ಕಸ್ತೂರಿ ನಿವಾಸ -ಸೇವಂತಿ ಮತ್ತು ಕಾವ್ಯಾಂಜಲಿ – ಮನಸಾರೆ ಮಹಾಸಂಗಮ ಇದೇ ಸೋಮವಾರದಿಂದ ಉದಯ ಟಿವಿಯಲ್ಲಿ

Published on

598 Views

ಉದಯ ಟಿವಿಯಲ್ಲಿ ಮೊಳಗಲಿದೆ ಕಸ್ತೂರಿ ನಿವಾಸ – ಸೇವಂತಿ ಮತ್ತು ಕಾವ್ಯಾಂಜಲಿ – ಮನಸಾರೆ ಮಹಾಸಂಗಮ. ಪ್ರತಿ ಹೆಜ್ಜೆಯಲ್ಲಿ ದಿಟ್ಟ ನರ‍್ಧಾರವನ್ನು ತೆಗೆದುಕೊಳ್ಳುವ ಉದಯ ಟಿವಿಯು ಈ ಭಾರಿ ನಿಮ್ಮೆಲ್ಲರನ್ನು ರಂಜಿಸಲು ಮಹಾಸಂಗಮದ ಮನರಂಜನೆಯೊಂದಿಗೆ ನಿಮ್ಮೆದುರು ಬರಲಿದೆ. ದೇವಿ ಸನ್ನಿದಾನದಲ್ಲಿ ಸಂಗಮವಾಗುತ್ತಿದೆ ಕಸ್ತೂರಿ ನಿವಾಸ ಮತ್ತು ಸೇವಂತಿ ಕುಟುಂಬ. ಕಾವ್ಯಾಂಜಲಿಯ ಬಂಧವನ್ನು ಮತ್ತಷ್ಟು ಬೆಸೆಯಲು ಮನಸಾರೆಯೊಂದಿಗೆ ನಡೀತಿದೆ ಮಹಾಸಂಗಮ.
ಹಲವಾರು ಸಮಸ್ಯೆ ಮತ್ತು ಮನಸ್ತಾಪಗಳನ್ನು ಎದುರಿಸಿರುವ ಸೇವಂತಿ ದೇವರ ಮೊರೆ ಹೋಗಿದ್ದಾಳೆ. ಇನ್ನೊಂದೆಡೆ ದೇವರ ವಿಧಿ ಎನ್ನುವ ಹಾಗೆ ಕಸ್ತೂರಿ ನಿವಾಸದವರು ದೇವಿಯ ಕೃಪೆಗೆ ಪಾತ್ರರಾಗಲು ಹೊರಟಿದ್ದಾರೆ. ಕಸ್ತೂರಿ ನಿವಾಸದಲ್ಲಿರುವ ದ್ವೇಷ ದೂರಾಗುತ್ತಾ? ಸೇವಂತಿಯ ನಿಷ್ಕಲ್ಮಶ ಮನಸ್ಸಿಗೆ ಗೆಲುವು ಸಿಗುತ್ತಾ? ಎಂಬುದಕ್ಕೆ ಮಹಾಸಂಗಮದಲ್ಲಿ ತೆರೆ ಬೀಳಲಿದೆ.

ವೇದಾ ಹುಟ್ಟಿದಹಬ್ಬದಂದು ಮನೆಯವರೆಲ್ಲ ಸೇರಿ ಪ್ಲಾನ್ ಮಾಡಿ, ವೇದಾ ಗೆಳೆಯನಾದ ಮನಸಾರೆ ಧಾರಾವಾಹಿಯ ಆನಂದ್ ಮಹೇಂದ್ರ ಮತ್ತು ಕುಟುಂಬದವರನ್ನು ಕರೆಸಿ ವೇದಾಳಿಗೆ ರ‍್ಪೈಸ್ ಕೊಡುವರು. ಇದರ ಮಧ್ಯೆ ಕಾವ್ಯಾ ಹಠಕ್ಕೆ ಅಂಜಲಿಯೂ ಕೂಡ ವೇದಾ ಮನೆಗೆ ಬರುವ ಸನ್ನಿವೇಶ ಎದುರಾಗುತ್ತದೆ. ಹಾಗೆ ಇನ್ನೊಂದೆಡೆ ಪ್ರರ‍್ಥನಾ ಕುಟುಂಬದೊಂದಿಗೆ ಯುವ ಕೂಡ ಅಲ್ಲಿಗೆ ಬರುವಂತ್ತಾಗುತ್ತದೆ. ವೇದಾ ಮತ್ತು ಅಂಜಲಿಯ ನಡುವೆ ಇರುವ ಶೀತಲ ಸಮರ ತಾರಕಕ್ಕೇರುತ್ತಾ? ಸುಶಾಂತ್‌ ಮನಸಿನ ಒದ್ದಾಟ ಅಂಜಲಿಗೆ ತಿಳಿಯುತ್ತಾ? ಪ್ರರ‍್ಥನಾ ಪ್ರೀತಿಗೆ ಕಾಯುತ್ತಿರುವ ಯುವನಿಗೆ ಪ್ರೀತಿಯ ಸಹಿ ಸಿಗುತ್ತಾ? ಎಂಬುದು ಈ ಮಹಾಸಂಗಮದಲ್ಲಿ ಹೊರಬೀಳಲಿದೆ.

ಮನೆಯವರ ಸಂತೋಷಕ್ಕೆ ತನ್ನ ನೋವನ್ನು ಮರೆಮಾಚುವ ಸೇವಂತಿ ಒಂದೆಡೆಯಾದರೆ, ಮೃದುಲಾ ಮತ್ತು ಮಂಗಳ ನಡುವೆ ಇರುವ ಮನಸ್ತಾಪವನ್ನು ಸರಿಪಡಿಸಲು ಹೋರಾಡುತ್ತಿರುವ ಕಸ್ತೂರಿನಿವಾಸದ ಪರ‍್ವತಿ ಇನ್ನೊಂದೆಡೆ. ಅಕ್ಕ ತಂಗಿಯ ಬಾಂಧವ್ಯದ ಕಥೆಯಾದ ಕಾವ್ಯಾಂಜಲಿಯ ಜೊತೆ ಅಪ್ಪನ ಪ್ರೀತಿಗಾಗಿ ಹಂಬಲಿಸುತ್ತಿರುವ ಮಗಳ ಕಥೆ ಮನಸಾರೆ. ಇವೆರಡರ ಮಹಾಸಂಗಮದಲ್ಲಿ ಮಹತ್ತರ ತಿರುವು ಕಾಣಲಿದ್ದು, ಬೇಡಿಕೆಗೆ ತಕ್ಕಂತೆ ಕಥೆ ಹೆಣೆಯಲಾಗಿದೆ. ಕೊರೊನಾ ವೈರಸ್ ಹಿನ್ನಲೆ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡು ಚಿತ್ರೀಕರಣ ಪರ‍್ಣಗೊಳಿಸಿದ್ದು ಸೆಪ್ಟೆಂಬರ್ ೭ರ ಸಂಜೆ ೭ ರಿಂದ ೮ ರ ವರೆಗೆ ಕಸ್ತೂರಿ ನಿವಾಸ – ಸೇವಂತಿ ಮತ್ತು ರಾತ್ರಿ ೮.೩೦ ರಿಂದ ರಾತ್ರಿ ೯.೩೦ರ ವರೆಗೆ ಕಾವ್ಯಾಂಜಲಿ – ಮನಸಾರೆ ಮಹಾಸಂಗಮಗಳ ಮಹಾಸಂಚಿಕೆಗಳು ಉದಯ ಟಿವಿಯಲ್ಲಿ ಪ್ರಸಾರವಾಗಲಿದೆ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com