“ಕಟ್ಟುಕಥೆ” ಧ್ವನಿಸುರುಳಿ ಬಿಡುಗಡೆ.

Published on

462 Views

“ಕಟ್ಟುಕಥೆ”ಧ್ವನಿಸುರುಳಿ ಬಿಡುಗಡೆ.
———————–

ಸ್ಯಾಂಡಲ್ ವುಡ್ ನಲ್ಲಿ ಸಂಚಲನವನ್ನು ಮೂಡಿಸಲು ಬರುತ್ತಿರುವಂತಹ ಚಿತ್ರತಂಡವೇ ಕಟ್ಟುಕತೆ. ಯುವ ಪ್ರತಿಭೆ ನಿರ್ದೇಶಕ  ರಾಜ್ ಪ್ರವೀಣ್ ಹಾಗೂ ಮೈಸೂರು ಮೂಲದ ಮಹಾಲಕ್ಷ್ಮೀ ಸ್ವೀಟ್ಸ್ ನ ಮಾಲೀಕರು ಹೇಳಲು ಹೊರಟಿರುವ “ಕಟ್ಟುಕಥೆ” ಚಿತ್ರದ ಹಾಡುಗಳ ಧ್ವನಿಸಾಂದ್ರಿಕೆ ಬಿಡುಗಡೆ ಸಮಾರಂಭ ಚಾಮರಾಜಪೇಟೆಯ ಕಲಾವಿದರ ಭವನದಲ್ಲಿ ಅದ್ಧೂರಿಯಾಗಿ ನೆರವೇರಿತು. ಈ ಒಂದು ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ನಿರ್ದೇಶಕರಾದ ಯೋಗರಾಜ ಭಟ್, ದುನಿಯಾ ಸೂರಿ ಅವರು ಆಗಮಿಸಿ ಚಿತ್ರದ ಧ್ವನಿಸಾಂದ್ರಿಕೆಯನ್ನು ಬಿಡುಗಡೆ ಮಾಡಿದ್ದಲ್ಲದೆ ಚಿತ್ರದ ಮೂರು ಹಾಡುಗಳನ್ನು ಪ್ರದರ್ಶನ ಮಾಡಿದರು.

ಧ್ವನಿಸುರುಳಿ ಬಿಡುಗಡೆ ಮಾಡಿದ ನಂತರ ಮಾತನಾಡಿದ ಯೋಗರಾಜಭಟ್ ಅವರು, ಕಟ್ಟುಕಥೆಯ ಗೀತೆಗಳನ್ನು ನಮ್ಮ ಪಂಚರಂಗಿ ಬ್ಯಾನರ್‍ನ ಆಡಿಯೋ ಮೂಲಕ ಹೊರತಂದಿದ್ದು, ಇಂದಿನ ಕಾರ್ಯಕ್ರಮದ ನಿಜವಾದ ಹೀರೋ ಅಂದರೆ ಸಂಗೀತ ನಿರ್ದೇಶಕ ವಿಕ್ರಂ ಸುಬ್ರಹ್ಮಣ್ಯ. ಅವರು ಈ ಚಿತ್ರಕ್ಕೆ ತುಂಬಾ ಒಳ್ಳೇ ಸಂಗೀತವನ್ನು ನೀಡಿದ್ದಾರೆ, ಚಿತ್ರದ ನಿರ್ಮಾಪಕರು ಸ್ವೀಟ್ಸ್ ಅಂಗಡಿ ವ್ಯಾಪಾರದಲ್ಲಿ ಸಕ್ಸಸ್ ಕಂಡಿದ್ದು, ಈ ಚಿತ್ರದ ಮೂಲಕ ಚಿತ್ರರಂಗದಲ್ಲೂ ಯಶಸ್ಸಿನ ಹಾದಿಯಲ್ಲಿ ಸಾಗಲಿ ಎಂದು ಹಾರೈಸಿದರು.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com