“ಶ್ವೇತಾ ಪ್ರಸಾದ್” ತೆರೆಯ ಹಿಂದಿನ ಬದುಕಿನತ್ತ ಇಣುಕು ನೋಟ

Published on

590 Views

ತುತ್ತಾ ಮುತ್ತಾ ಇದೇ ಶನಿವಾರ ರಾತ್ರಿ 9ಕ್ಕೆ

ಉದಯ ಟಿವಿಯಲ್ಲಿ ಪ್ರಸಾರವಾಗುವ ಸೂಪರ್ ಹಿಟ್ ಷೋ “ತುತ್ತಾ ಮುತ್ತಾ”ದ ಈ ವಾರದ ಸಂಚಿಕೆಯಲ್ಲಿ ವಿಶೇಷ ಅತಿಥಿಯಾಗಿ ಧಾರಾವಾಹಿಯ ನಟಿಯಾದ ಶ್ವೇತಾ ಪ್ರಸಾದ್, ಪತಿ ಆರ್.ಜೆ.ಪ್ರದೀಪ ಹಾಗೂ ತಾಯಿಯೊಂದಿಗೆ ಕಾಣಿಸಿಕೊಳ್ಳಲಿದ್ದಾರೆ.

ಈ ಕಾರ್ಯಕ್ರಮದಲ್ಲಿ ಸಾಮಾನ್ಯವಾಗಿ ಗಂಡಸರು ತಮಗೆ ತುತ್ತು ನೀಡಿದ ತಾಯಿ ಮತ್ತು ಮುತ್ತು ನೀಡಿದ ಹೆಂಡತಿಯೊಂದಿಗೆ ಕಾಣಿಸಿಕೊಳ್ಳುತ್ತಿದ್ದರು, ಆದರೆ ಈ ವಾರ ಶ್ವೇತಾರವರು ತಮ್ಮ ಪತಿ ಹಾಗು ತಾಯಿಯೊಂದಿಗೆ ಕಾಣಿಸಿಕೊಳ್ಳಲಿದ್ದಾರೆ.

ಶ್ವೇತಾರವರು ಸಣ್ಣ ಪರದೆಯಲ್ಲಿ ಎಲ್ಲರ ಮನೆಮಾತಾಗಿದ್ದರೇ,ಪ್ರತಿ ಮನೆಯ ಮೂಲೆಗೂ ತಮ್ಮ ಧ್ವನಿಯಿಂದ ಜನಪ್ರಿಯತೆ ಪಡೆದವರು ಆರ್.ಜೆ.ಪ್ರದೀಪ. ಇವರಿಬ್ಬರು ಗೆಳೆತನ ಪ್ರೀತಿಗೆ ಹೇಗೆ ಬದಲಾಯಿತೆಂದು ಕಾರ್ಯಕ್ರಮದಲ್ಲಿ ಹೇಳಿಕೊಂಡರು. ಕಾಲೇಜಿನಲ್ಲಿ ಸ್ನೇಹಿತರಾಗಿದ್ದೇವು. ಅವನೇ ಮೊದಲು ನನ್ನ ಪ್ರೀತಿಸುವುದಾಗಿ ಹೇಳಿಕೊಂಡ. ಒಂದು ಸಂಜೆ ನಾವು ಮಳೆಯಲ್ಲಿ ನಡೆದ ಹೋಗುತ್ತಿದ್ದಾಗ ಆತ ರೇಡಿಯೋದಲ್ಲಿ ನನಗಾಗಿ ಒಂದು ಹಾಡನ್ನು ಅರ್ಪಿಸಿ ತನ್ನ ಭಾವನೆಗಳನ್ನು ಹಂಚಿಕೊಂಡ ನಾನು ಅದಕ್ಕೆ ಗಮನ ನೀಡಲಿಲ್ಲ. ಯಾವಾಗ ಅವನು ನನಗೂ ತಿಳಿಸದೇ ನಮ್ಮ ಮನೆಗೆ ಹೋಗಿ, ನನ್ನ ತಾಯಿ ತಂದೆಗೆ ಕೇಳಿಕೊಂಡನೋ, ಅಂದೆ ಅವರ ಪ್ರೀತಿಯ ಅರಿವಾಗಿದ್ದು ಎಂದು ಹಂಚಿಕೊಂಡರು.

ಪ್ರದೀಪನ ಮನೆಯ ಸಂಪ್ರದಾಯದ ಪ್ರಕಾರ ಅರಿಶಿನ ಶಾಸ್ತ್ರವು ಇಲ್ಲದ ಕಾರಣ. ಅವರ ಮದುವೆಯಲ್ಲಿ ಆ ಶಾಸ್ತ್ರವು ನಡೆಯಲಿಲ್ಲ. ಇದು ಶ್ವೇತಾ ಹಾಗು ತನ್ನ ತಾಯಿಗೆ ಮನಸ್ಸಲ್ಲಿಯೇ ಕುಳಿತಿತ್ತು ಅದನ್ನು ತುತ್ತಾ ಮುತ್ತಾ ಕಾರ್ಯಕ್ರಮದಲ್ಲಿ ಹೇಳಿಕೊಂಡರು. ಆಗ ತುತ್ತಾ ಮುತ್ತಾ ತಂಡ ಈ ಸಂಚಿಕೆಯಲ್ಲಿ ಶ್ವೇತಾರವರಿಗೆ ಅರಿಶಿನದ ಶಾಸ್ತ್ರವನ್ನು ಏರ್ಪಡಿಸಿ ತಾಯಿ ಮಗಳಿಬ್ಬರನ್ನು ಸಂತೋಷಪಡಿಸಿದರು. ಇಂತಹ ಸುಂದರ ದಂಪತಿಯ ಬಗ್ಗೆ ಹೆಚ್ಚು ತಿಳಿಯಲು ಈ ವಾರದ ತುತ್ತಾ ಮುತ್ತಾ ಸಂಚಿಕೆಯನ್ನು ಇದೇ ಶನಿವಾರ ರಾತ್ರಿ 9 ಗಂಟೆಗೆ ಉದಯ ಟಿವಿಯಲ್ಲಿ ವೀಕ್ಷಿಸಿ.

“ತುತ್ತಾ ಮುತ್ತಾ” ಇದೇ ಶನಿವಾರ ರಾತ್ರಿ 9ಕ್ಕೆ ಉದಯ ಟಿವಿಯಲ್ಲಿ ಪ್ರಸಾರವಾಗುತ್ತದೆ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com