ಸುಖಾಂತ್ಯ ಕಂಡ ಹೆಡ್‌ಬುಷ್ ರಾದ್ದಾಂತ

Published on

424 Views

’ಹೆಡ್‌ಬುಷ್’ ಚಿತ್ರದಲ್ಲಿ ಕರಗದ ಬಗ್ಗೆ ತೋರಿಸಲಾದ ದೃಶ್ಯಗಳು ಮತ್ತು ಸಂಭಾಷಣೆಗೆ ತಿಗಳ ಸಮುದಾಯದವರು ಆಕ್ಷೇಪಣೆ ವ್ಯಕ್ತಪಡಿಸಿದ್ದರು. ಇದರ ಬಗ್ಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರನ್ನು ನೀಡಲಾಗಿತ್ತು. ಅಧ್ಯಕ್ಷ ಬಾ.ಮ.ಹರೀಶ್ ರವರು ಚಿತ್ರತಂಡ ಹಾಗು ಸಮುದಾಯವರನ್ನು ಕರೆಸಿ ಮಾತನಾಡಿಸಿ ಈ ಸಮಸ್ಯೆಯನ್ನು ಬಗೆ ಹರಿಸಿದ್ದಾರೆ.

ಅದರಂತೆ ಚಿತ್ರದಲ್ಲಿರುವ ಬರುವ ಎರಡು ಡೈಲಾಗ್‌ಗಳಿಗೆ ಮ್ಯೂಟ್ ಮಾಡಲು ತಂಡವು ಆಶ್ವಾಸನೆ ನೀಡಿದೆ. ಇದರಿಂದ ಎರಡು ಮೂರು ದಿನದಿಂದ ಕಾವೇರಿದ್ದ ಸುದ್ದಿಯು ಸುಖಾಂತ್ಯದೊಂದಿಗೆ ಕೊನೆಗೊಂಡಿದೆ. ಸಭೆಯಲ್ಲಿ ಕಥೆಗಾರ ಅಗ್ನಿಶ್ರೀಧರ್, ನಾಯಕ ಧನಂಜಯ್, ನಿರ್ದೇಶಕ ಶೂನ್ಯ, ಶ್ರೀ ಧರ್ಮರಾಯ ದೇವಸ್ಥಾನದ ಅಧ್ಯಕ್ಷ ಸತೀಶ್, ತಿಗಳರ ಸಮುದಾಯದ ಅಧ್ಯಕ್ಷ ಸುಬ್ಬಣ್ಣ ಮುಂತಾದವರು ಉಪಸ್ತಿತರಿದ್ದರು.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com