ಮನಸಾರೆ – ಆಕೃತಿ ಮಹಾಸಂಗಮದಲ್ಲಿ ರಂಗಿತರಂಗ ನಟಿ “ರಾಧಿಕಾ ನಾರಾಯಣ್ ‌”

Published on

458 Views

ಇದೇ ಶನಿವಾರ ಮತ್ತು ಭಾನುವಾರ ರಾತ್ರಿ ೯.೩೦ಕ್ಕೆ
ಉದಯ ಟಿವಿಯಲ್ಲಿ ಮಹಾಸಂಗಮಗಳ ಸುರಿ ಮಳೆ ಶುರುವಾಗಿದೆ. ಮನಸಾರೆ ಆಕೃತಿ ಮಹಾಸಂಗಮ ಶುರುವಾಗಿದೆ. ಹುಟ್ಟಿದ್ದಾಗಿಂದ ಅಪ್ಪನ ಪ್ರೀತಿಗಾಗಿ ಕಾಯುತ್ತಿರುವ ಪ್ರರ‍್ಥನ ಮತ್ತು ಅಪ್ಪನನ್ನೆ ಕಳೆದುಕೊಂಡ ದಿವ್ಯಾ ಇವರಿಬ್ಬರು ಮುಖಮುಖಿಯಾಗುತ್ತಿದ್ದಾರೆ.

ವಿಶೇಷತೆ : ರಂಗಿತರಂಗ ಖ್ಯಾತಿಯ ನಟಿ ರಾಧಿಕಾ ನಾರಾಯಣ್ ‌ಅವರು ವಿಶೇಷ ಅತಿಥಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ದಿವ್ಯಾ ಬಾಲು ಹಾಗೂ ಆನಂದ್‌ಪ್ರರ‍್ಥನಾ ಲೈಪಲ್ಲಿ ಬರೋ ಪ್ರಮುಖ ಪಾತ್ರಧಾರಿಯಾಗಿ ಬಂದು, ಹಲವಾರು ನಿಗೂಢ ಸತ್ಯಗಳನ್ನು ಬಯಲು ಮಾಡಲಿದ್ದಾರೆ.

ಕಥೆಗಳ ಸಂಗಮ : ತಂದೆಯನ್ನ ಉಳಿಸಲು ಚಾಮುಂಡಿ ರೂಪದಲ್ಲಿ ಭೂಪತಿಯನ್ನ ರ‍್ಧನ ಮಾಡುತ್ತಾಳೆ ಪ್ರರ‍್ಥನಾ. ನಂತರ ಪ್ರರ‍್ಥನಾ ಆನಂದ್ ಕಾಡಿನಲ್ಲಿ ಕಳೆದುಹೋಗುತ್ತಾರೆ. ಈ ಮಧ್ಯೆ ದೇವಕಿ, ಪಾವನಿ, ಯುವ ಮತ್ತು ವಾಸುಕಿ ಅವರಿಬ್ಬರನ್ನು ಹುಡುಕುತ್ತಿದ್ದಾರೆ. ಆಕೃತಿಯಲ್ಲಿ ಭೈರವಿಯನ್ನು ಹುಡುಕುತ್ತಿರೋ ದಿವ್ಯಾ ಪಾವನಿ ಕುಟುಂಬವನ್ನು ಅನಿರೀಕ್ಷಿತವಾಗಿ ಭೇಟಿಯಾಗುತ್ತಾರೆ. ದಿವ್ಯಾ ಮತ್ತು ಪಾವನಿ ಕುಟುಂಬ ಒಂದಾಗಿ, ಕಳೆದುಹೋಗಿರೋ ಆನಂದ್ ಮತ್ತು ಪ್ರರ‍್ಥನಾ ಹಾಗೂ ಭೈರವಿಯನ್ನ ಹುಡುಕುತ್ತಾರೆ. ಮತ್ತೊಂದೆಡೆ ಪರಿಸ್ಥಿತಿಯ ಕೈಗೊಂಬೆಯಾಗಿರೋ ಆನಂದ್, ಇಷ್ಟವಿಲ್ಲದಿದ್ದರೂ ಪ್ರರ‍್ಥನಾ ಜೊತೆ ಕಾಡಿನಲ್ಲಿ ಅಳೆದಾಡುವಾಗ ಆಕೃತಿಯಿಂದ ಅಪಾಯಕ್ಕೆ ಒಳಗಾಗುತ್ತಾರೆ. ಹರಕೆ ಆಟದಿಂದ ಕೋಪಗೊಂಡ ಆಕೃತಿ ಕಡೆಮನೆಯಲ್ಲಿರೋ ಏಲ್ಲರನ್ನೂ ಬಲಿ ಪಡೆಯಲು ಪ್ರಯತ್ನಿಸುತ್ತಿದೆ.

ಹಲವು ತಿರುವುಗಳು : ಪ್ರಾಣಕ್ಕಾಗಿ ಹೋರಾಡುತ್ತಿರೋ ಆನಂದ್‌ಮತ್ತು ಪ್ರರ‍್ಥನಾ ಹೇಗೆ ಬಚಾವಾಗುತ್ತಾರೆ? ದಿವ್ಯಾ ಬಾಲುವಿನ ನಡುವೆ ಇರೋ ವೈಮನಸ್ಸು ಸರಿ ಹೋಗುತ್ತ? ಆಕೃತಿಯಿಂದ ಪಾವನಿ ಮತ್ತು ದಿವ್ಯಾ ಕುಟುಂಬಕ್ಕೆ ಆಗೋ ತೊಂದರೆಗಳಿಗೆ ಮುಕ್ತಿ ದೊರೆಯುವುದೇ? ಇವೆಲ್ಲದರ ಮಧ್ಯೆ ರಾಧಿಕಾ ಚೇತನ್‌ಅವರು ಯಾವ ರೀತಿಯಾಗಿ ಆಕೃತಿ ಮತ್ತು ಮನಸಾರೆ ಪಾತ್ರಗಳಿಗೆ ಶಕ್ತಿಯಾಗಿ ನಿಲ್ಲುತ್ತಾರೆ ಎಂಬ ಹಲವು ರೋಚಕ ಸನ್ನಿವೇಶಗಳನ್ನೊಳಗೊಂಡಿರುವ ವಿಶೇಷ ಸಂಚಿಕೆಯೇ ಮನಸಾರೆ ಆಕೃತಿ ಮಹಾಸಂಗಮ

​ ಅದ್ಧೂರಿ ವಿಶೇಷ ಸಂಚಿಕೆಗಳು ಶನಿವಾರ ಮತ್ತು ಭಾನುವಾರ ರಾತ್ರಿ 9:30 ಕ್ಕೆ ನಿಮ್ಮ ಉದಯ ಟಿವಿಯಲ್ಲಿ ಮಾತ್ರ ಪ್ರಸಾರವಾಗಲಿದೆ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com