ಶೀಘ್ರದಲ್ಲೇ ತೆರೆಗೆ ಬರಲಿದೆ ಆರ್.ರವಿಂದ್ರ ಅವರ “ಮನಸ್ಸಿನಾಟ”

Published on

313 Views

ಸರ್ಕಾರಿ ಕೆಲಸ ದೇವರ ಕೆಲಸ ಚಿತ್ರವನ್ನು ನಿರ್ದೇಶನ ಮಾಡಿದ್ದ ನಿರ್ದೇಶಕ ಆರ್‌.ರವೀಂದ್ರ ಅವರು ನಿರ್ದೇಶನ ಮಾಡಿರುವ ಮನಸ್ಸಿನಾಟ ಚಿತ್ರವು ಸದ್ಯದಲ್ಲೇ ತೆರೆಗೆ ಬರಲಿದೆ. ಪ್ರಪಂಚದಾದ್ಯಂತ ಸಂಚಲನ ಮೂಡಿಸಿ ಆತ್ಮಹತ್ಯೆಗೆ ಪ್ರೇರೇಪಿಸಿ ಹಲವು ಅಮಾಯಕರನ್ನು ಬಲಿತೆಗೆದುಕೊಂಡ ಬ್ಲೂವೆಲ್ ಗೇಮ್ ಕುರಿತ ಕಥೆ ಈ ಚಿತ್ರದಲ್ಲಿ ಇದ್ದು, ಇದು ಮಕ್ಕಳನ್ನು ಮನಸ್ಸಿಗೆ ಏನೆಲ್ಲ ಎಪೆಕ್ಟ್ ಆಗುತ್ತೆ ಎಂಬುದನ್ನು ತೋರಿಸಲಿದ್ದಾರೆ ನಿರ್ದೇಶಕರು.ಚಿತ್ರವು ಸೆನ್ಸಾರ್ ಮುಗಿಸಿದ್ದು ಚಿತ್ರಕ್ಕೆ ಯು ಸರ್ಟಿಫಿಕೇಟ್ ನೀಡಲಾಗಿದೆ. ನಿಕೇತನ್ ಸಿನಿಮಾಸ್ ಬ್ಯಾನರ್  ಅಡಿಯಲ್ಲಿ ಡಿ.ಮಂಜುನಾಥ್ ಹಾಗೂ ಹನುಮೇಶ್ ಗಂಗಾವತಿ ಅವರು ನಿರ್ಮಾಣ ಮಾಡಿರುವ ಈ ಚಿತ್ರಕ್ಕೆ ಪಳನಿ.ಡಿ.ಸೇನಾಪತಿ ಅವರು ಸಂಗೀತ ಸಂಯೋಜನೆ ಮಾಡಿದ್ದಾರೆ. ಚಿತ್ರದಲ್ಲಿ ಹಲವು ಹೆಸರಾಂತ ಕಲಾವಿದರು ನಟಿಸಿದ್ದಾರೆ‌.

Copyright ©2024 . All Rights Reserved. privacy | terms Whatsapp: 9538193653 Email: hello@flixoye.com