‘ನಾನು ಯಾರ ಪರನೂ‌ ಪ್ರಚಾರಕ್ಕೆ ಇಳಿದಿಲ್ಲ’ ಸ್ಪಷ್ಟನೆ ಕೊಟ್ಟ ಅಪ್ಪು

Published on

430 Views

ಸುಮಲತಾ ಅಂಬರೀಶ್ ‌ಮಂಡ್ಯ‌‌ ಕೇತ್ರದಲ್ಲಿ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದು, ನಿಖಿಲ್ ಕುಮಾರಸ್ವಾಮಿ ಮತ್ತು ಸುಮಲತಾ ನಡುವೆ ಭಾರೀ ಸ್ಪರ್ಧೆ ಏರ್ಪಟ್ಟಿದೆ. ಸುಮಲತಾ ಪರ ಯಶ್ , ದರ್ಶನ್ ಹಾಗೂ ಕೆಲವು ನಟರು ಸಾಥ್ ಕೊಟ್ಟಿದ್ದಾರೆ. ಮೊನ್ನೆ ನಡೆದ ಸುದ್ದಿ ಗೋಷ್ಠಿಯಲ್ಲಿ ಪುನೀತ್ ರಾಜ್‍ಕುಮಾರ್ ಸುಮಲತಾರವರಿಗೆ‌ ಬೆಂಬಲ ಕೊಡುತ್ತೇನೆ‌ ಎಂದು ಹೇಳಿದ್ದಾರೆಂದು ರಾಕ್ ಲೈನ್ ವೆಂಕಟೇಶ ಆ ಸುದ್ದಿಗೋಷ್ಠಿಯಲ್ಲಿ ಹೇಳಿದ್ದರು.

ಇದೀಗ ಸುಮಲತಾಗೆ ಬೆಂಬಲ ನೀಡಿರುವ ಬಗ್ಗೆ ಇಲ್ಲ ಸಲ್ಲದ ಸುದ್ದಿ ಹರಡುವ ಮೊದಲೇ ಪುನೀತ್ ಎಲ್ಲದಕ್ಕೂ ಸ್ಪಷ್ಟನೆ ನೀಡಿದ್ದಾರೆ.
‘ ನಾನು ಒಬ್ಬ ಕಲಾವಿದನಾಗಿ ಗುರುತಿಸಿಕೊಳ್ಳುತ್ತೇನೆಯೇ ಹೊರತು, ರಾಜಕಾರಣಿಯಾಗಲ್ಲ. ಮತದಾನ ಎಲ್ಲರ ಹಕ್ಕು , ಪ್ರತಿಯೊಬ್ಬರು ಮತದಾನ ಮಾಡಬೇಕು. ಅದನ್ನು ಗೌರವಿಸುತ್ತೇನೆ’ ಎಂದಿದ್ದಾರೆ.
ನನಗೆ ಅಂಬರೀಶ್ ಕುಟುಂಬವು ಮತ್ತು ಎಚ್.ಡಿ ದೇವೇಗೌಡರ ಕುಟುಂಬವು ನಮಗೆ ಹಿತೈಷಿಗಳು. ನಾನು ಯಾರ ಪರನೂ ಪ್ರಚಾರಕ್ಕೆ ಇಳಿದಿಲ್ಲ. ಇಬ್ಬರಿಗೂ ಒಳ್ಳೆಯದಾಗಲಿ. ಭಗವಂತ‌ ಅವರಿಗೆ ಜನ ಸೇವೆ ಮಾಡಲು ಇನ್ನಷ್ಟು ಶಕ್ತಿ ನೀಡಲಿ. ನನ್ನ ಹೆಸರು ರಾಜಕೀಯದಲ್ಲಿ ತರಬೇಡಿ ಎಂದು ಮನವಿ ಮಾಡಿದ್ದಾರೆ.

Copyright ©2024 . All Rights Reserved. privacy | terms Whatsapp: 9538193653 Email: hello@flixoye.com