ಸದಾ ನಿಮ್ಮೋಂದಿಗೆಯಲ್ಲಿ “ರಾಜೇಶ್ ಕೃಷ್ಣನ್” ಇದೇ ಭಾನುವಾರ (28.10.18) ರಾತ್ರಿ 9ಕ್ಕೆ

Published on

456 Views

ಸದಾ ನಿಮ್ಮೊಂದಿಗೆ ಕಾರ್ಯಕ್ರಮದ ಕಳೆದ ಸಂಚಿಕೆಯಲ್ಲಿ ತುಪ್ಪದ ಹುಡಗಿ ರಾಗಿಣಿಯವರು ವಿನೋದ್ ಎಂಬ ಅಂಧರಿಗೋಸ್ಕರ ಮಾವಿನಕಾಯಿ, ಸೌತೆಕಾಯಿ ಮಾರಾಟ ಮಾಡಿ ಹಣ ಸಂಪಾದಿಸಿ ಸಹಾಯ ಮಾಡಿದ್ದರು.

ಅದೇ ರೀತಿ ಈ ವಾರದ ನಮ್ಮ ಸದಾ ನಿಮ್ಮೊಂದಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಿರುವವರು ನಮ್ಮ ಸದಾ ನಿಮ್ಮೊಂದಿಗೆ ಧ್ವನಿ. ಅಂದರೆ “ಸದಾ ನಿಮ್ಮೋಂದಿಗೆ” ಟೈಟಲ್ ಸಾಂಗ್‍ನ್ನು ಹಾಡಿದವರು ರಾಜೇಶ್ ಕೃಷ್ಣನ್. ಇವರು ಒಬ್ಬ ಕಲಾವಿದರಾಗಿ ಮತ್ತೊಬ್ಬ ಕಲಾವಿದನ ಕಷ್ಟಕ್ಕೆ ಸ್ಪಂದಿಸಿದ್ದಾರೆ. ನಾಗರಾಜ್ ಎಂಬ ಅಧ್ಬುತ ಚಿತ್ರ ಕಲಾವಿದನಿಗೆ ಆರೋಗ್ಯದಲ್ಲಿ ತೊಂದರೆಯಾಗಿ ಓಪನ್ ಹಾರ್ಟ್ ಸರ್ಜರಿಯಾಗಿದೆ. ವೈದ್ಯರು ಈಗ ಸ್ವಲ್ಪ ಸಮಯದವರೆಗೆ ವಿಶ್ರಾಂತಿ ಪಡೆಯಲು ಹೇಳಿದ್ದರಿಂದ ಕುಟುಂಬದ ಆಧಾರ ಸ್ತಂಬವಾಗಿರುವ ಇವರಿಗೆ ಚಿಂತೆಗೀಡುಮಾಡಿದೆ. ಇವರಿಗೆ ಚಿತ್ರಕಲೆಯೇ ಜೀವನಕ್ಕೆ ಆಧಾರ. ಈ ಕಲೆಯಿಂದಾನೇ ಹೆಂಡತಿ ಹಾಗೂ ಮಕ್ಕಳನ್ನ ಸಾಕಬೇಕಾಗಿದೆ. ಈಗಾಗಲೇ ಒಬ್ಬ ಹೆಣ್ಣು ಮಗಳ ಮದುವೆ ಮಾಡಿದ್ದಾರೆ.

ಈಗ ಇವರ ಕಷ್ಟಕ್ಕೆ ನಮ್ಮ ರಾಜೇಶ್ ಕೃಷ್ಣನ್ ಶೇಷಾದ್ರಿಪೂರಂ ಕಾಲೇಜ್‍ನಲ್ಲಿ ಸಂಗೀತ ಕಾರ್ಯಕ್ರಮವನ್ನು ನೀಡಿದ್ದಾರೆ.ಅಲ್ಲಿ ಅವರರಿಗೆ ಬಂದ ಹಣವನ್ನು ನಾಗರಾಜರವರ ಜೀವನಕ್ಕಾಗಿ ಸಹಾಯ ಮಾಡಿದ್ದಾರೆ.
ಹಾಗಾದರೆ ಕಾಲೇಜ್‍ನಲ್ಲಿ ಸಂಗ್ರಹವಾದ ಹಣವೇಷ್ಟು? ಎಂಬುದನ್ನು ಈವಾರದ “ಸದಾ ನಿಮ್ಮೋಂದಿಗೆ” ಸಂಚಿಕೆಯಲ್ಲಿ ನೋಡಬಹುದಾಗಿದೆ.

“ಸದಾ ನಿಮ್ಮೊಂದಿಗೆ” ಇದೇ ಭಾನುವಾರ ರಾತ್ರಿ 9ಕ್ಕೆ ಉದಯ ಟಿವಿಯಲ್ಲಿ ಪ್ರಸಾರವಾಗುತ್ತದೆ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com