪಟ್ಟರೆ ಯಶಸ್ಸು ಖಂಡಿತಾ ಸಿಗುತ್ತದೆ” ಎಂದರು.

ಸಿನಿಮಾಕ್ಕೆ ಯಶ್, ಪುನೀತ್ ರಾಜಕುಮಾರ್,ಶಿವಣ್ಣ, ಶ್ರೀಮುರಳಿ, ಪ್ರೇಮ್ ಶುಭಕೋರಿದ್ದು, ಇನ್ನು ಚಿತ್ರದ ಲಿರಿಕಲ್ ವಿಡಿಯೋ ವನ್ನು ಲವ್ಲಿ ಸ್ಟಾರ್ ಪ್ರೇಮ್ ಬಿಡುಗಡೆ ಮಾಡಿದರು. ನಿರ್ಮಾಪಕ ಮೈಲಾರಿರವರಿಗೆ ಉಪೇಂದ್ರರವರ ಕುಟುಂಬ ಪೂರ್ಣ ಸಹಕಾರ ನೀಡಿದ್ದು, ಇದು ಚಿತ್ರಕ್ಕೆ ಇನ್ನಷ್ಟು ಬೆಂಬಲ ಸಿಕ್ಕಿದಂತಾಗಿದೆ. ಭರ್ಜರಿ‌ ಚೇತನ್ ಚಿತ್ರದ ಎಲ್ಲ ಹಾಡಿಗೂ ಸಾಹಿತ್ಯ ಬರೆದಿದ್ದು ರಾಘವೇಂದ್ರ ವಿ. ಸಂಗೀತ ನೀಡಿದ್ದಾರೆ. ತಾರಾಗಣದ ಆಯ್ಕೆ ನಡೆಯುತ್ತಿದೆ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com