ಕೆರೂರ್ ಟು ಹಾಯ್‍ಬೆಂಗ್ಳೂರ್!

Published on

285 Views

ರಂಗಭೂಮಿಯಿಂದ ಕಿರುತೆರೆ, ಕಿರುತೆರೆಯಿಂದ ಹಿರಿತೆರೆಗೆ ಸಣ್ಣ ಪುಟ್ಟ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದ ಗೋಪಿ ಕೆರೂರ್ ಇಂದು ಎರಡು ಚಿತ್ರಗಳ ನಿರ್ದೇಶಕ. ತಮ್ಮ ಚೊಚ್ಚಲ ನಿರ್ದೇ ಶನದ `ರಂಕಲ್‍ರಾಟೆ’ ಚಿತ್ರದ ಮೂಲಕ ತಾನೋಬ್ಬ ಸಮರ್ಥ ನಿರ್ದೇಶಕ ಎಂದು ಪ್ರೂವ್ ಮಾಡಿಕೊಂಡಿದ್ದ ಗೋಪಿ ಕೆರೂರ್ ಅವರ ಹೊಸ ಚಿತ್ರ `ಮದುವೆ ಮಾಡ್ರೀ ಸರಿ ಹೋಗ್ತಾನೆ’ ಚಿತ್ರ ಇನ್ನೇನು ಬಿಡುಗಡೆಯ ಹೊಸ್ತಿಲಲ್ಲಿದೆ ಈ ಸಂದರ್ಭದಲ್ಲಿ ಈ ನವನಿರ್ದೇಶಕನ ಕಿರು ಪರಿಚಯ ಮಾಡುವ ಪ್ರಯತ್ನವನ್ನು ಇಲ್ಲಿ ಮಾಡಲಾಗಿದೆ.

ಅಮ್ಮನ ಒತ್ತಾಸೆಗಾಗಿ ಚಿತ್ರ ನಿರ್ದೇಶನದ ಕನಸನ್ನು ಹೊತ್ತಿದ್ದ ಗೋಪಿ ಕೆರೂರ್ ಅವರ ಮೂಲ ಹೆಸರು, ವಿಠ್ಠಲ್ ನಾಗಪ್ಪ ಬೆಳಗಿ. 1986ರಲ್ಲಿ ಇವರ ಹುಟ್ಟೂರಾದ ಕೆರೂರ್‍ನಲ್ಲಿ ಗುಡಿಗೇರಿ ಬಸವರಾಜು ನಿರ್ದೇಶನದ `ಸಿಂಧೂರ ಲಕ್ಷ್ಮಣ’ ನಾಟಕ ಶುರುವಾಗಿತ್ತು. ಆ ನಾಟಕದಲ್ಲಿ ಗುಡಿಗೇರಿಯವರು ಸಿಂಧೂರ ಲಕ್ಷ್ಮಣನ ಬಾಲ್ಯದ ಪಾತ್ರಕ್ಕಾಗಿ ಬಾಲ ನಟನನ್ನು ತಲಾಶ್ ಮಾಡುತ್ತಿದ್ದರು.. ಅದೇ ಸಮಯಕ್ಕೆ ಗೋಪಿಯವರ ತಾಯಿ ತನ್ನ ಮಗನ ಪ್ರತಿಭೆಯನ್ನು ನೋಡಿ ನಾಟಕಕ್ಕೆ ಸೇರಿಸಿದರು. ಅಲ್ಲಿಂದ ಪ್ರಾಂಭವಾಯ್ತು ಇವರ ಬಣ್ಣದ ಲೋಕದ ಜರ್ನಿ. ಹೀಗೆ ಪ್ರಾರಂಭವಾದ ನಟನೆ-ನಿರ್ದೇಶನದ ಹಸಿವು ಹೆಮ್ಮರವಾಗಿ ಬೆಳೆಯಿತು. ಆದರೆ, ಹಲವಾರು ಕಾರಣಕ್ಕೆ ಸಾಕಷ್ಟು ವರ್ಷಗಳ ಕಾಲ ಇವರು ಇಷ್ಟ ಪಟ್ಟ ಕೆಲಸದ ಬದಲಾಗಿ ಹೊಟ್ಟೆಪಾಡಿಗಾಗಿ ಗೋವಾ-ಬಾಂಬೆ ಸುತ್ತುವಂತಾಯಿತು. ಎಷ್ಟೇಕಡೆ ಹೋದರು ಇವರಲ್ಲಿದ್ದ ಬಣ್ಣದ ಹಸಿವು ಕಡಿಮೆಯಾಗಲಿಲ್ಲ. ತನ್ನ ಅಮ್ಮನ ಅಣತಿಯಂತೆ ಮತ್ತೆ ಬೆಂಗಳೂರಿಗೆ ಬಂದ ಗೋಪಿ, ಸೇರಿಕೊಂಡಿದ್ದು `ಹಾಯ್ ಬೆಂಗ್ಳೂರ್’ ಸಮ್ರಾಜ್ಯವನ್ನು. ಅಲ್ಲಿ ರವಿಬೆಳೆಗೆರೆಯವರ ಸಾಂಗತ್ಯದಲ್ಲಿ ಸಾಕಷ್ಟು ವರ್ಷ ಕೆಲಸಮಾಡಿಕೊಂಡಿದ್ದರು.

ಆದರೆ, ಮಗನ ಕನಸು ನನಸಾಗಲೇ ಬೇಕು ಎಂದು ಪಟ್ಟು ಹಿಡಿದಿದ್ದ ಅವರಮ್ಮ 1999ರಲ್ಲಿ ಗೋಪಿಯನ್ನು ಆದರ್ಶ ಫಿಲ್ಮ್ ಇನ್ಟಿಟ್ಯೂಟ್ ಸೇರಿಸಿದರು. ದೊರೈ ಭಗವಾನ್ ಪ್ರಿನ್ಸಿಪಾಲ್ ಆಗಿದ್ದ ಆ ಇನ್ಟಿಟ್ಯೂಟ್‍ನಲ್ಲಿ ಡಿ.ಎಫ್.ಎ (ಡಿಪ್ಲೋಮ ಇನ್ ಫಿಲ್ಮ್ ಅ್ಯಕ್ಟಿಂಗ್) ಮುಗಿಸಿ, ರಾಕ್‍ಲೈನ್ ವೆಂಕಟೇಶ್ ನಿರ್ಮಾಣದ ಡಿ.ರಾಜೇಂದ್ರ ಬಾಬು ನಿರ್ದೇಶನದ `ಕೃಷ್ಣಲೀಲೆ’ ಅನ್ನುವ ಚಿತ್ರಕ್ಕೆ ಕ್ಲಾಪ್‍ಬಾಯ್ ಆಗಿ ದುಡಿದರು. ಇದಾದನಂತರ.. ಬಾನಲ್ಲೂ ನೀನೆ ಭುವಿಯಲ್ಲೂ ನೀನೆ.. ಗಲಾಟೆ ಅಳಿಯಂದ್ರು.. ಲಾ ಅಂಡ್ ಆರ್ಡರ್.. ಹೀಗೆ ಎಸ್.ನಾರಾಯಣ್.. ಶಿವಮಣಿಯಂತಹ ದಿಗ್ಗಜ ನಿರ್ದೇಶಕರ ಜೊತೆ ಕೆಲಸ ಮಾಡಿದರು. ಸಿನಿಮಾ ಚಿತ್ರೀಕರಣದ ಬಿಡುವಿನ ಸಮಯದಲ್ಲಿ ರಂಗಭೂಮಿ ಚಟುವಟಿಕೆಯಲ್ಲಿ ಸಕ್ರೀಯರಾಗಿರುತ್ತಿದ್ದ ಗೋಪಿ, ಅಲ್ಲಿ ಎಮ್.ಎಸ್.ಸತ್ಯು, ಕೃಷ್ಣಮೂರ್ತಿ ಕವತ್ತಾರು, ಪ್ರಮೋದ್ ಶಿಗ್ಗಾಂವ್ ಮತ್ತು ಜೋಸೆಪ್ ಜಾನ್ ಅವರ ಜೊತೆಯಲ್ಲಿ ಸಹಾಯಕ ನಿರ್ದೇಶಕನಾಗಿ ಸೇವೆ ಸಲ್ಲಿಸಿದರು. ಈ ಸಂದರ್ಭದಲ್ಲಿ ನಿರ್ದೇಶಕರು ನಟನೆಯ ಅವಕಾಶವನ್ನು ಕಲ್ಪಿಸಿದರೂ, ನಿರ್ದೇಶಕನಾಗಬೇಕು ಎಂಬ ಹಂಬಲದಿಂದ ನಿರಾಕರಿಸುತ್ತಿದ್ದರು. ಹೀಗೆ ಅರಂಭವಾದ ನಿರಂತರ ರಂಗ ಒಡನಾಟದಿಂದ ಹತ್ತು-ಹಲವು ನಾಟಕ ತಂಡಗಳಲ್ಲಿ ನಟನೆ, ನಿರ್ದೇಶನ, ರಂಗಸಜ್ಜಿಕೆ.. ರಂಗಭೂಮಿಯ ಹಲವು ವಿಭಾಗಗಳಲ್ಲಿ ಪರಿಣಿತಿಯನ್ನು ಪಡೆದರು ಗೋಪಿ. ದೇಶದ್ಯಾಂತ ನಾಟಕ ಪ್ರದರ್ಶನಗಳಲ್ಲಿ ಪಾಲ್ಗೊಂಡ ಇವರಿಗೆ ಆ ಅನುಭವವೇ ಮುಂದಿನ ಸಿನಿಪಯಣಕ್ಕೆ ದಾರಿದೀಪವಾಯ್ತು.
ಮುಂದೆ ಗೋಪಿಯವರು ಅಮ್ಮನ ಆಸೆಯಂತೆ ನಿರ್ದೇಶಕರಾಗಲು ಎದುರಿಸಿದ ನೋವುಗಳೇನು..? ನಿರ್ದೇಶನಕ್ಕೂ ಮುಂಚೆ ಸಿನಿಪಯಣದಲ್ಲಿ ಅವರ ಬದುಕಿನ ದಿಕ್ಕನ್ನೇ ಬೆಲಿಸಿದ ಆ ಘಟನೆ ಯಾವುದು..? ಹೀಗೆ ಸಾಕಷ್ಟನ್ನು ಮುಂದಿನ ಸಂಚಿಕೆಯಲ್ಲಿ ತಿಳಿದುಕೊಳ್ಳೋಣ..
..ಮುಂದುವರೆಯುವುದು

More Buzz

Buzz 3 days ago

Swastik Productions celebrates the iconic success of Shrimad Ramayan and the grand launch of Veer Hanuman

Trailers 10 months ago

Rudra Garuda Purana Official Teaser Starring Rishi, Priyanka

Trailers 10 months ago

Pepe Kannada Movie Trailer Starring Vinay Rajkumar

BuzzKollywood Buzz 10 months ago

The GOAT Movie: Trailer ಗೂ ಟ್ರೈಲರ್ ರಿಲೀಸ್ ಮಾಡಿದ ವಿಜಯ್ ನಟನೆಯ ಚಿತ್ರತಂಡ

Buzz 10 months ago

Daali Pictures: ವಿದ್ಯಾಪತಿ ಮೂಲಕ ಕರಾಟೆ ಕಿಂಗ್ ಆದ ನಾಗಭೂಷಣ, ಪ್ರೊಮೋ ಬಗ್ಗೆ ಸಿಕ್ತು ಬಿಗ್ ಅಪ್ ಡೇಟ್

BuzzTrailers 10 months ago

Laughing Buddha Trailer – ಪ್ರಮೋದ್ ಶೆಟ್ರ ಡೊಳ್ಳೊಟ್ಟೆ ಪೊಲೀಸ್ ಪಾತ್ರ ನೋಡಿದ್ರಾ? ಟ್ರೈಲರ್ ಇಲ್ಲಿದೆ ನೋಡಿ.

Buzz 10 months ago

Samarjith Lankesh: ಇಂದ್ರಜಿತ್ ಲಂಕೇಶ್ ಮಗನ ಜೊತೆ ಹುಚ್ಚೆದ್ದು ಕುಣಿದು ‘ಕಿಸ್’ ಕೊಟ್ಟ ಉಪೇಂದ್ರ – ವೈರಲ್ ವಿಡಿಯೋ ಇಲ್ಲಿದೆ!

Buzz 10 months ago

Abhishek Aishwarya Divorce – ನಾವು ಡಿವೋರ್ಸ್ ಪಡೆಯಲಿದ್ದೇವೆ ಎಂದ ಅಭಿಷೇಕ್‌ ಬಚ್ಚನ್ ವಿಡಿಯೋ ವೈರಲ್ – ಅಸಲಿಯತ್ತೇನು?

Buzz 10 months ago

Tharun Sonal Marriage: ಸಪ್ತಪದಿ ತುಳಿಯಲಿರುವ ತರುಣ್ – ಸೋನಲ್, ನಟಿ ನಿರ್ದೇಶಕ ಜೋಡಿಗೆ ಹಲವಾರು ಗಣ್ಯರ ಆಶೀರ್ವಾದ

Buzz 10 months ago

Bheema Movie Review: ಫುಲ್ ಆಕ್ಷನ್, ಸ್ಟಾರ್ಟ್ ಟು ಎಂಡ್ ಸಖತ್ ಮಾಸ್ – ದುನಿಯಾ ವಿಜಿ ಭೀಮ ಥಿಯೇಟರ್ ಕಿಂಗ್

BuzzTollywood Buzz 10 months ago

Naga Chaithanya – Shobhitha Dhulipala: ದೀರ್ಘಕಾಲದ ಗೆಳತಿಯೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡ ಸಮಂತಾ ಮಾಜಿ ಪತಿ ನಾಗಚೈತನ್ಯ

BuzzTollywood Buzz 10 months ago

Mr.Bachchan ಆದ ರವಿತೇಜ – ಚಿತ್ರದ ಟ್ರೈಲರ್ ನಲ್ಲಿ ‘ಮಾಸ್ ಮಹಾರಾಜ’ನ ಕಮಾಲ್

Copyright ©2025 . All Rights Reserved. privacy | terms Whatsapp: 9538193653 Email: hello@flixoye.com