ಮಾನವೀಯತೆ ಮೆರೆದ ನಟ ಮುರಳಿ..

Published on

506 Views


ಶ್ರೀ ಮುರಳಿ ನಟನೆಯ ‘ಭರಾಟೆ’ ಸಿನಿಮಾದ ಚಿತ್ರೀಕರಣ ಶ್ರೀರಂಗಪಟ್ಟಣದಲ್ಲಿ ಭರದಿಂದ ಸಾಗಿದೆ. ಕಳೆದೊಂದು ವಾರದಿಂದ ಮೈಸೂರು ಸುತ್ತಮುತ್ತ ಚಿತ್ರೀಕರಣ ನಡೆಯುತ್ತಿತ್ತು. ಇವತ್ತು ಶ್ರೀರಂಗಪಟ್ಟಣದ ಸ್ನಾನ ಘಟ್ಟದಲ್ಲಿ ಭರಾಟೆ ಚಿತ್ರೀಕರಣದ ಅದ್ದೂರಿ ಸಿದ್ಧತೆ ನಡೆದಿತ್ತು. ಇದೇ ಸಮಯದಲ್ಲಿ ಚಿತ್ರೀಕರಣದ ಸೆಟ್ ಬಳಿ ಆಗಮಿಸಿದ ರೋರಿಂಗ್ ಸ್ಟಾರ್ ಶ್ರೀ ಮುರಳಿ, ಅಲ್ಲಿದ್ದ ವೃದ್ಧ ಮಹಿಳೆಯನ್ನು ಗಮನಿಸಿದ್ದಾರೆ. ಅಲ್ಲದೇ ಮಹಿಳೆಯ ಹತ್ತಿರ ಹೋಗಿ ಅವರ ಬಗ್ಗೆ ವಿಚಾರಿಸಿ, ಮುಗ್ದತೆಯಿಂದ ಯೋಗಕ್ಷೇಮ ವಿಚಾರಿಸಿದ್ದಾರೆ. ಶ್ರೀ ಮುರಳಿಯನ್ನು ಕಂಡ ಮಹಿಳೆ ಬಹಳ ನೋವಿನಿಂದಲೇ ತಮ್ಮ ಕಷ್ಟಗಳನ್ನು ಹಂಚಿಕೊಂಡಿದ್ದಾರೆ. ಆ ಮಹಿಳೆಯ ಮಾತುಗಳನ್ನು ‌ಕೇಳಿದ ಮುರಳಿ ಮಹಿಳೆಗೆ ಸಹಾಯ ಮಾಡುವ ಭರವಸೆ ನೀಡಿದ್ದಾರೆ. ನಟನೆಯಲ್ಲಿ ‌ಮಾತ್ರ ಅಲ್ಲ, ನಿಜ ಜೀವನದಲ್ಲೂ ಹೀರೋ ತನವನ್ನು ಮೆರೆದಿದ್ದಾರೆ ಶ್ರೀಮುರುಳಿ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com