“ಅಲ್ಲೇ ಡ್ರಾ ಅಲ್ಲೇ ಬಹುಮಾನ” ಇದು “ರತ್ನ ತೀರ್ಥ” ನಿರ್ದೇಶನ ಮಾಡುತ್ತಿರುವ ಚಿತ್ರದ ಶೀರ್ಷಿಕೆ

Published on

493 Views

ರಂಗಭೂಮಿಯಲ್ಲಿ ಪಳಗಿ ಧಾರಾವಾಹಿಗಳಲ್ಲಿ ಸಹಾಯಕ ನಿರ್ದೇಶಕನಾಗಿ
ನಂತರ ಕಿರುಚಿತ್ರಗಳನ್ನು ನಿರ್ದೇಶನ ಮಾಡುವ ಮೂಲಕ ಗಮನ ಸೆಳೆದಿದ್ದ
ರತ್ನ ತೀರ್ಥ ಅವರು ಮೊದಲ ಬಾರಿಗೆ ಚಿತ್ರವೊಂದನ್ನು ನಿರ್ದೇಶನ
ಮಾಡುತ್ತಿದ್ದಾರೆ. ಇವರು ನಿರ್ದೇಶನ ಮಾಡಲಿರುವ ಚಿತ್ರದ ಶೀರ್ಷಿಕೆ ಇಂದು ಬಿಡುಗಡೆಯಾಗಿದೆ.ಇಂದು ರತ್ನ‌ತೀರ್ಥ ಅವರ ಹುಟ್ಟು ಹಬ್ಬ ಹಾಗೂ ಹೊಸವರ್ಷದ ವಿಶೇಷ ದಿನವಾದ ಇಂದು ಚಿತ್ರದ ಶೀರ್ಷಿಕೆಯನ್ನು ಬಿಡುಗಡೆ ಮಾಡಿದ್ದಾರೆ.

ಚಂದನವನದ ಸ್ಟಾರ್ ನಿರ್ದೇಶಕ ಸಿಂಪಲ್ ಸುನಿ ಅವರು ಈ ಚಿತ್ರದ ಶೀರ್ಷಿಕೆನ್ನು ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಹಾಗೂ ರತ್ನ ತೀರ್ಥ ಅವರಿಗೆ ಶುಭಹಾರೈಸಿದ್ದಾರೆ. ಇನ್ನು ಟಗರು ಚಿತ್ರದಲ್ಲಿ “ಕಾನ್ಸ್‌ಟೇಬಲ್ ಸರೋಜ” ಪಾತ್ರದಲ್ಲಿ ನಟಿಸಿ ಕನ್ನಡಿಗರ ಮನಗೆದ್ದಿದ್ದ ನಟಿ ತ್ರಿವೇಣಿ ಕೃಷ್ಣ ಅವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇನ್ನುಳಿದಂತೆ “ಶೌರ್ಯ” ಎಂಬ ಯುವನಟ ಹಾಗೂ ರಂಗಭೂಮಿ ಹಿನ್ನೆಲೆಯ ಹಲವು ಕಲಾವಿದರು ಚಿತ್ರದಲ್ಲಿ ನಟಿಸಲಿದ್ದಾರೆ. ಇದೇ ತಿಂಗಳಲ್ಲಿ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆಯಾಗಲಿದೆ. ರತ್ನ ತೀರ್ಥ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳನ್ನು ತಿಳಿಸುತ್ತಾ ಅವರ ಹೊಸ ಚಿತ್ರಕ್ಕೆ ಶುಭಹಾರೈಸೋಣ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com