ಮಲಯಾಳಂ ಹಾಡುಗಾರ ಮಧು ಬಾಲಕೃಷ್ಣನ್ ಮತ್ತೊಮ್ಮೆ ಚಂದನವನಕ್ಕೆ…!!

Published on

429 Views

‘ಮೇಲೊಬ್ಬ ಮಾಯಾವಿ’ ಚಿತ್ರದ ಮೂಲಕ ಮತ್ತೊಮ್ಮೆ ತನ್ನ ಕಂಠ ಸಿರಿಯಿಂದ ಮೋಡಿ ಮಾಡಲು‌ ಹೊರಟಿದ್ದಾರೆ ಮಲಯಾಳಂನ ಜನಪ್ರಿಯ ಹಾಡುಗಾರ ಮಧು ಬಾಲಕೃಷ್ಣನ್. ಇವರ ಕಂಠಸಿರಿಯಲ್ಲಿ ‘ಜಗದ ಜೀವಿಗಳಿಗೆ ಚಾವಿ ಹಾಕಿ ಕುಂತವ್ನೆ’ ಹಾಡು ಮೂಡಿ ಬಂದಿದೆ.
ಹಾಡುಗಾರ ಮಧು ಬಾಲಕೃಷ್ಣನ್,ಕನ್ನಡ ಚಿತ್ರಗಳಿಗೆ ಹಾಡಿರುವುದು ಇದೇ ಮೊದಲಲ್ಲ. ಈ ಹಿಂದೆ ‘ಆಪ್ತ ಮಿತ್ರ’,ಅಂಬರೀಶ್​, ಸಿಂಹಾದ್ರಿ, ಬಂಧು ಬಳಗ, ಅರಮನೆ,ಅನಾಥರು,ಚಂದಾ, ಮನ್ಮಥ, ದತ್ತ, ತಂಗಿಗಾಗಿ, ತವರಿನ ಸಿರಿ, ಗಂಡುಗಲಿ ಕುಮಾರ ರಾಮ, ಕೇರ್ ಆಫ್ ಫುಟ್​ಪಾತ್, ಅಣ್ಣ ತಂಗಿ ಸೇರಿದಂತೆ ಕೆಲ ಸಿನಿಮಾಗಳಿಗೆ ಹಾಡು ಹಾಡಿದ್ದಾರೆ. ಮತ್ತೊಂದು ವಿಶೇಷ ಏನಂದ್ರೆ, ರಾಜಮೌಳಿ ಅವರ ‘ಬಾಹುಬಲಿ’ ಚಿತ್ರದಲ್ಲಿ ಇವರದೆ ಪ್ರಮುಖ ಕಂಠ.

ಮಧು ಬಾಲಕೃಷ್ಣನ್ ಮಲಯಾಳಂ ಭಾಷಿಕರಾಗಿದ್ದರೂ ಕನ್ನಡವನ್ನು ಚಂದವಾಗಿ ಉಚ್ಛಾರಣೆ ಮಾಡುತ್ತಾರೆ. ಇವರ ಕಂಠ ಸಿರಿಯ ಹಾಡು ‘ಮೇಲೊಬ್ಬ ಮಾಯಾವಿ’ ಚಿತ್ರದಲ್ಲಿ ಮೂಡಿ‌ಬರಲಿದ್ದು, ಚಿತ್ರತಂಡ ಸದ್ಯದಲ್ಲೇ ಆ ಹಾಡನ್ನು ಬಿಡುಗಡೆ ಮಾಡಲಿದೆ. ಈ ಹಾಡಿಗೆ ಪತ್ರಕರ್ತ ಚಂದ್ರ ಚೂಡ್ ಗೀತ ರಚನೆ ಮಾಡಿದ್ದು,

ಕಥೆ, ಚಿತ್ರಕಥೆ ಬರೆದು ನಟನೆ ಸಹ ಮಾಡಿದ್ದಾರೆ ಚಂದ್ರಚೂಡ್ ಚಕ್ರವರ್ತಿ. ಈ ಚಿತ್ರದಲ್ಲಿ ಸಂಚಾರಿ ವಿಜಯ್ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ‘ಮೇಲೊಬ್ಬ ಮಾಯಾವಿ’ ಸಿನಿಮಾ ಪತ್ರಕರ್ತ ನವೀನ್ ಕೃಷ್ಣ ಅವರ ಚೊಚ್ಚಲ ನಿರ್ದೇಶನದ ಚಿತ್ರ. ದಿವಗಂತ ಸಂಗೀತ ನಿರ್ದೇಶಕ ಎಲ್.ಎನ್.ಶಾಸ್ತ್ರೀ ಅವರ ಕೊನೆಯ ಸಿನಿಮಾ ಇದಾಗಿದೆ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com