ಮಡಿಕೇರಿಯಲ್ಲಿ `ನಾಕುಮುಖ’ ಚಿತ್ರಕ್ಕೆ ಚಾಲನೆ

Published on

796 Views

ಮಡಿಕೇರಿಯಲ್ಲಿ `ನಾಕುಮುಖ’ ಚಿತ್ರಕ್ಕೆ ಚಾಲನೆ
ದರ್ಶನ್ ರಾಗ್ ನಿರ್ಮಾಣದ `ನಾಕುಮುಖ` ಚಿತ್ರದ ಮುಹೂರ್ತ ಸಮಾರಂಭ ಇತ್ತೀಚೆಗೆ ಮಡಿಕೇರಿಯ ವಿಜಯ ವಿನಾಯಕ ದೇವಸ್ಥಾನದಲ್ಲಿ ನೆರವೇರಿತು. ಚಿತ್ರದ ನಾಯಕಿಯರಾದ ಅಮೃತ ಹಾಗೂ ಪ್ರೀತಿ ದೇವರಿಗೆ ನಮಿಸುವ ಪ್ರಥಮ ಸನ್ನೆವೇಶಕ್ಕೆ ಶಕ್ತಿ ಪತ್ರಿಕೆಯ ಸಂಪಾದಕರಾದ ಶ್ರೀಚಿದ್‍ವಿಲಾಸ್ ಆರಂಭ ಫಲಕ ತೋರಿದರು. ಬೇಬಿ||ಧ್ವನಿ ಕ್ಯಾಮೆರಾ ಚಾಲನೆ ಮಾಡಿದರು.

ಕುಶಾನ್ ಗೌಡ ಕಥೆ ಬರೆದು ಗೀತರಚನೆ ಮಾಡಿ ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ಹಲಗೂರು ವೆಂಕಟೇಶ್ ಸಂಭಾಷಣೆ ಬರೆದು ಸಹ ನಿರ್ದೇಶನ ಮಾಡುತ್ತಿದ್ದಾರೆ. ಹರಿಬಾಬು ಸಂಗೀತ ನೀಡಿರುವ ಈ ಚಿತ್ರಕ್ಕೆ ರಂಗಸ್ವಾಮಿ ಅವರ ಛಾಯಾಗ್ರಹಣವಿದೆ. ಮಹೇಶ್ ಅವರ ಸಂಕಲನವಿರುವಈ ಚಿತ್ರದ ತಾರಾಬಳಗದಲ್ಲಿ ಕುಶಾನ್ ಗೌಡ, ದರ್ಶನ್ ರಾಗ್, ಅಮೃತ ಅಯ್ಯಂಗಾರ್, ಪ್ರೀತಿ, ಅನೀಶ್, ಯಶವಂತ್, ಸುಚೀಂದ್ರ ಶೆಟ್ಟಿ, ಕಿರಣ್ ಸೂರ್ಯ ಮುಂತಾದವರಿದ್ದಾರೆ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com