ಚಂದನವನಕ್ಕೊಬ್ಬ ಸದಭಿರುಚಿಯ ನಿರ್ಮಾಪಕ

Published on

352 Views

`ಮದುವೆ ಮಾಡ್ರಿ ಹೋಗ್ತಾನೆ’ ಎಂಬ ಡಿಫೆರೆಂಟ್ ಕಥಾಹಂದರದ ಚಿತ್ರ ಈಗಾಗಲೇ ಟೀಸರ್‍ನಿಂದ ಸಾಕಷ್ಟು ಸೌಂಡು ಮಾಡ್ತಿದೆ. ರಂಗನಟ ಗೋಪಿಕೆರೂರ್ ನಿರ್ದೇಶನದ ಈ ಚಿತ್ರಕ್ಕೆ ಗಂಗಾವತಿಯ ಶಿವರಾಜ್ ದೇಸಾಯಿಯವರು ಬಂಡವಾಳ ಹೋಡಿದ್ದಾರೆ. ಮೊಟ್ಟಮೊದಲಬಾರಿಗೆ ಚಿತ್ರರಂಗಕ್ಕೆ ಕಾಲಿಡುತ್ತಿರುವ ಈ ನವ ನಿರ್ಮಾಪಕರ ಬಾಳು-ಬವಣೆ, ಸೋಲುಗೆಲುವುಗಳ ಬಗ್ಗೆ ಒಂದಿಷ್ಟು ತಿಳ್ಕೋಳ್ಳೋಣ. ಸರಿ ಸುಮಾರು ಹನ್ನೆರಡು ವರ್ಷಗಳ ಕಾಲ ಟೆಲಿಫೋನ್ ರಂಗದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದ ಶಿವಾರಜ್, ನಂತರದಲ್ಲಿ ಬೆಂಗಳೂರುನಲ್ಲಿ ಸ್ಟಾಕಿಸ್ಟ್ ಆಗಿ ತಮ್ಮ ಸ್ವಂತ ವ್ಯವಹಾರವನ್ನು ಆರಂಭಿಸಿದರು. ನಾಲ್ಕೈದು ವರ್ಷಗಳಿಂದ ಸ್ನೇಹಿತರಾಗಿದ್ದ ಗೋಪಿಯವರು ಶಿವರಾಜ್ ಅವರಿಗೆ ಚಿತ್ರದ ಟೈಟಲ್ ಮತ್ತು ಕಥೆಯ ಒಂದೆಳೆ ಹೇಳಿದಾಗ ಇಷ್ಟಪಟ್ಟು ಚಿತ್ರ ನಿರ್ಮಾಣಮಾಡಲು ಒಪ್ಪಿಕೊಂಡರು.

ಸಂಪೂರ್ಣವಾಗಿ ಉತ್ತರ ಕರ್ನಾಟಕದ ಬ್ಯಾಕ್‍ಡ್ರಾಪ್‍ನಲ್ಲಿ ಅಲ್ಲಿಯದೇ ಭಾಷೆಯ ಸೊಗಡಿನ ಚಿತ್ರವದ್ದಾರಿಂದ ಶಿವರಾಜ್ ಅವರಿಗೆ ಹೊಸ ಒಂದು ಪ್ರಯೋಗ ಎಂದೆನಿಸಿ ಒಪ್ಪಿಕೊಂಡ ನಿರ್ಮಾಣದ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ಮಾಡಿ ಮುಗಿಸಿದ್ದಾರೆ. ಶಿವರಾಜ್ ಅವರು ಚಿತ್ರದ ಚಿತ್ರಕಥೆ ಬರೆಯುವ ಸಮಯದಿಂದಲೇ ಚಿತ್ರತಂಡದ ಜೊತೆಗಿದ್ದು, ಚಿತ್ರ ತಯಾರಾಗುವ ಪ್ರತೀ ಹಂತದಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಇಷ್ಟೇ ಅಲ್ಲದೆ ಪ್ರತಿಯೊಂದು ಟೆಕ್ನೀಶಿಯನ್‍ಗೆ ಕಥೆಯ ಬ್ಗೆ ಎಷ್ಟು ಹಿಡಿತವಿದಿಯೋ ಅಷ್ಟೇ ಹಿಡಿತ ಲೋಕೆಶನ್ ಮೇಲೂ ಇರಬೇಕು ಅನ್ನುವ ಉದ್ದೇಶಕ್ಕೆ ಇಡೀತಂಡಕ್ಕೆ ಲೋಕೆಶನ್‍ಗಳ ಪರಿಚಯ ಮಾಡಿಕೊಟ್ಟಿದ್ದರು ಶಿವರಾಜ್. ಇದರಿಂದ ಸಂಗೀತ-ನೃತ್ಯ-ಛಾಯಾಗ್ರಹಣ.. ಹೀಗೆ ಎಲ್ಲಾ ವಿಭಾಗದಲ್ಲಿ ದುಡಿದವರಿಗೆ ನಿರ್ದೇಶಕರ ವಿಷನ್ ಅನ್ನು ಅರ್ಥಮಾಡಿಕೊಳ್ಳಲು ಸುಲಭವಾಯಿತು. ಸ್ವತಃ ಸಂಗೀತ ಪ್ರಿಯರಾಗಿದ್ದ ಶಿವರಾಜ್ ಅವರು ತಮ್ಮ ಚೊಚ್ಚಲ ಚಿತ್ರದಲ್ಲೂ ಸಂಗೀತಕ್ಕೆ ಸಾಕಷ್ಟು ಒತ್ತು ಕೊಟ್ಟಿದ್ದಾರೆ. ಚಿತ್ರದ ಬಂಡವಾಳವನ್ನು ಲೆಕ್ಕಿಸದೆ ಮೊದಲ ಚಿತ್ರಕ್ಕೆ ದುಬಾರಿ ವೆಚ್ಚದ ಲೈವ್ ಮ್ಯೂಸಿಕ್ ಅನ್ನು ಮಾಡಿಸಿರುವ ನಿಮಾಕರು, ಯಾವುದೇ ವಿಚಾರದಲ್ಲಿ ಕಾಂಪ್ರಮೈಸ್ ಆಗಿದೆ ಬೆಸ್ಟ್ ಔಟ್‍ಪುಟ್ ಹೊರತಂದಿದ್ದಾರೆ. ಚಿತ್ರದ ನಾಯಕ-ನಾಯಕಿ ಹೊಸಬರಾದರೂ ಚಿತ್ರದಲ್ಲಿ ಹಲವಾರು ಸೀನಿಯರ್ ನಟರನ್ನು ಮತ್ತು ಅನುಭವೀ ಟೆಕ್ನಿಶಿಯನ್ ಇರೋದ್ರಿಂದ ಇದೊಂದು ರೀತಿಯಲ್ಲಿ ಕಂಪ್ಲೀಟ್ ಪ್ಯಾಕೆಜ್‍ನ ಚಿತ್ರ ಅನ್ನೋದು ಶಿವರಾಜ್ ಅವರ ಮಾತು. ಇನ್ನು ಈ ಕಥೆಗೆ ಹೊಸ ನಾಯಕ-ನಾಯಕಿಯರೇ ಹೆಚ್ಚು ಸೂಕ್ತವಾಗಿದ್ರಿಂದ ಹೊಸಬರನ್ನೇ ಆಯ್ಕೆ ಮಾಡಾಲಾಗಿದೆ. ನಿರ್ಮಾಪಕರು ನಂಬಿದ್ದ ನಾಯಕ-ನಾಯಕಿ ಇಬ್ಬರೂ ತಮ್ಮ ಪಾತ್ರವನ್ನು ಜಸ್ಟೀಫೈ ಮಾಡಿರೋದು ಚಿತ್ರದ ಬಹುದೊಡ್ಡ ಶಕ್ತಿಯಾಗಲಿದೆ. “ಕೇವಲ ಬಾಕ್ಸ್‍ಆಫೀಸ್‍ನಲ್ಲಿ ದುಡ್ಡುಮಾಡಿದ್ರೇ ಮಾತ್ರ ಚಿತ್ರ ಸಕ್ಸಸ್ ಅನ್ನೋದು ತಪ್ಪು.. ಚಿತ್ರ ನನಗೆ ತೃಪ್ತಿ ತಂದಿದೆ.. ಸಾಕಷ್ಟು ಹೊಸ ಕಲಿಕೆಗೆ ದಾರಿ ಮಾಡಿಕೊಟ್ಟಿದೆ ಹೀಗಿರುವಾಗ.. ನಾನಾಗಲೇ ಗೆದ್ದಿದ್ದೇನೆ’ ಎಂದು ನಗೆಬೀರುವ ಶಿವರಾಜ್‍ರಂತಹ ಪ್ರಮಾಣಿಕ ನಿರ್ಮಾಪರು ಗೆಲ್ಲಬೇಕು. ಇಂತಹವರು ಗೆದ್ದಿದ್ದೇ ಆದರೆ ಇನ್ನಷ್ಟು ಚಿತ್ರಗಳು ಸೆಟ್ಟೇರಿ, ಇವರಿಂದಾಗಿ ಒಂದಷ್ಟು ಕ್ರಿಯೇಟೀವ್ ಮನಸ್ಸುಗಳಿಗೆ ಬಾಳು ಸಿಗುತ್ತದೆ. ಇಷ್ಟರಲ್ಲಿಯೇ ಚಿತ್ರ ಆಡಿಯೋ ರಿಲೀಸ್ ಎಲಾ ಸಿದ್ಧತೆಯನ್ನು ಮಾಡಿಕೊಂಡಿರುವ ಚಿತ್ರತಂಡ ಪೆಭ್ರವರಿಯಲ್ಲಿ ತೆರೆಗೆ ಬರಲಿದೆ.

More Buzz

Buzz 3 days ago

Swastik Productions celebrates the iconic success of Shrimad Ramayan and the grand launch of Veer Hanuman

Trailers 10 months ago

Rudra Garuda Purana Official Teaser Starring Rishi, Priyanka

Trailers 10 months ago

Pepe Kannada Movie Trailer Starring Vinay Rajkumar

BuzzKollywood Buzz 10 months ago

The GOAT Movie: Trailer ಗೂ ಟ್ರೈಲರ್ ರಿಲೀಸ್ ಮಾಡಿದ ವಿಜಯ್ ನಟನೆಯ ಚಿತ್ರತಂಡ

Buzz 10 months ago

Daali Pictures: ವಿದ್ಯಾಪತಿ ಮೂಲಕ ಕರಾಟೆ ಕಿಂಗ್ ಆದ ನಾಗಭೂಷಣ, ಪ್ರೊಮೋ ಬಗ್ಗೆ ಸಿಕ್ತು ಬಿಗ್ ಅಪ್ ಡೇಟ್

BuzzTrailers 10 months ago

Laughing Buddha Trailer – ಪ್ರಮೋದ್ ಶೆಟ್ರ ಡೊಳ್ಳೊಟ್ಟೆ ಪೊಲೀಸ್ ಪಾತ್ರ ನೋಡಿದ್ರಾ? ಟ್ರೈಲರ್ ಇಲ್ಲಿದೆ ನೋಡಿ.

Buzz 10 months ago

Samarjith Lankesh: ಇಂದ್ರಜಿತ್ ಲಂಕೇಶ್ ಮಗನ ಜೊತೆ ಹುಚ್ಚೆದ್ದು ಕುಣಿದು ‘ಕಿಸ್’ ಕೊಟ್ಟ ಉಪೇಂದ್ರ – ವೈರಲ್ ವಿಡಿಯೋ ಇಲ್ಲಿದೆ!

Buzz 10 months ago

Abhishek Aishwarya Divorce – ನಾವು ಡಿವೋರ್ಸ್ ಪಡೆಯಲಿದ್ದೇವೆ ಎಂದ ಅಭಿಷೇಕ್‌ ಬಚ್ಚನ್ ವಿಡಿಯೋ ವೈರಲ್ – ಅಸಲಿಯತ್ತೇನು?

Buzz 10 months ago

Tharun Sonal Marriage: ಸಪ್ತಪದಿ ತುಳಿಯಲಿರುವ ತರುಣ್ – ಸೋನಲ್, ನಟಿ ನಿರ್ದೇಶಕ ಜೋಡಿಗೆ ಹಲವಾರು ಗಣ್ಯರ ಆಶೀರ್ವಾದ

Buzz 10 months ago

Bheema Movie Review: ಫುಲ್ ಆಕ್ಷನ್, ಸ್ಟಾರ್ಟ್ ಟು ಎಂಡ್ ಸಖತ್ ಮಾಸ್ – ದುನಿಯಾ ವಿಜಿ ಭೀಮ ಥಿಯೇಟರ್ ಕಿಂಗ್

BuzzTollywood Buzz 10 months ago

Naga Chaithanya – Shobhitha Dhulipala: ದೀರ್ಘಕಾಲದ ಗೆಳತಿಯೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡ ಸಮಂತಾ ಮಾಜಿ ಪತಿ ನಾಗಚೈತನ್ಯ

BuzzTollywood Buzz 10 months ago

Mr.Bachchan ಆದ ರವಿತೇಜ – ಚಿತ್ರದ ಟ್ರೈಲರ್ ನಲ್ಲಿ ‘ಮಾಸ್ ಮಹಾರಾಜ’ನ ಕಮಾಲ್

Copyright ©2025 . All Rights Reserved. privacy | terms Whatsapp: 9538193653 Email: hello@flixoye.com