ಎನ್.ಟಿ.ಆರ್ ಪುತ್ರ ನಂದಮೂರಿ‌ ಹರಿಕೃಷ್ಣ ಭೀಕರ ಅಪಘಾತದಲ್ಲಿ ದುರ್ಮರಣ.

Published on

352 Views

1964ರಲ್ಲಿ ಶ್ರೀ ಕೃಷ್ಣಾವತಾರಂ ಎಂಬ ಚಿತ್ರದಲ್ಲಿ ಬಾಲನಟನಾಗಿ ಬಣ್ಣದ ಬದುಕಿಗೆ ಕಾಲಿರಿಸಿದ್ದ ಹರಿಕೃಷ್ಣ ರವರು ಚಿತ್ರರಂಗದಲ್ಲಿ ಸಕ್ರಿಯವಾಗಿದ್ದು, ನಾಯಕನಟನಾಗಿ, ಪೋಷಕರ ಪಾತ್ರ, ಹಾಸ್ಯ ಪಾತ್ರ ಹಾಗೂ ನಿರ್ಮಾಪಕರಾಗಿ ಚಿತ್ರರಂಗದಲ್ಲಿ ಕಾಣಿಸಿಕೊಂಡಿದ್ದರು. ನಂದಮೂರಿ ಹರಿಕೃಷ್ಣರವರು ಟಿಡಿಪಿ ಸಂಸ್ಥಾಪಕ ಆಂಧ್ರ ಮಾಜಿ ಸಿಎಂ ನಂದಮೂರಿ ತಾರಕ ರಾಮರಾವ್ ಅವರ ನಾಲ್ಕನೇ ಪುತ್ರ. ನಂದಮೂರಿ ಹರಿಕೃಷ್ಣರವರು‌ ಆಪ್ತರೊಬ್ಬರ ವಿವಾಹ ಸಮಾರಂಭಕ್ಕೆ ತೆರಳುತ್ತಿದ್ದ ವೇಳೆ ಕಾರು‌ ನಿಯಂತ್ರಣ ತಪ್ಪಿ ಪಲ್ಟಿ ಹೊಡೆದು ಅವಘಡ ‌ಸಂಭವಿಸಿದ್ದು, ಆಸ್ಪತ್ರೆಗೆ ದಾಖಲಿಸುವ ಹೊತ್ತಿಗಾಗಲೇ ಕೊನೆಯುಸಿರೆಳೆದಿದ್ದಾರೆ. ನಂದಮೂರಿ ಹರಿಕೃಷ್ಣ ರವರ ಮೊದಲ ಪತ್ನಿಯ ಮೂರು ಮಕ್ಕಳಾದ ನಟ ಕಲ್ಯಾಣ್ ರಾಮ್, ಪುತ್ರಿ ಸುಹಾಸಿನಿ ಮತ್ತು 2 ನೇ ಪತ್ನಿಯ ಪುತ್ರ ಜ್ಯೂನಿಯರ್ ಎನ್ ಟಿ ಆರ್ ತಾರಕರಾಮ್ ಅವರನ್ನು ನಂದಮೂರಿ ಹರಿಕೃಷ್ಣ ಅಗಲಿದ್ದಾರೆ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com