ತುಮಕೂರಿನ‌ ಮಠದಲ್ಲಿ ಬಿಗ್ ಬಾಸ್ ನವೀನ್

Published on

2178 Views

ಇದೀಗ ತಾನೆ ಕೊನೆಗೊಂಡ ಬಿಗ್ ಬಾಸ್ ರಿಯಾಲಿಟಿ ಶೋನಿಂದ ತನ್ನ ವಿಶಿಷ್ಟ ಗಾಯನ ಹಾಗೂ ಸನ್ನಡತೆಯಿಂದ ಕರ್ನಾಟಕದ ಮನೆಮಾತಾಗಿರುವ ಗಾಯಕ ಯುವ ಪ್ರತಿಭೆ ನವೀನ್ ಸಜ್ಜು ರನ್ನರ್ ಅಪ್ ಆಗಿ ಹೊರಹೊಮ್ಮಿದ್ದು ಎಲ್ಲರಿಗೂ ತಿಳಿದೆ ಇದೆ.

ಬಿಗ್ ಬಾಸ್ ಸ್ಪರ್ಧಿಗಳು ಮನೆಯೊಳಗಿದ್ದಾಗ ನಟ ಅಂಬರೀಷ್ ಅವರು ವಿಧಿವಶರಾಗಿದ್ದನು ಸುದೀಪ್ ಅವರು ತಿಳಿಸಿದಾಗ ಸ್ಪರ್ಧಿಗಳು ಸಂತಾಪ ವ್ಯಕ್ತಪಡಿಸಿದ್ದರು.
ವಿಶೇಷ ಏನೆಂದರೆ ಗಾಯಕ ನವೀನ್ ಬಿಗ್ ಮನೆಯಿಂದ ಹೊರಬಂದ ನಂತರ ಮೊದಲು ಭೇಟಿ ನೀಡಿದ್ದೇ ಅಂಬರೀಷ್ ಅವರ ಸಮಾಧಿಗೆ.

ಕಂಠೀರವ ಕ್ರೀಡಾಂಗಣದಲ್ಲಿರುವ ಸ್ಮಾರಕಕ್ಕೆ ಭೇಟಿ ನೀಡಿದ ನವೀನ್ ಅಂಬರೀಷ್ ಅವರ ಸಮಾಧಿಗೆ ಮಾಲಾರ್ಪಣೆ ಮಾಡಿ ನಮಿಸಿ, ಆಶೀರ್ವಾದ ಪಡೆದರು, ಅಂಬರೀಷ್ ಅವರೊಂದಿಗಿನ ನೆನಪುಗಳನ್ನು ಮೆಲುಕು ಹಾಕುತ್ತ ಭಾವುಕರಾದರು. ಮೂಲತಃ ಮಂಡ್ಯದವರೇ ಆಗಿರುವುದರಿಂದ ತಾವು ಸಹ ಜಲೀಲನ ಅಭಿಮಾನಿಯೆಂದು ತಿಳಿಸಿದರು

ನಂತರ ವರನಟ ಡಾ|| ರಾಜ್ ಕುಮಾರ್ ಅವರ ಸ್ಮಾರಕಕ್ಕೆ ತೆರಳಿ ಅಣ್ಣಾವ್ರ ಹಾಗೂ ಪಾರ್ವತಮ್ಮ ರಾಜ್‌ಕುಮಾರ್ ಅವರಿಗೂ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿ ಆಶೀರ್ವಾದ ಪಡೆದರು.

ಒಟ್ಟಾರೆ ಬಿಗ್ ಮನೆಯಿಂದ ಹೊರಬಂದ ನಂತರ ಮೋಜು ಮಸ್ತಿ ಪಕ್ಕಕ್ಕಿಟ್ಟು ಹಿರಿಯ ಕಲಾವಿದರ ಆಶೀರ್ವಾದ ಪಡೆದ ಯುವ ಪ್ರತಿಭಾವಂತ ಗಾಯಕ ನವೀನ್ ಸಜ್ಜು ಅವರ ಈ ನಡೆಗೆ ಎಲ್ಲೆಡೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com