ಧರ್ಮಗಿರಿ ಮಂಜುನಾಥನ ಸನ್ನಿಧಿಯಲ್ಲಿ “ವರ್ಣತರಂಗ” ಕ್ಕೆ ಚಾಲನೆ

Published on

814 Views
Advertisement

ಶ್ರೀ ಪಾಷಾಣಮೂರ್ತಿ ಸಿನಿ ಕ್ರಿಯೇಷನ್ಸ್ ಮೂಲಕ ಯುವ ಪಡೆಗಳು ಸೇರಿಕೊಂಡು ನಿರ್ಮಿಸುತಿರುವಂತಹ ಚಿತ್ರ “ವರ್ಣತರoಗ” ಶ್ರೀ ಧರ್ಮಗಿರಿ ಮಂಜುನಾಥ ಸ್ವಾಮಿ ದೇವಸ್ಥಾನದ ಸನ್ನಿಧಿಯಲ್ಲಿ ಮುಹೂರ್ತ ಸಮಾರಂಭ ಬಹಳ ಅಚ್ಚುಕಟ್ಟಾಗಿ ಆಯೋಜಿಸಲಾಗಿತ್ತು , ದಿಯಾ ಚಿತ್ರದ ನಿರ್ಮಾಪಕರಾದ ಕೃಷ್ಣ ಚೈತನ್ಯ ಕ್ಲಾಪ್ ಮಾಡುವ ಮೂಲಕ ಚಿತ್ರ ತಂಡಕ್ಕೆ ಶುಭ ಹಾರೈಸಿದರು. ಇದೇ ಸಂದರ್ಭದಲ್ಲಿ ಸ್ನೇಹಿತರು , ಕುಟುಂಬದ ಹಿತೈಷಿಗಳು ಕೂಡ ಹಾಜರಿದ್ದರು. ಕಿರುತೆರೆಯಲ್ಲಿ ಧಾರಾವಾಹಿ ನಿರ್ದೇಶಿಸಿದ ತೀರ್ಥೇಶ್.ಕೆ. ಪ್ರಪ್ರಥಮ ಬಾರಿಗೆ ಬೆಳ್ಳಿ ಪರದೆಗೆ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಇತ್ತೀಚೆಗೆ ಚಿತ್ರ ತಂಡ ಪತ್ರಿಕಾಗೋಷ್ಠಿಯನ್ನು ಆಯೋಜಿಸಿದ್ದು , ಚಿತ್ರದ ಕುರಿತು ಒಂದಿಷ್ಟು ಮಾಹಿತಿಯನ್ನು ಹಂಚಿಕೊಳ್ಳಲು ಮುಂದಾಗಿದ್ದು ಚಿತ್ರದ ಕುರಿತು ನಿರ್ದೇಶಕ ತೀರ್ಥೇಶ್. ಕೆ . ಮಾತನಾಡುತ್ತಾ , ವರ್ಣತರಂಗ ಎಂದರೆ ಬಣ್ಣಗಳ ಅಲೆಗಳು ಎಂಬ ಅರ್ಥ ಬರುತ್ತದೆ ,

ಒಬ್ಬೊಬ್ಬ ಮನುಷ್ಯನಲ್ಲಿಯೂ ಒಂದೊಂದು ರೀತಿಯ ವರ್ಣಗಳು ಇರುತ್ತದೆ. ಅವನ ಆಲೋಚನೆ ಮನಸ್ಥಿತಿ ಎಲ್ಲವೂ ಒಳಗೊಂಡಿರುತ್ತದೆ. ಹಾಗಾಗಿಯೇ ಈ ಶೀರ್ಷಿಕೆ ನಮ್ಮ ಚಿತ್ರಕ್ಕೆ ಹೋಲುತ್ತದೆ , ಅಡಿಬರಹದಲ್ಲಿ ಎ ಲಾಸ್ಟ್ ಫೇಸ್ ಎಂದು ಕೂಡ ಹಾಕಿದ್ದೇವೆ. ಇದೊಂದು ಕ್ರೈಂ, ಸಸ್ಪೆನ್ಸ್ ಹಾಗೂ ಥ್ರಿಲ್ಲರ್ ಸಬ್ಜೆಕ್ಟ್ ಒಳಗೊಂಡಿದೆ. ಪ್ರತಿ ಹಂತದಲ್ಲೂ ಏರಿಳಿತಗಳು ಕೂಡಿದೆ. ಈ ಚಿತ್ರದ ಮತ್ತೊಂದು ವಿಶೇಷ ಏನೆಂದರೆ , 1865 ರ ಕಾಲಘಟ್ಟದ ಎಳೆಯು ಕೊಡ ಕಾಣಸಿಗಲಿದೆಯಂತೆ. ಬ್ರಿಟಿಷರ ವಿರುದ್ಧ ಗುರೂಜಿಯೊಬ್ಬರು ಹೋರಾಡುವ ಅಂಶ ಚಿತ್ರದ ಹೈಲೈಟ್ ಆಗಲಿದೆ. ಇದಕ್ಕಾಗಿ ಸಿ.ಜಿ. ವರ್ಕ್ ಹಾಗೂ ಎಫೆಕ್ಟ್ ಕೆಲಸಗಳು ಮಾಡುತ್ತಿದ್ದೇವೆ. ಚಿತ್ರದಲ್ಲಿ ಸುಮಾರು 20% ರಷ್ಟು ಗ್ರಾಫಿಕ್ ಅಂಶವು ಕಾಣುತ್ತದೆ. 4 ಹಂತದಲ್ಲಿ ಚಿತ್ರೀಕರಣ ಮಾಡಲು ನಿರ್ಧರಿಸಿದ್ದು , ಸದ್ಯ ಕಂಠೀರವ ಸ್ಟುಡಿಯೋದಲ್ಲಿ ಮೊದಲ ಹಂತದ ಚಿತ್ರೀಕರಣ ಆರಂಭಿಸಲಿದೇವೆ. ನಾನು ಮೂಲತಃ ತ್ರಿಡಿ ಅನಿಮೇಟರ್ ಹಾಗೂ ಗ್ರಾಫಿಕ್ ಡಿಸೈನರ್ ಆಗಿರುವದರಿoದ ಬಹಳ ಸೂಕ್ಷ್ಮವಾಗಿ ಚಿತ್ರವನ್ನು ತೆರೆಗೆ ತರುವ ಆಲೋಚನೆ ಇದೆ. ನಾವು ಪೂರ್ವ ತಯಾರಿಯೊಂದಿಗೆ ಮುನ್ನುಗ್ಗಿದ್ದು , ಇಂದು ಮುಹೂರ್ತ ವನ್ನು ಆಚರಿಸಿಕೊಂಡಿದೆ. ನಿಮ್ಮೆಲ್ಲರ ಸಹಕಾರ ಇರಲಿ ಎಂದು ಕೇಳಿಕೊಂಡರು.

Advertisement

Advertisement

ಇನ್ನೂ ಈ ಚಿತ್ರದ ಪ್ರಮುಖ ಪಾತ್ರಧಾರಿ ತಿಲಕ್ ಮಾತನಾಡುತ್ತಾ ಇದೊಂದು ವಿಭಿನ್ನ ಚಿತ್ರವಾಗಲಿದೆ , ನಿರ್ದೇಶಕರು ಉತ್ತಮವಾಗಿ ಕತೆಯನ್ನ ಮಾಡಿಕೊಂಡಿದ್ದಾರೆ. ನಾನು ಈ ಚಿತ್ರದಲ್ಲಿ ಇನ್ವೆಸ್ಟಿಗೇಷನ್ ಆಫೀಸರ್ ಪಾತ್ರವನ್ನು ನಿರ್ವಹಿಸುತ್ತಿದ್ದೇನೆ. ಇದು ಕ್ರೈo ಹಾಗೂ ಸಸ್ಪೆನ್ಸ್ ಸುತ್ತ ನಡೆಯೋ ಕಥೆ. ಹೊಸ ಟೀo ಆದ್ರೂ ಪ್ಲನ್ ಚೆನ್ನಾಗಿ ಮಾಡಿಕೊಂಡಿದ್ದಾರೆ ನಮ್ಮ ತಂಡಕ್ಕೆ ಬೆoಬಲ ನೀಡಿ ಎoದರು.
ಮತ್ತೊಬ್ಬ ಯುವ ನಟ ವರ್ಧನ್ ಮಾತನಾಡುತ್ತಾ ಈ ಚಿತ್ರದಲ್ಲಿ ನನಗೆ ವಿಭಿನ್ನ ಪಾತ್ರವನ್ನು ನೀಡಿದ್ದಾರೆ ಎoದರು. ಇವರದ್ದು ಸೈಕ್ಯಟ್ರಿಸ್ಟ್ ಪಾತ್ರ ನಿರ್ವಹಿಸಲಿದ್ದಾರೆ ಎoದು ನಿರ್ದೇಶಕರು ಹೇಳಿದ್ದಾರೆ.
ಈ ಚಿತ್ರದಲ್ಲಿ ನಾಯಕಿಯಾಗಿ ಯುವ ನಟಿ ಮೇಘನಾ ಕಾಣಿಸಿಕೊಳ್ಳುತ್ತಿದ್ದಾರೆ. ಬಹಳ ವಿಶೇಷವಾದ ಪಾತ್ರವಾಗಿದ್ದು , ಚಿತ್ರದಲ್ಲಿ ಪತ್ರಕರ್ತೆಯ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಉಳಿದoತೆ ಅನುಭವಿ ಹಾಗೂ ಹೊಸ ಪ್ರತಿಭೆಗಳು ಕೂಡ ಈ ಚಿತ್ರದಲ್ಲಿ ಅಭಿನಯಿಸಲಿದ್ದಾರoತೆ. ಶಿವಕುಮಾರ್ .ಬಿ. ರವರ ನಿರ್ಮಾಣದ ಈ ಚಿತ್ರಕ್ಕೆ ರಮೇಶ್ ರಾಜ್ ಛಾಯಾಗ್ರಹಣ , ವಿಜಯ್ ಯಾರ್ಡ್ಲಿ ಸಂಗೀತ ನೀಡಿದ್ದಾರೆ. ಇನ್ನೂ ಹೆಚ್ಚಿನ ಮಾಹಿತಿಗಳನ್ನು ಮುಂದಿನ ದಿನಗಳಲ್ಲಿ ತಂಡ ಹಂತ ಹಂತವಾಗಿ ನೀಡಲಿದೆಯಂತೆ.

Advertisement

More Buzz

Buzz 8 hours ago

ಅಣ್ಣ ಫ್ರಂ ಮೆಕ್ಸಿಕೋ ಟೀಸರ್: ಡಾಲಿ ಧನಂಜಯ್‌ರಿಂದ ವಿಶ್ವವಿಖ್ಯಾತ ಅಸ್ತ್ರ!

Buzz 1 day ago

KD ಟ್ರೇಲರ್ ಬಿಡುಗಡೆ: ಧ್ರುವ ಸರ್ಜಾ, ಸಂಜಯ್ ದತ್ ರಬ್ಬರ್ smashing!

Buzz 4 days ago

ರುದ್ರತಾಂಡವ: ‘Ruthless’ ಕನ್ನಡ ಕಿರುಚಿತ್ರ | ಧನು ಹರ್ಷರ ವೀರೋಚಿತ ನಟನೆ!

Buzz 4 days ago

ದೇವ್ ದಾಸ್ ನಾ ಲೀಲಾ: ತುಳು ಚಿತ್ರದ ಟ್ರೇಲರ್ ಬಿಡುಗಡೆ!

Buzz 5 days ago

ಮಿಸ್ಟರ್ ಎಕ್ಸ್: 90ರ ದಶಕದ ಮರೆಯಲಾಗದ ಥ್ರಿಲ್ಲರ್!

Buzz 5 days ago

Mr. X: Kannada Cinema’s New Enigma Unfolds!

Buzz 7 days ago

ಅಚ್ಯುತ ಅವತಾರಂ: ಮೂರನೇ ಲುಕ್ ಬಿಡುಗಡೆ, 2026ರ വിഷುಗೆ ಸ್ಯಾಂಡಲ್‌ವುಡ್‌ಗೆ ಲಗ್ಗೆ!

Buzz 1 week ago

ಸೀತಾರಾಮ್’ ಎರಡನೇ ಪ್ರಕರಣ: ಥ್ರಿಲ್ಲರ್ ಸಿನೆಮಾ ಈಗ OTTಯಲ್ಲಿ!

Buzz 1 week ago

Assi: ZEE5 Film Tackles Stark Reality with Urgent Voice

Buzz 1 week ago

ಕೆಂಡದ ಸೆರಗು: ನಾಳೆ ತೆರೆಗೆ, ಮನಸ್ಸಲ್ಲಿ ಉಳಿಯುವ ಕಥೆಯಿದು!

Buzz 1 week ago

Ustaad Bhagat Singh Hits Netflix: Kannada Fans Rejoice!

Buzz 1 week ago

Do Deewane Seher Mein: Netflix Date Set!

Copyright ©2026 . All Rights Reserved. privacy | terms Whatsapp: 9538193653 Email: hello@flixoye.com