“ನಾರಾಯಣ ನಾರಾಯಣ” ಇವರು ದೇವಸ್ಥಾನದ ಕಳ್ಳರು

Published on

157 Views


ನಾರಾಯಣ ನಾರಾಯಣ ಹೀಗೊಂದು ಶೀರ್ಷಿಕೆಯ ಸಿನಿಮಾವೊಂದು
ಕನ್ನಡಲ್ಲಿ ಬರಲಿದೆ. ಈ ಹಿಂದೆ ಚಿನ್ನದ ಗೊಂಬೆ ಚಿತ್ರವನ್ನು ನಿರ್ಮಾಣ
ಮಾಡಿದ್ದ ಶ್ರೀ ಕೃಷ್ಣ ಮೂವಿ ಮೇಕರ್ಸ್ ಬ್ಯಾನರ್ ನವರು ಲಕ್ಷ್ಮೀ ದೇವಿ‌
ಫಿಲಂಸ್ ಹಾಗೂ ಕನ್ನಡದ ಮನೆ ಚಿತ್ರ ಬ್ಯಾನರ್ ಜೊತೆಗೂಡಿ
ನಿರ್ಮಾಣಮಾಡುತ್ತಿರುವ “ನಾರಾಯಣ ನಾರಾಯಣ” ಈ ಚಿತ್ರದ
ಪ್ರೋಮೋ ಟೀಸರ್ ಯುಗಾದಿ ಹಬ್ಬದಂದು ಬಿಡುಗಡೆಯಾಗಲಿದೆ.
ಚಿನ್ನದಗೊಂಬೆ ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದ ಕೀರ್ತಿ ಕೃಷ್ಣ ಅವರು
ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದು ಇವರೊಂದಿಗೆ ದರ್ಶನ್,ಗುರು,
ವಿಷ್ಣು, ಹಾಗೂ ಹಂಪ ಎಂಬ ಹುಡುಗರು ನಟಿಸಲಿದ್ದಾರೆ. ಈ ಪೋಸ್ಟರ್ ನೋಡಿದರೆ
ಈ ಇದೊಂದು ಪಕ್ಕ ಹಾಸ್ಯ ಚಿತ್ರವೆಂಬುದು ತಿಳಿಯುತ್ತದೆ. ಈ ಚಿತ್ರದಲ್ಲಿನ
ಈ ಹುಡುಗರು ಪಾತ್ರಗಳು ಹುಂಡಿ ಕಳ್ಳ ಆರತಿ ತಟ್ಟೆ ಕಳ್ಳ ಗಂಟೆ ಕಳ್ಳ
ದೀಪ ಕಳ್ಳ ಹೀಗೆ ದೇವಸ್ಥಾನದಲ್ಲಿ ಇರುವ ವಸ್ತುಗಳ ಕಳ್ಳತನ ಮಾಡುವ
ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇನ್ನು ಈ ಚಿತ್ರವನ್ನು ಶ್ರೀಕಾಂತ್ ಕೆಂಚಪ್ಪ
ಎಂಬುವವರು ನಿರ್ದೇಶನ ಮಾಡಲಿದ್ದಾರೆ. ಯುಗಾದಿ ಹಬ್ಬಕ್ಕೆ ಈ ಚಿತ್ರದ
ಪ್ರೋಮೋ ಟೀಸರ್ ಬಿಡುಗಡೆ ಮಾಡಲಿದ್ದಾರೆ ಚಿತ್ರತಂಡದವರು.

Copyright ©2024 . All Rights Reserved. privacy | terms Whatsapp: 9538193653 Email: hello@flixoye.com