ನಂಬಿಕೆ ಮೂಡನಂಬಿಕೆಗಳ ನಡುವೆ ಅಳಿದು ಉಳಿದವರು..!!

Published on

433 Views

ಅಶು ಬೆದ್ರ ನಿರ್ಮಿಸಿ, ನಾಯಕನಾಗಿ ನಟಿಸಿರುವ ಕ್ರೈಮ್ ಥ್ರಿಲ್ಲರ್ ಕತೆ ಹೊಂದಿರುವ ಸಿನಿಮಾ ‘ಅಳಿದು ಉಳಿದವರು’ ಚಿತ್ರದಲ್ಲಿ ನಾಯಕ ಪತ್ರಕರ್ತನಾಗಿ ಮೂಡನಂಬಿಕೆ‌ ಬಗ್ಗೆ ಜನರಿಗೆ ಅರಿವು ಮೂಡಿಸುವ ಸಲುವಾಗಿ ದ್ವೆವ ಭೂತಗಳು ಏನು ಇಲ್ಲ ಎಂದು ತೋರಿಸುವ ಕಾರ್ಯಕ್ರಮ ಮಾಡುತ್ತಾ ಹೋಗುತ್ತಾನೆ. ಆತನ ಈ ಜರ್ನಿಯಲ್ಲಿ ಆಗೋ ಅನುಭವಗಳು, ಟಿ.ಆರ್.ಪಿ ಗಾಗಿ ನ್ಯೂಸ್ ಚಾನಲ್ ಗಳ ನಡುವಿನ ಸ್ಪರ್ಧೆ, ಪ್ರೀತಿ,ಒತ್ತಡ ಈ ಜಟಾಪಟಿಯ ನಡುವಿನ ರೋಚಕ ಟ್ವಿಸ್ಟ್ ಗಳೇ ಸಿನಿಮಾದ ಹೈಲೈಟ್ಸ್.


‘ಕಹಿ’ ಚಿತ್ರ ನಿರ್ದೇಶಕ ಅರವಿಂದ್ ಶಾಸ್ತ್ರಿ ನಿರ್ದೇಶಿಸಿರುವ ಈ ಚಿತ್ರದಲ್ಲಿ ಅಶು ಬೆದ್ರಗೆ ನಾಯಕಿಯಾಗಿ ಸಂಗೀತಾ ಭಟ್ ನಟಿಸಿದ್ದರೆ, ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಅತುಲ್ ಕುಲಕರ್ಣಿ ಮಿಂಚಿದ್ದಾರೆ. ಪವನ್ ಕುಮಾರ್, ದಿನೇಶ್ ಮಂಗಳೂರು ಸೇರಿ ಇನ್ನು ಹಲವು ನಟರುಗಳು ತಮ್ಮ ತಮ್ಮ ಪಾತ್ರಕ್ಕೆ ಜೀವ ತುಂಬಿದ್ದಾರೆ.

ಚಿತ್ರದಲ್ಲಿ ಅಭಿಷೇಕ್ ಕಾಸರಗೋಡುರವರ ಕ್ಯಾಮರಾ ಕೈಚಳಕ ಚೆನ್ನಾಗಿ ಮೂಡಿಬಂದಿದೆ. ಚಿತ್ರವು ಮೊದಲು ನಿಧಾನವಾಗಿ ಪಾತ್ರಗಳನ್ನು ಬಿಲ್ಡ್ ಮಾಡುತ್ತಾ ನಂತರ ವಿರಾಮದ ನಂತರ ವೇಗವನ್ನು ಪಡೆದುಕೊಳ್ಳುತ್ತ, ಕ್ಲೈಮಾಕ್ಸ್ ಕೂಡ ರೋಚಕವಾಗಿದ್ದು, ಬಿಗ್ ಟ್ವಿಸ್ಟ್ ನೀಡುತ್ತದೆ. ಪ್ರೇಕ್ಷಕರಿಗೆ ನಂಬಿಕೆ, ಮೂಡನಂಬಿಕೆಗಳ ನಡುವೆ ಗೊಂದಲವನ್ನು ಹುಟ್ಟಿಸುತ್ತದೆ. ಈ ಗೊಂದಲ ಏನು? ಎಂದು ತಿಳಿಬೇಕಾದರೆ ಥಿಯೇಟರ್ ಗೆ ಹೋಗಿ ‘ಅಳಿದು ಉಳಿದವರು’ ಸಿನಿಮಾ ನೋಡಬೇಕು.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com