ಮುಂಗಾರು ಮಳೆಯ ಭಟ್ರು ಚಳಿಗಾಲದಲ್ಲಿ ಐಸ್‍ಕ್ರೀಮ್ ಮಾರಿದ್ದಾರೆ

Published on

187 Views

ಸದಾ ನಿಮ್ಮೊಂದಿಗೆ ಇದೇ ಭಾನುವಾರ (23.12.18) ರಾತ್ರಿ 9ಕ್ಕೆ

ಸದಾ ನಿಮ್ಮೊಂದಿಗೆ ಕಾರ್ಯಕ್ರಮದ ಕಳೆದ ಸಂಚಿಕೆಯಲ್ಲಿ ಲೂಜ್ ಮಾದ ಯೋಗಿ ಸಚಿನ್ ಅವರಿಗೋಸ್ಕರ ಬಲೂನ್ ಮಾರಿ ಸಹಾಯ ಮಾಡಿದ್ದರು.
ಈ ವಾರದ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವವರು ಹೆಸರಾಂತ ನಿರ್ದೇಶಕ, ವಿಕಟ ಕವಿ ಯೋಗರಾಜ್ ಭಟ್. ಶಿವಕುಮಾರ್ ಎಂಬ ಕ್ರೀಡಾಪಟುವಿಗಾಗಿ ಐಸ್‍ಕ್ರೀಮ್ ಮಾರಿ ಸಹಾಯ ಮಾಡಿದ್ದಾರೆ. ಹಾಗೆ ಇವರ ಜೊತೆ ಪಂಚತಂತ್ರ ಚಿತ್ರದ ನಾಯಕ ವಿಹಾನ್ ಗೌಡ ಕೂಡಾ ಭಾಗವಹಿಸಿದ್ದಾರೆ.

ಶಿವಕುಮಾರ್ ಖೋ ಖೋ ಕ್ರೀಡಾಪಟುವಾಗಿದ್ದು ಮನೆಯಲ್ಲಿ ತೊಂದರೆಗಾಗಿ ತಮ್ಮ ಆಟ-ಪಾಟವನ್ನು ಬದೆಗೊತ್ತಿ ಕೆಲಸವನ್ನು ಮಾಡುತ್ತಿದ್ದಾರೆ
ಶಿವಕುಮಾರವರಿಗೆ ಇಬ್ಬರು ಅಕ್ಕಂದಿರು, ಅವರ ಮದುವೆಗಾಗಿ ತಂದೆ ಮಾಡಿದ ಸಾಲ ತೀರಿಸೋಕೆ ತಮ್ಮ ವಿದ್ಯಾಭ್ಯಾಸವನ್ನು ಅರ್ಧಕ್ಕೆ ನಿಲ್ಲಿಸಿ ಹೂವಿನ ವ್ಯಾಪಾರ ಮಾಡುತ್ತಿದ್ದಾರೆ.
ಶಿವಕುಮಾರ್ 2017ರ ಅಂತರಾಷ್ಟ್ರೀಯ ಖೋ ಖೋ ಪಂದ್ಯಾವಳಿಯಲ್ಲಿ ಇಂಗ್ಲೆಂಡ್ ವಿರುದ್ಧ ಗೆದ್ದು ಪ್ರಥಮ ಸ್ಥಾನ ಪಡೆಯುವ ಮುಖಾಂತರ ಭಾರತಕ್ಕೆ ಚಿನ್ನದ ಪದಕ ತಂದುಕೊಟ್ಟಿದ್ದಾರೆ. ಇಂಥ ಫ್ರತಿಭೆ ಸಂಪೂರ್ಣವಾಗಿ ಕ್ರೀಡೆಯಲ್ಲಿ ತೊಡಗದಿರಲು ಅಕ್ಕಂದಿರ ಮದುವೆಯ ಸಾಲ ಅಡ್ಡಿಯಾಗಿದೆ.

ಯೋಗರಾಜ್ ಭಟ್ರು ಹಾಗೂ ವಿಹಾನ್ ಅವರು ಶಿವಕುಮಾರ್ ಗಾಗಿ ಸಂಗ್ರಹಿಸಿದ ಹಣವೇಷ್ಟು? ಎಂಬುದನ್ನು ಕಾದು ನೋಡಬೇಕಾಗಿದೆ.

“ಸದಾ ನಿಮ್ಮೊಂದಿಗೆ” ಇದೇ ಭಾನುವಾರ ರಾತ್ರಿ 9ಕ್ಕೆ ಉದಯ ಟಿವಿಯಲ್ಲಿ ಪ್ರಸಾರವಾಗುತ್ತದೆ.

Copyright ©2024 . All Rights Reserved. privacy | terms Whatsapp: 9538193653 Email: hello@flixoye.com