ನವೆಂಬರ್ 19 ಕ್ಕೆ ಪ್ರತ್ಯಕ್ಷವಾಗಲಿದ್ದಾರೆ ಗರುಡ ಗಮನ ವೃಷಭ ವಾಹನ

Published on

362 Views

ಒಂದು ಮೊಟ್ಟೆಯ ಕಥೆ ಖ್ಯಾತಿಯ ರಾಜ್ ಬಿ ಶೆಟ್ಟಿ ನಟಿಸಿ ನಿರ್ದೇಶಿಸಿದ ವಿಶೇಷ ಚಿತ್ರ ಗರುಡ ಗಮನ ವೃಷಭ ವಾಹನ. ಈಗಾಗಲೇ ವಿಶೇಷ ಟ್ರೈಲರ್ ನಿಂದ ಸದ್ದು ಮಾಡುತ್ತಿರುವ ಚಿತ್ರ, ಕನ್ನಡ ಸಿನಿಪ್ರಿಯರಲ್ಲಿ ಬಹಳಷ್ಟು ನಿರೀಕ್ಷೆಗಳನ್ನು ಹುಟ್ಟುಹಾಕಿದೆ.

ರಕ್ಷಿತ್ ಶೆಟ್ಟಿಯವರು ಹೇಳುವಂತೆ ರಾಜ್ ಬಿ ಶೆಟ್ಟಿಯವರು ಹಾಗೂ ರಿಷಭ್ ಶೆಟ್ಟಿಯವರಲ್ಲಿ ಅಗಾಧ ಪ್ರತಿಭೆ ಹುದುಗಿದೆ ಎನ್ನುವುದಕ್ಕೆ ಈ ಚಿತ್ರದ ಟ್ರೈಲರ್ ಹುಟ್ಟುಹಾಕಿರುವ ನಿರೀಕ್ಷೆಗಳೇ ಸಾಕ್ಷಿ.

ಕರಾವಳಿಯ ಭೂಗತ ಜಗತ್ತಿನ ಸುತ್ತ ಹೆಣೆದಿರುವ ಈ ಕಥಾಹಂದರದಲ್ಲಿ ಗರುಡಗಮನ ಎಂದರೆ ವಿಷ್ಣುವಿನ ಸಾತ್ವಿಕ ಭಾವವಿರುವ ಹರಿ ಎನ್ನುವ ಪಾತ್ರವನ್ನು ರಿಷಬ್ ಶೆಟ್ಟಿಯವರು ನಿರ್ವಹಿಸಿದರೆ, ವೃಷಭವಾಹನ ಅಂದರೆ ಈಶ್ವರನಂತಹ ವಿಪರೀತ ಭಾವದ ಶಿವ ಎನ್ನುವ ಪಾತ್ರದಲ್ಲಿ ರಾಜ್ ಬಿ ಶೆಟ್ಟಿಯವರು ಬಣ್ಣ ಹಚ್ಚಲಿದ್ದಾರೆ.

ಇನ್ನು ಈ ಚಿತ್ರದ ವಿಶೇಷ ಮುಖ್ಯ ಪಾತ್ರದಲ್ಲಿ ಗೋಪಾಲಕೃಷ್ಣ ದೇಶಪಾಂಡೆಯವರು ನಿರ್ವಹಿಸಲಿದ್ದು, ಪಾತ್ರದ ಬಗ್ಗೆ ವಿಶೇಷ ಕುತೂಹಲವನ್ನು ಸೃಷ್ಟಿಸಿದ್ದಾರೆ ನಿರ್ದೇಶಕರು.

ಚಿತ್ರಕ್ಕೆ ಅತ್ಯುತ್ತಮ ಸಂಗೀತ ನಿರ್ದೇಶವನ್ನು ನೀಡಿದ್ದಾರೆ ಶ್ರೀನಿವಾಸ ಕಲ್ಯಾಣ, ಅಳಿದು ಉಳಿದವರು, D/o ಪಾರ್ವತಮ್ಮ ಖ್ಯಾತಿಯ ಮಿಥುನ್ ಮುಕುಂದನ್. ಹಾಗೆಯೇ ಚಿತ್ರದ ಛಾಯಾಗ್ರಹಣ ಹಾಗೂ ಸಂಕಲನವನ್ನು ಪ್ರವೀಣ್ ಶ್ರೀಯಾನ್ ನಿರ್ವಹಿಸಿದ್ದಾರೆ.

ಈಗಾಗಲೇ ಕನ್ನಡಕ್ಕೆ ಬಹಳಷ್ಟು ಹಿಟ್ ಚಿತ್ರಗಳನ್ನು ನೀಡಿರುವ ರಕ್ಷಿತ್ ಶೆಟ್ಟಿಯವರ ಪರಂವಃ ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರಕ್ಕೆ ಸ್ವತಃ ರಾಜ್ ಬಿ ಶೆಟ್ಟಿಯವರೇ ಆಕ್ಷನ್ ಕಟ್ ಹೇಳಿದ್ದಾರೆ.
ಬೆಲ್ ಬಾಟಂ ಖ್ಯಾತಿಯ ರಿಷಬ್ ಶೆಟ್ಟಿಯವರು ಮುಖ್ಯ ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಚಿತ್ರದ ಸಂಪೂರ್ಣ ಭಾಗವನ್ನು ಅದ್ಭುತವಾಗಿಯೇ ಹ್ಯಾಂಡಲ್ ಮಾಡಲಿದ್ದಾರೆ.

ಲೈಟರ್ ಬುದ್ಧ ಫಿಲಂಸ್ ನಡಿಯಲ್ಲಿ ರವಿ ರೈ ಕೈಲಾಸ ಹಾಗೂ ವಚನ್ ಶೆಟ್ಟಿ ಈ ಚಿತ್ರವನ್ನು ನಿರ್ಮಿಸಿದ್ದಾರೆ.

ಕನ್ನಡ ಚಿತ್ರರಂಗವನ್ನಷ್ಟೇ ಅಲ್ಲದೆ, ಎಲ್ಲೆಡೆ ಸದ್ದು ಮಾಡುತ್ತಿರುವ ಚಿತ್ರದ ಅದ್ಭುತ ಟ್ರೈಲರ್ ಅನ್ನು ವೀಕ್ಷಿಸಿರುವ ಸಿನಿಪ್ರಿಯರು, ಚಿತ್ರದ ಬಿಡುಗಡೆಯ ದಿನಾಂಕವನ್ನು ಕಾದು ಕುಳಿತಿರುವಂತೆಯೇ, ಇದೇ ಬರುವ ನವೆಂಬರ್ 19 ರಂದು ಎಲ್ಲಾ ಚಿತ್ರಮಂದಿರಗಳಲ್ಲಿ ಗರುಡ ಗಮನ ವೃಷಭ ವಾಹನ ತೆರೆಕಾಣಲಿದ್ದು, ಬಾಕ್ಸ್ ಆಫೀಸ್ ಧೂಳೀಪಟವಾಗುವ ನಿರೀಕ್ಷೆಯಿದೆ.

ಚಿತ್ರವನ್ನು ಎಲ್ಲರೂ ಥಿಯೇಟರ್ ಗಳಲ್ಲೇ ವೀಕ್ಷಿಸಿ. ಆನಂದಿಸಿ.

More Buzz

Buzz 7 days ago

ಕೇವಲ ಮೋಷನ್ ಪೋಸ್ಟರ್ ಮೂಲಕವೇ ದೊಡ್ಡ ಕ್ರೇಜ಼್ ಹುಟ್ಟಿಸಿದ ‘ಕೆಂಡ’- ಟೀಸರ್ ಇಲ್ಲಿದೆ ನೋಡಿ

Buzz 1 week ago

ಎರಡನೇ ದಿನವೂ ಪ್ರಭಾಸ್ ನಟನೆಯ ಕಲ್ಕಿ 2898AD ಕಮಾಲ್ – ಎರಡೇ ದಿನದಲ್ಲಿ ಚಿತ್ರ ಗಳಿಸಿದ್ದೆಷ್ಟು ಗೊತ್ತಾ?

BuzzTollywood Buzz 1 week ago

ಈ ಓಟಿಟಿಯಲ್ಲಿ ಶೀಘ್ರವೇ ಬರಲಿದೆ Kalki 2898 AD – ಆದರೂ‌ ಚಿತ್ರದ ಥಿಯೇಟರ್ ಅನುಭವವೇ ಬೇರೆ

Buzzfilm of the dayGalleryTollywood Buzz 1 week ago

ಕಲ್ಕಿ 2898 AD ಟಿಕೆಟ್‌ಗೆ ರಾಜಮೌಳಿ ಕ್ಯೂ ನಿಂತ ಫೋಟೋ ವೈರಲ್ – ಮೂವೀ ಪವರ್ ಎಂದ ನೆಟ್ಟಿಗರು

Buzzfilm of the dayFull MoviesTollywood Buzz 1 week ago

ಸಾಕಷ್ಟು ನಿರೀಕ್ಷೆ ಹುಟ್ಟಿಸಿದ್ದ ಕಲ್ಕಿ 2898 AD ಚಿತ್ರ ಹೇಗಿದೆ? – ಇಲ್ಲಿದೆ ನೋಡಿ ಚುಟುಕು ವಿಮರ್ಶೆ

Buzz 2 weeks ago

ತರುಣ್‌ ಸುಧೀರ್‌ ಜೊತೆ ಹಸೆಮಣೆ ಏರಲಿದ್ದಾರೆಯೇ ರಾಬರ್ಟ್‌ ಬೆಡಗಿ ಸೋನಲ್!? – ಇಲ್ಲಿದೆ ವೈರಲ್ ಸುದ್ದಿಯ ಅಸಲಿಯತ್ತು

BuzzGalleryTrailers 2 weeks ago

ಕಲ್ಕಿ 2898 AD ಚಿತ್ರದ ಬುಜ್ಜಿ ಚಲಾಯಿಸಿದ ರಿಷಭ್ ಶೆಟ್ಟಿ – ಇಲ್ಲಿದೆ ನೋಡಿ ಎಕ್ಸ್’ಕ್ಲೂಸಿವ್ ವಿಡಿಯೋ

Buzz 2 weeks ago

“ಹಾಯ್‌ ಟೈಗರ್, ಹಾಯ್‌ ಬಾಸ್”!!!! – ಜೈಲಿನಲ್ಲಿ ದರ್ಶನ್ ಭೇಟಿ ಮಾಡಿದ್ದು ಯಾರು?

Buzzfilm of the dayFull Movies 2 weeks ago

ಲವ್ಲಿ ಆಗಿ ಜನರ ಮನಸ್ಸು ಗೆದ್ದ ವಸಿಷ್ಟ ಸಿಂಹರ ಲವ್…ಲಿ

Buzz 4 weeks ago

ಚಂದನ್‌ ಶೆಟ್ಟಿ ಹಾಗೂ ನಿವೇದಿತಾ ಗೌಡ ವಿಚ್ಛೇದನಕ್ಕೆ ಕೊನೆಗೂ ಬಯಲಾಯ್ತು ಕಾರಣ – ಇಲ್ಲಿದೆ ನೋಡಿ ಸತ್ಯ

Buzz 4 weeks ago

ಯುವರಾಜ್‌ ಕುಮಾರ್‌ ದಂಪತಿಗಳ ವಿಚ್ಛೇದನಕ್ಕೆ ಸಪ್ತಮಿ ಗೌಡ ಕಾರಣ!!? ಏನಿದು ವಿವಾದ?

Buzz 4 weeks ago

ಸ್ಯಾಂಡಲ್ ವುಡ್ ನಲ್ಲಿ ಕೊಲೆ ಸದ್ದು – ನಟ ದರ್ಶನ್ ತನ್ನ ಅಭಿಮಾನಿಗೆ ಮಾಡಿದ್ದೇನು?

Copyright ©2024 . All Rights Reserved. privacy | terms Whatsapp: 9538193653 Email: hello@flixoye.com