Su from So Review – ಕನ್ನಡದ ಬೆಸ್ಟ್ ಕಾಮಿಡಿ ಮೂವಿ ವಿಮರ್ಶೆ
Su from So – ಕನ್ನಡದ ಬೆಸ್ಟ್ ಕಾಮಿಡಿ ಮೂವಿ ಲಿಸ್ಟ್ ಗೆ ಸೇರಲಿರುವ ಈ ವರ್ಷದ ಸಿನಿಮಾ.
Su fro So Review ಕನ್ನಡದ ಬೆಸ್ಟ್ ಕಾಮಿಡಿ ಮೂವಿ . ಕಥೆಯ ಕೇಂದ್ರದಲ್ಲಿರುವುದು ಮಂಗಳೂರಿನ ಸಮೀಕ್ಷಿತ “ಮಡಯಾರ್” / “ಮಾರ್ಲೂರಾ” ಗ್ರಾಮ: ಅಲ್ಲಿ ಅಶೋಕ (ಜಿಪಿ ತುಮಿನಾಡ್ ರಂಗಭೂಷಣಕ್ಕೆ ಹಾಗೂ ಪಾತ್ರಕ್ಕೆ ಅರ್ಹ) ಎಂಬ ವ್ಯಕ್ತಿಯ ಮೇಲೆ ಸುಲೋಚನ ಎಂಬ ಆತ್ಮ ಹೊಕ್ಕಿರುತ್ತದೆ ಎನ್ನುವ ಹಾಸ್ಯಮಯ ಕಥೆ.
ಕನ್ನಡದ ಬೆಸ್ಟ್ ಕಾಮಿಡಿ ಮೂವಿ ಲಿಸ್ಟ್ ಗೆ ಸೇರಲಿರುವ ಈ ವರ್ಷದ ಸಿನಿಮಾ. ಊರಿನಲ್ಲಿ ಮೇಸ್ತ್ರಿಯಾಗಿರುವ ರವಿಯಣ್ಣ (ಶನಿಲ್ ಗೌತಮ್) ಎಲ್ಲರಿಗೂ ಅಚ್ಚುಮೆಚ್ಚು. ರವಿಯಣ್ಣ ಮದುವೆಯಾಗದ, ಇನ್ನು ಹುಡುಗಿಯನ್ನು ಹುಡುಕುತ್ತಿರುವ ಸ್ವಲ್ಪ ಮೂವತೈದರ ಆಸುಪಾಸಿನ ವ್ಯಕ್ತಿ ಎಂದರು ತಪ್ಪಾಗಲಾರದು. ಊರಿನಲ್ಲಿ ಮದುವೆ, ತಿಥಿ ಯಾವುದೇ ಸಮಾರಂಭ, ಇಲ್ಲ ಯಾವುದೇ ಸಮಸ್ಯೆಗಳಿಗೆ ರವಿಯಣ್ಣನಿಂದ ಸಲಹೆ , ಸೂಚನೆ ಅತ್ಯಗತ್ಯ. ಊರಿನ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಸಿಗುವುದು ರವಿಯಣ್ಣ ನಲ್ಲೇ, ತೋರಿಕೆಗೆ ಈತ ಧೈರ್ಯಶಾಲಿ . ಎಲ್ಲಾ ಸಂದರ್ಭದಲ್ಲಿ ಜೊತೆಯಲ್ಲಿರೋ ಸತೀಶನಿಗೆ (ದೀಪಕ್ ರೈ ಪಾಣಾಜೆ) ಹಾಗೂ ಚಂದ್ರ ನಿಗೆ (ಪ್ರಕಾಶ್ ತುಮಿನಾಡು) ಯಾವಾಗಲೂ ರವಿಯಣ್ಣನೇ ಮೊದಲ ಆದ್ಯತೆ. ಹೀಗಾಗಿ ರವಿಯಣ್ಣನಿಗೆ ಕೆಲವು ಸಂದರ್ಭಗಳು ಅನುಕೂಲ ಎನಿಸ್ಸಿದ್ದರು , ಕೆಲವೊಮ್ಮೆ ಅನನುಕೂಲನು ಕೂಡ ಹೌದು.
ಪೈಂಟರ್ ಕೆಲಸ ಮಾಡುತ್ತಿರುವ ಅಶೋಕ( J P thuminad) ನಿಗೆ ಊರಿನ ಹುಡುಗಿಯೊಬ್ಬಳ ಮೇಲೆ ಪ್ರೀತಿ. ರವಿಯಣ್ಣನಿಗೆ ಸಿಗುತ್ತಿರುವ ಮೊದಲ ಆದ್ಯತೆ ಅಶೋಕನಿಗೆ ಹೊಟ್ಟೆ ಕಿಚ್ಚು. ಅಶೋಕನ ಮೇಲಿರುವ ಆತ್ಮ ರವಿಯಣ್ಣನಿಗೆ ದೊಡ್ಡ ಸಮಸ್ಯೆ. ಪರಿಹಾರಕ್ಕಾಗಿ ಕರುಣಾಕರ (ರಾಜ್ ಬಿ ಶೆಟ್ಟಿ) ಗುರೂಜಿಯ ಆಗಮನ. ಸುಲೋಚನಾ ನ ಮಗಳು ಭಾನು (ಸಂಧ್ಯಾ ಅರೆಕೆರೆ) ಹಾಗೂ ಅಶೋಕನ (ಸುಲೋಚನ) ನಡುವೆ ನಡೆಯುವ ಮಾತುಕತೆ. ಕೊನೆಯದಾಗಿ ಭಾನುವಿನ ಸಮಸ್ಯೆಯ ಪರಿಹಾರಕ್ಕೆ ಅವಳ ತಾಯಿಯ ಆತ್ಮದ ಹೋರಾಟ ಎನ್ನುವುದು ಜನಸಾಮಾನ್ಯರ ಅಭಿಪ್ರಾಯ.

Su from So Review – Danks Anthem
ಕರಾವಳಿ ಭಾಗದವರ ಸಾವಿನ ಮನೆಯಲ್ಲಿ ನಡೆಯುವ ತಮಾಷೆ, ಪಿತೃ ಗಳಿಗೆ ಊಟ ಹಾಕಿ ಇಡುವ ಸಂಪ್ರದಾಯ, ಮದುವೆ ಸಮಾರಂಭಕ್ಕೆ ಹೋಗುವ ತರಾತುರಿ, ಮುಖ್ಯವಾಗಿ ರಿಸೆಪ್ಶನ್ ಅಲ್ಲಿ ಮಾಡೋ ಮೋಜು ಮಸ್ತಿ, ತರಕಾರಿ ಊಟಕ್ಕಿಂತ , ಮೀನು ಕೋಳಿ ಊಟಕ್ಕೆ ಏನೇ ಕೆಲಸ ಇದ್ದರು ಬಿಟ್ಟು ಹಾಜರಿರುತ್ತಾರೆ ಎನ್ನುವುದು ತುಂಬ ಸ್ವಾಭಾವಿಕವಾಗಿ ಮೂಡಿ ಬಂದಿದೆ.
ಮದುವೆ ಸಮಾರಂಭ ಗಳಲ್ಲಿ ಅಕ್ಕನ ಗಂಡನ ಡ್ರಾಮಾ. ಯಾವುದೋ ಒಂದು ಹಳೆ ಭೂತದ ಕಥೆ ಹೇಳ್ಬೇಕಾದ್ರೆ ಒಬ್ಬ ವ್ಯಕ್ತಿಗೆ ಮೈ ಮೇಲೆ ಭೂತ ಬಂದಾಗ ಆ ವ್ಯಕ್ತಿ ಮಾಡೋ ಶಬ್ದ. ಇದೆಲ್ಲ ತಿಳಿದವರಿಗೆ ಅಥವಾ ನೋಡಿಕೊಂಡು ಬೆಳೆದವರಿಗೆ ಈ ಚಿಕ್ಕ ಚಿಕ್ಕ ವಿಚಾರಗಳಲ್ಲಿ ನೈಜತೆಯನ್ನು ನೆನೆದು ಹೊಟ್ಟೆ ತುಂಬ ನಗು ಬರುವುದು ಖಂಡಿತ. ಒಟ್ಟಾರೆಯಾಗಿ ಹಳ್ಳಿಯ ಜನರ ಸಂಪ್ರದಾಯವನ್ನು ತೋರಿಸುವ ಪ್ರಯತ್ನ ತುಂಬಾ ಚೆನ್ನಾಗಿತ್ತು.
ಪಿತೃ ಗಳಿಗೆ ಊಟವಿಟ್ಟಾಗ, ಮನೆಯೊಳಗೆ ಹೋಗಬಾರದು , ಹೋದರೆ ಆ ಆತ್ಮ ನೋಡಿದ ವ್ಯಕ್ತಿಯ ಮೈ ಮೇಲೆ ಬರುವುದು ಎನ್ನುವುದು ವಾಡಿಕೆ. ಆದರೆ ಅಶೋಕ ತನ್ನ ಹುಡುಗಿಯ ಫೋನ್ ಕಾಲ್ ರಿಸೀವ್ ಮಾಡುವ ಉದ್ದೇಶ ದಿಂದ ಮನೆಯೊಳಗೆ ಹೋಗುವುದು ಒಂದು ಮುಖ್ಯವಾದ ಸನ್ನಿವೇಶ. ಆದರೆ ಮುಂದೊಂದು ದಿನ ಅಶೋಕ ಯಾರೋ ಸ್ನಾನಮಾಡುವಾಗ ಇಣುಕಿ ನೋಡಿ ಸಿಕ್ಕಿಹಾಕಿಕೊಳ್ಳುವ ಸಂದರ್ಭದಲ್ಲಿ, ಈ ಜನರ ನಂಬಿಕೆಯ ಆತ್ಮವನ್ನು ಪರಿಹಾರವಾಗಿ ಉಪಯೋಗೋಸಿಕೊಳ್ಳುತ್ತಾನೆ. ಇದರಿಂದ ಹೊರಬರಲು ಮಾಡಿದ ನಾಟಕ, ಜನರ ಬಾಯಲ್ಲೇ ಹುಟ್ಟಿದ ಸುಲೋಚನನ ಆತ್ಮ. ಮುಂದೆ ಬರುವ ಸೋಮೇಶ್ವರದ ಸುಲೋಚನ, ಅವಳ ಮಗಳು ಭಾನುವಿನ ಸಮಸ್ಯೆಗೆ ಪರಿಹಾರವಾಗಿ ಬದಲಾಗುವುದು. ಅಶೋಕನ ಸಮಸ್ಯೆಗೆ ಪರಿಹಾರ ವಾಗಿ ಹುಟ್ಟಿದ ಸೋಮೇಶ್ವರದ ಸುಲೋಚನ, ಭಾನುವಿನ ಸಮಸ್ಯೆಗೆ ಪರಿಹಾರ ವಾಗುತ್ತಾಳೆ. ಈ ಭಾನುವು ರವಿಯಣ್ಣನು ಮದುವೆ ಆಗಲು ನೋಡಲು ಹೋದ ಮೊದಲ ಹುಡುಗಿ ಎನ್ನುವುದು ಕಾಲ್ಪನಿಕ ಕಥೆಗೆ ಇನ್ನು ಬಣ್ಣ ಹಚ್ಚುತ್ತದೆ. ಕೊನೆಯದಾಗಿ ಇದೆಲ್ಲ ನೈಜ ಪ್ರಕರಣ ಕರಾವಳಿಯ ಜನರಿಗೆ ಈ ಚಿತ್ರ ಒಂಥರ ಫುಲ್ ಚಿಕನ್ ಅಥವಾ ಫಿಶ್ ಊಟ ಮಾಡಿದ ಅನುಭವ ಎಣಿಸಿದ್ದರೂ ತಪ್ಪಾಗಲಾರದು.
ಅಶೋಕನ ಲವ್ ಸ್ಟೋರಿ, ಸ್ನಾನ ಮಾಡುವಾಗ ಇಣುಕಿ ನೋಡಿದವನ ನಿಖರ ಹುಡುಕಾಟ, ಇವೆರೆಡು ವಿಚಾರಗಳು ಚಿತ್ರದಲ್ಲಿ ಸೇರಿದ್ದರೆ, ಪ್ರೇಕ್ಷಕರ ಮನರಂಜನೆಗೆ ಮತ್ತಷ್ಟು ರೋಮಾಂಚಕ ಕಾರಣವಾಗಿರುತ್ತಿತ್ತು.
Su From So ಟ್ರೈಲರ್ – ಹಾಸ್ಯಮಯ ಸಿನಿಮೀಯ ಪ್ರಯಾಣ click here to watch trailer