ಹರಿಕಥೆ ಅಲ್ಲ ಗಿರಿಕಥೆ ಗೆ ನಿರ್ದೇಶಕರ ಬದಲಾವಣೆ

Published on

356 Views

ರಿಷಬ್ ಶೆಟ್ಟಿ ನಾಯಕ ನಟರಾಗಿ ಅಭಿನಯಿಸುತ್ತಿರುವ “ಹರಿಕಥೆ ಅಲ್ಲ ಗಿರಿಕಥೆ” ಚಿತ್ರದ ಶೂಟಿಂಗ್ ಮೈಸೂರಿನಲ್ಲಿ ನಡೆಯುತ್ತಿದ್ದು, ಅದರೆ ಚಿತ್ರದ ನಿರ್ದೇಶಕ ಗಿರೀಶ್ ಕೃಷ್ಣರವರ ಆರೋಗ್ಯ ಸ್ಥಿತಿ ಸರಿಯಿಲ್ಲದ ಕಾರಣ ಚಿತ್ರಕ್ಕೆ ಯಾವುದೇ ರೀತಿ ತೊಂದರೆ ಆಗಬಾರದೆಂದು ರಿಷಬ್ ಶೆಟ್ಟಿ ‌ಮತ್ತು‌ ನಿರ್ಮಾಪಕರ ಜೊತೆ ಚರ್ಚಿಸಿ ಹೊರಬಂದಿದ್ದರಂತೆ ನಿರ್ದೇಶಕರು. ಗಿರೀಶ್ ಕೃಷ್ಣ ಅವರ ಸ್ಥಾನಕ್ಕೆ ಈಗ ಕರಣ್ ಅನಂತ್ ಮತ್ತು ಅನಿರುಧ್ ಇಬ್ಬರು ಹೊಸ ನಿರ್ದೇಶಕರು ಎಂಟ್ರಿ ಕೊಟ್ಟಿದ್ದಾರೆ. ಈ ಸುದ್ದಿಯನ್ನು ಗಿರೀಶ್ ಕೃಷ್ಣರವರೇ ಖಚಿತಪಡಿಸಿದ್ದಾರೆ.

ಈ ಚಿತ್ರವನ್ನು ಸಂದೇಶ್ ಪ್ರೊಡಕ್ಷನ್ ನಿರ್ಮಾಣ ಮಾಡುತ್ತಿದ್ದು, ರಿಷಬ್ ಶೆಟ್ಟಿ ಫಿಲಂಸ್ ಕೂಡ ನಿರ್ಮಾಣಕ್ಕೆ ಕೈ ಜೊಡಿಸಿದೆ. “ಗಿರಿಯವರ ಆರೋಗ್ಯ ಹದಗೆಟ್ಟಿರುವುದರಿಂದ ನಿರ್ದೇಶಕರ ಬದಲಾವಣೆಯಾಗಿದೆ. ಈ ಕಥೆಯ ಕ್ರೆಡಿಟ್ ಗಿರಿಯವರಿಗೆ ಸಲ್ಲುತ್ತದೆ. ಶೂಟಿಂಗ್ ನಿಲ್ಲಬಾರದೆಂದು ಈ‌ ನಿರ್ಧಾರ ತೆಗೆದುಕೊಂಡಿದ್ದೇವೆ” ಎಂದರು ರಿಷಬ್ ಶೆಟ್ಟಿ. ನಿರ್ದೇಶಕರಾದ ಕರಣ್ ಮತ್ತು ಅನಿರುಧ್ ರಿಷಬ್ ಶೆಟ್ಟಿ ಯವರ ‘ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು’ ಸಿನಿಮಾದಲ್ಲಿ ಅಸೋಸಿಯೇಟ್ ಆಗಿ ಕೆಲಸ ಮಾಡಿದ್ದರು. ಈ ಚಿತ್ರದಲ್ಲಿ ರಿಷಬ್, ರಚನಾ ಇಂದರ್, ತಪಸ್ವಿನಿ ಮುಂತಾದವರ ತಾರಾಬಳಗವಿದೆ. ಈ ಚಿತ್ರಕ್ಕೆ ಅಜನೀಶ್ ಲೋಕನಾಥ್ ಅವರ ಸಂಗೀತವಿದ್ದು, ಚಂದ್ರಶೇಖರನ್ ಮತ್ತು ರಂಗನಾಥ್ ರವರ ಛಾಯಾಗ್ರಹಣವಿದೆ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com