ಸುಶಾಂತ್ ಸಿಂಗ್ ಸಾವಿನ ಪ್ರಕರಣ ಸಿಬಿಐ ವಶಕ್ಕೆ

Published on

385 Views

ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ತಂದೆ ಕೆಕೆ‌ ಸಿಂಗ್ ರವರು‌ ರಿಯಾ‌ ಚಕ್ರವರ್ತಿ ವಿರುದ್ಧ ಪಟನಾ‌ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಸುಶಾಂತ್ ಖಾತೆಯಿಂದ 15ಕೋಟಿ ಹಣವನ್ನು ತನ್ನ ಅಕೌಂಟ್ ಗೆ ವರ್ಗಾಯಿಸಿಕೊಂಡಿದ್ದಾಳೆ. ಹಾಗೂ ಸುಶಾಂತ್ ಆತ್ಮಹತ್ಯೆ ಗೆ ಪ್ರಚೋದಿಸಿದ್ದಾಳೆ ಎಂದು ದೂರಿನಲ್ಲಿ ಹೇಳಿದ್ದರು. ಹಾಗೂ ತನ್ನ ಮಗನ ಸಾವಿನ ಪ್ರಕರಣವನ್ನು ಸಿಬಿಐಗೆ ವಹಿಸಬೇಕೆಂದು ಹೇಳಿದ್ದರು. ಈಗ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣವನ್ನು ಸುಪ್ರೀಂ ಕೋರ್ಟ್ ಸಿಬಿಐಗೆ ವಹಿಸಬೇಕೆಂದು ಇಂದು ಮಹತ್ವದ ತೀರ್ಪು ನೀಡಿದೆ. ಈ ಪ್ರಕರಣದ ವಿಚಾರಣೆಯನ್ನು ಪಟನಾದಿಂದ ಮುಂಬೈಗೆ ವರ್ಗಾಯಿಸಬೇಕೆಂದು‌ ಆಗ್ರಹಿಸಿ ರಿಯಾ ಚಕ್ರವರ್ತಿ‌ ಸಲ್ಲಿಸಿದ‌ ಪಿಟಿಷನ್ನಲ್ಲಿ ಇದ್ದ‌ ಅಂಶವನ್ನು ತಳ್ಳಿ ಹಾಕಿದ ಸುಪ್ರೀಂಕೋರ್ಟ್ ‌ಸಿಬಿಐ‌ ತನಿಖೆಗೆ ಪ್ರಕರಣವನ್ನು‌ ವಹಿಸುವ ಎಲ್ಲ ಅಧಿಕಾರವೂ‌ ಬಿಹಾರ್ ಸರಕಾರ ಕ್ಕೆ ಇದೆ. ತನಿಖೆಯ ವಿಚಾರದಲ್ಲಿ ಮಹಾರಾಷ್ಟ್ರ ಸರಕಾರ ಸಿಬಿಐಗೆ ಸಹಕಾರ ನೀಡಬೇಕೆಂದು‌ ಆದೇಶಿಸಿದೆ. ಇದರಿಂದ ರಿಯಾ ಚಕ್ರವರ್ತಿ ಮತ್ತು ಮುಂಬೈ ಪೋಲಿಸ್ ರಿಗೆ ದೊಡ್ಡ ತಲೆ ನೋವಾಗಿದೆ. ಈಗ ಸಿಬಿಐ ತನಿಖೆಯನ್ನು ಆಗ್ರಹಿಸುತ್ತ ಬಂದಿದ್ದ ಸುಶಾಂತ್ ಕುಟುಂಬ‌ ಹಾಗೂ ಅವರ ಅಭಿಮಾನಿಗಳ ಧನಿಗೆ ಮನ್ನಣೆ ಸಿಕ್ಕಿದಂತಾಗಿದೆ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com