ನಡೆದಾಡುವ ಸಂಗೀತ ವಿಶ್ವವಿದ್ಯಾಲಯದ ಮುಂದೆ ಕುಳಿತು…

Published on

552 Views
Advertisement

ಪವಡಿಸು ಪರಮಾತ್ಮ
ಶ್ರೀ ಬಾಲಸುಬ್ರಹ್ಮಣ್ಯ…

ಆಕಾಶದ ವಿಸ್ತಾರವನ್ನು ವಿವರಿಸಲಾಗುವುದಿಲ್ಲ ; ಕಡಲಿನ ಆಳವನ್ನು ಅಳೆಯಲಾಗುವುದಿಲ್ಲ ಹಾಗೆಯೇ ಸಂಗೀತದಲ್ಲಿ ಎಸ್ ಪಿ ಬಾಲಸುಬ್ರಹ್ಮಣ್ಯಮ್.

Advertisement

ಇವತ್ತಿಗೆ ಸರಿಯಾಗಿ ಹದಿನಾರು ವರ್ಷಗಳ ಹಿಂದೆ ಈ ಟಿವಿಯ
‘ಎದೆ ತುಂಬಿ ಹಾಡುವೆನು’ ಕಾರ್ಯಕ್ರಮದ ಶೂಟಿಂಗ್ ಸೆಟ್ ನಲ್ಲಿ ಈ ಸಂಗೀತದ ದೇವರೊಂದಿಗೆ ಸಂವಾದಿಸುವ ಒಂದು ಅವಕಾಶದಲ್ಲಿ ನಮ್ಮ ಎದೆ ತುಂಬಾ ಆವರಿಸಿಕೊಂಡು ಕುಳಿತಿದ್ದರು.

ಬೆಳದಿಂಗಳ ಕವಿ ಕೆ ಕಲ್ಯಾಣ್ ಅವರೊಂದಿಗೆ ಹೋದಾಗ ತುಂಬು ತೋಳಿನ ಬನಿಯನ್ ತೊಟ್ಟು ಊಟಕ್ಕೆ ಕುಳಿತಲ್ಲಿಂದಲೇ ಸ್ವಾಗತಿಸಿದ ಗಾನ ಗಂಧರ್ವ ನಮ್ಮ ಪ್ರೆಸ್ ಕ್ಲಬ್ ಸಂಗೀತ ರಸಮಂಜರಿ ಕಾರ್ಯಕ್ರಮ ನಡೆಸಿಕೊಡಲು ತುಂಬು ಮನಸಿನಿಂದ ಒಪ್ಪಿಗೆ ನೀಡಿದರು.

Advertisement

ಅವರ ಕಾರ್ಯಕ್ರಮದ ಮೂಲಕ ಪತ್ರಕರ್ತರ ಆರೋಗ್ಯ ನಿಧಿಯನ್ನು ಸ್ಥಾಪಿಸುತ್ತಿರುವ ವಿಷಯ ತಿಳಿದ ನಂತರ ತಮ್ಮ ಸಂಭಾವನೆಯನ್ನು ಆ ಫಂಡ್ ಗೆ ಬಿಟ್ಟುಕೊಟ್ಟು ದೊಡ್ಡತನ ಮೆರೆದರು.

Advertisement

ಅಲ್ಲದೇ ಆವತ್ತಿನ ಎದೆ ತುಂಬಿ ಹಾಡುವ ಶೂಟಿಂಗ್ ನಲ್ಲಿ ಪ್ರೆಸ್ ಕ್ಲಬ್ ಪದಾಧಿಕಾರಿಗಳನ್ನು ಪರಿಚಯಿಸಿ ಕರ್ನಾಟಕದ ಪತ್ರಕರ್ತರನ್ನು ಶ್ಲಾಘಿಸಿ ಮಾತನಾಡಿದ್ದು ಪ್ರಸಾರವೂ ಆಯಿತು. ಆ ಕಾರ್ಯಕ್ರಮದ ಮುಖ್ಯ ಛಾಯಾಗ್ರಾಹಕ ನಮ್ಮ ಸದಸ್ಯ ಬಾಲು, ನಮ್ಮ ಮೇಲೆ( ನಾನು,ಶೆಣೈ,ಜೆಸುನಾ,
ಕಲ್ಯಾಣ್ ) ಬೆಳಕು ಚೆಲ್ಲಿ, ಕ್ಯಾಮೆರಾ ತಿರುಗಿಸಿ ಶೂಟ್ ಮಾಡಿದ್ದು ಮರೆಯಲಾಗದ ಕ್ಷಣ.

2004 ಅಕ್ಟೋಬರ್ 18 ಬೆಳಗ್ಗೆ ಪ್ರೆಸ್ ಕ್ಲಬ್ ನಲ್ಲಿ ಎಸ್ ಪಿ ಬಿ ಪತ್ರಿಕಾ ಸಂವಾದ , ಮಧ್ಯಾಹ್ನ ಭೋಜನ, ಸಂಜೆ ಕೋರಮಂಗಲ ಇಂಡೋರ್ ಸ್ಟೇಡಿಯಂನಲ್ಲಿ ಸಂಗೀತರಾಧನೆ ಜತೆಗೇ ಅಂಬರೀಷ್ ಅವರು 200 ಚಿತ್ರಗಳನ್ನು ಪೂರೈಸಿದ ಸಂಭ್ರಮದ ಪುರಸ್ಕಾರ ಸನ್ಮಾನ.
ಅವತ್ತು ಮುಖ್ಯಮಂತ್ರಿ ಧರ್ಮಸಿಂಗ್ ದಿಡೀರ್ ದೆಹಲಿ ಬುಲಾವ್ ನಿಂದಾಗಿ ಉಪಮುಖ್ಯಮಂತ್ರಿ ಸಿದ್ದರಾಮಯ್ಯ,ಮಲ್ಲಿಕಾರ್ಜುನ ಖರ್ಗೆ ಅವರಿಂದ ಎಸ್ ಪಿ ಬಿಗೆ ಪ್ರೆಸ್ ಕ್ಲಬ್ ಗೌರವ ಸಮರ್ಪಣೆ.

Advertisement

“ಪ್ರೆಸ್, ಪೊಲಿಟಿಷಿಯನ್ಸ್
ಮತ್ತು ಫಿಲಂ ಇಂಡಸ್ಟ್ರಿ
ಸೇರಿದ ಒಂದೇ ವೇದಿಕೆಯಲ್ಲಿ ನಡೆದ ಈ ಪುರಸ್ಕಾರ ತಮ್ಮ ಸಂಗೀತ ಪಯಣದಲ್ಲಿ ಯಾವತ್ತೂ ನೆನಪಿನಲ್ಲಿರುತ್ತದೆ” ಎಂದು ಮನಸು ತುಂಬಿ ಹೇಳಿದ್ದಲ್ಲದೆ ಅಂದು ಎದೆ ತುಂಬಿ ಹಾಡಿ ಸ್ಟೇಡಿಯಂನಲ್ಲಿ ತುಂಬಿದ ಅಸಂಖ್ಯಾತ ಸಂಗೀತ ರಸಿಕರ ಮೆಚ್ಚಿನ ಕನ್ನಡ ಗೀತೆಗಳನ್ನು ಸಾಕ್ಷಾತ್ಕಾರಗೊಳಿಸಿದರು.
ಈ ಟಿವಿ ಆ ರಸಸಂಜೆಯನ್ನು ಮುದ್ರಿಸಿ ಮರು ಪ್ರಸಾರವನ್ನು ಮಾಡಿತು…

ಅಂದು ಎಸ್ ಪಿ ಯವರ ಗಾಯನದಿಂದ ಶುರುವಾದ ಆರೋಗ್ಯ ನಿಧಿಯ ಯೋಜನಾರಂಭ ಮುಂದುವರೆದು ಸರ್ಕಾರ ಒಂದು ಕೋಟಿ ನಿಧಿಯನ್ನು ವಾರ್ತಾ ಇಲಾಖೆಯಲ್ಲಿಟ್ಟಿದೆ.

ಇನ್ನು ಒಂದೆರಡು ಅನುಭವಗಳನ್ನು ಹಾಗೆ ಉಳಿಸಿಕೊಂಡು…
– ವೈ ಜಿ ಅಶೋಕ್ ಕುಮಾರ್.

More Buzz

Trailers 4 days ago

ಬಾಲನ್ – ದಿ ಬಾಯ್ ಟ್ರೇಲರ್: ಭಯಾನಕ ಕಥೆಯ ಸುಳಿವು!

Trailers 4 days ago

ನೀ ನಂಗೆ ಅಲ್ಲವ ಟೀಸರ್: ರಾಹುಲ್ ಆರ್ಕೋಟ್ ಡೆಬ್ಯೂಟ್ novità

Buzz 2 weeks ago

ಪೀಬೊ ಬ್ರೈಸನ್ ನಿಧನ: ಡಿಸ್ನಿ ಗೀತೆಗಳ ಗಾಯಕನಿಗೆ 75ನೇ ವಯಸ್ಸಿನಲ್ಲಿ ಅಂತಿಮ ನಮನ

Buzz 2 weeks ago

Avengers: Doomsday ಕಾಫಿ ಶಾಪ್? ಅಭಿಮಾನಿಗಳ ನಿರಾಸೆ!

Buzz 2 weeks ago

ಕಲಾ ಹಿರನ್: ಸಲ್ಮಾನ್ ಖಾನ್‌ರ ಕಾನೂನು ನೋಟಿಸ್, ನಿರ್ಮಾಪಕ ಪ್ರತಿಕ್ರಿಯೆ!

Trailers 2 weeks ago

‘ಭಾರತ್ ಭಾಗ್ಯ ವಿಧಾತ’ ಟ್ರೇಲರ್: ಕಂಗನಾ 26/11 ವೀರ ನರ್ಸ್ ಪಾತ್ರದಲ್ಲಿ

Buzz 2 weeks ago

ಗೌರವ ಗೇರಾ: 84 ರೂ. ಜೊತೆಗಿದ್ದ ದಿನಗಳ ನೆನಪು!

Buzz 2 weeks ago

ತ್ರಿಶಾ ಕೃಷ್ಣನ್ ಟ್ವೀಟ್: ವಿಜಯ್‌ ಗೂಳಿಬಿರಿದು ವಿವಾದಕ್ಕೆ ಪ್ರತಿಕ್ರಿಯೆ!

Trailers 2 weeks ago

Massa Massa Lyrical Video Drops: Ram Charan & Janhvi Ignite Screens for Peddi

Short Films 2 weeks ago

ಜಾನು ಪಾಪ ನಾನು ಕಿರುಚಿತ್ರ: Bhaava Frames ನಿಂದ ನಗುವಿನ ಧಮಾಕಾ!

Short Films 2 weeks ago

KARAVATIKE ಕನ್ನಡ ಕಿರುಚಿತ್ರ ಟ್ರೇಲರ್: ಭಾವನೆಗಳ ಅದ್ಭುತ ಜರ್ನಿ!

Short Films 2 weeks ago

ಶಂಕರಶಾಸ್ತ್ರಿ ಮತ್ತು ಭಟ್ಟನ ಕೀಟ್ಲೆಗಳು: KGF ಬಾಯ್ಸ್‌ನ ಹೊಸ ಕಾಮಿಡಿ ವೈರಲ್!

Copyright ©2026 . All Rights Reserved. privacy | terms Whatsapp: 9538193653 Email: hello@flixoye.com