ನಂದಿನಿಯಲ್ಲಿ ವಾರವಿಡಿ “ನಾಗಪಂಚಮಿ” ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 8.30ಕ್ಕೆ

Published on

669 Views
Advertisement

ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿರುವ ನಂದಿನಿ ಧಾರಾವಾಹಿ ವೀಕ್ಷಕರ ಮೆಚ್ಚುಗೆಗೆ ಪಾತ್ರವಾಗಿ ನಂಬರ್ 1 ಸ್ಥಾನದಲ್ಲಿದೆ. ನಿತ್ಯಾರಾಮ್ ಮುಖ್ಯಭೂಮಿಕೆಯಲ್ಲಿರುವ ನಂದಿನಿ, ಬಹುತಾರಾಗಣವಿರುವ ಧಾರಾವಾಹಿ ಎನ್ನುವುದರ ಜೊತೆಗೆ ಸ್ಯಾಂಡಲ್ವುಡ್ ಜೆಂಟಲ್ ಮ್ಯಾನ್ ರಮೇಶ್ ಅರವಿಂದ್ ನಿರ್ಮಾಣವೂ ಹೌದು.
ಪ್ರತಿ ವಾರವೂ ಏನಾದರೊಂದು ವಿಶೇಷ ಕತೆ,ತಿರುವು,ಕುತೂಹಲದೊಂದಿಗೆ ಸಂಚಿಕೆ ಮೂಡುತ್ತಿದ್ದ ನಂದಿನಿ ಧಾರಾವಾಹಿಯಲ್ಲಿ ಈಗ ಮತ್ತೊಂದು ಸ್ಪೆಷಲ್ ಕಥೆ ಬರಲಿದೆ.

ನಮ್ಮ ಸಂಸ್ಕೃತಿಯಲ್ಲಿ, ಮನುಷ್ಯ ಹಾಗೂ ಸರ್ಪಕ್ಕೆ ಪೌರಾಣಿಕವಾಗಿ, ಹಾಗೂ ಮಾನಸಿಕವಾಗಿ ಸಾವಿರಾರು ವರ್ಷಗಳಿಂದ ವಿಶೇಷ ಸಂಬಂಧವಿದೆ. ಮನೆ-ಮನೆಗಳಲ್ಲಿ ಆಚರಿಸುವ “ನಾಗಪಂಚಮಿ” ಹಬ್ಬವನ್ನು ‘ನಂದಿನಿʼ ಧಾರಾವಾಹಿಯಲ್ಲೂ ವಿಶೇಷವಾಗಿ ಆಚರಿಸಲಿದ್ದಾರೆ. ಇದೇ ಆಗಸ್ಟ್ 5 ರಿಂದ ವಿಶೇಷ ಸಂಚಿಕೆಗಳು ಶುರುವಾಗಲಿದ್ದು ವೀಕ್ಷಕರಿಗೆ ವಾರವಿಡಿ ರಸದೌತಣವನ್ನೇ ಬಡಿಸುವುದರಲ್ಲಿ ಸಂಶಯವಿಲ್ಲ. ಇದಕ್ಕಾಗಿ ಮಾಗಡಿಯಲ್ಲಿ ನಾಗದೇವರ ದೊಡ್ಡ ಸೆಟ್ ಹಾಕಿದ್ದು, ಅದ್ದೂರಿ ಅಲಂಕಾರದೊಂದಿಗೆ ವಿಜ್ರಂಭಣೆಯಲ್ಲಿ ಆಚರಿಸಲಿದ್ದಾರೆ. ಈ ಕಥೆಯನ್ನು ಚಿತ್ರೀಕರಿಸುವಾಗ ಸ್ವತಃ ನಿತ್ಯಾ ರಾಮ್ ಕೂಡ ನಾಗರಪಂಚಮಿ ವ್ರತದಲ್ಲಿದ್ದದ್ದು ವಿಶೇಷವೇ ಸರಿ.

Advertisement

ಶರಭ ಎಂಬ ಮಾಯಾವಿ, ಅಪಾರ ಶಕ್ತಿಯುಳ್ಳ ನಾಗಮಣಿಯನ್ನು ಪಡೆಯುವ ದುರುದ್ದೇಶದಿಂದ ನಾಯಕಿ ಜನನಿಯ ವೇಷದಲ್ಲಿ ರಾಮ್ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾಳೆ. ನಾಯಕ ವಿರಾಟನನ್ನು ಮನಸಾರೆ ಪ್ರೀತಿಸುತ್ತಿರುವ ಜನನಿಗೆ ತನ್ನ ಅನುಪಸ್ಥಿತಿಯಲ್ಲಿ ತನ್ನದೇ ನಿಶ್ಚಿತಾರ್ಥ ವಿಷಯ ತಿಳಿದು ದೊಡ್ಡ ಆಘಾತದ ಜೊತೆಗೆ ಅಯೋಮಯವಾಗಿದೆ. ಈ ಕುಚೋದ್ಯದ ಹಿಂದೆ ಯಾರ ಕೈವಾಡವಿದೆ ಎಂಬುದು ನಾಗಪಂಚಮಿಯ ದಿನ ನಾಗದೇವತೆಯ ಪವಾಡದಿಂದ ಜನನಿಗೆ ತಿಳಿಯುವುದೇ ಎಂಬುದು ಕುತೂಹಲ.

Advertisement

ಇನ್ನೊಂದೆಡೆ ನಂಬೂದರಿ ಇಡೀ ಸರ್ಪ ಸಂಕುಲವನ್ನೇ ನಾಶ ಮಾಡಿ ನಾಗಮಣಿಯನ್ನು ತನ್ನ ಕೈವಶ ಮಾಡಿಕೊಳ್ಳುವ ದುರಾಸೆಯಲ್ಲಿ ನಾಗಪಂಚಮಿಯಂದು ಮಹಾಸರ್ಪಯಾಗ ಮಾಡಲು ಅನುವಾಗುತ್ತಾನೆ. ಈ ಸರ್ಪಯಾಗದಲ್ಲಿ ಸಾವಿರಾರು ಸರ್ಪಗಳ ಜೊತೆ ವಿಶೇಷ ಶಕ್ತಿಯುಳ್ಳ ಅರ್ಧ ಶಿವನಾಗಿಣಿ ಜನನಿಯನ್ನೇ ಮಹಾಬಲಿ ಕೊಡುವ ಹುನ್ನಾರದಲ್ಲಿದ್ದಾನೆ.

Advertisement

ಇಷ್ಟು ದಿನ ತನ್ನ ನಿಜರೂಪ ಕಳೆದುಕೊಂಡು ಗಿಣಿ ವೇಷದಲ್ಲಿದ್ದ ಜನನಿಯ ಅಕ್ಕ ದೇವಸೇನಾಳಿಗೆ ನಂಬೂದರಿ ನಿಜರೂಪ ಕೊಡುವುದು ನಾಗಪಂಚಮಿ ಸಂಚಿಕೆಗಳ ಮತ್ತೊಂದು ವಿಶೇಷ. ಆದರೆ ಇದರ ಹಿಂದಿರುವ ನಿಜವಾದ ಉದ್ದೇಶ, ದೇವಸೇನಾಳಿಂದಲೇ ಅವಳ ತಂಗಿ ಜನನಿಯನ್ನು ಮಹಾಯಾಗದಲ್ಲಿ ಬಲಿಕೊಡಿಸುವುದು.

ಹೀಗೇ ನಾನಾ ತಿರುವುಗಳೊಡನೆ ಸಾಗುತ್ತಿರುವ ನಂದಿನಿ ಧಾರಾವಾಹಿ ನಿಮಗೆ ಪರಿಪೂರ್ಣ ಮನರಂಜನೆ ನೀಡುತ್ತದೆ ಎಂಬುದು ನಂದಿನಿ ತಂಡದ ನಂಬಿಕೆ. ನಿತ್ಯಾ ರಾಮ್, ವಿನಯ್ ಗೌಡ, ಶ್ರೀನಿವಾಸ ಪ್ರಭು, ರವಿ ಭಟ್, ಜಯಶ್ರೀ ಎಸ್ ರಾಜ್, ರಶ್ಮಿ, ಅನು ಪೂವಮ್ಮ ಮೊದಲಾದ ಬಹುತಾರಾಗಣವಿರುವ ನಂದಿನಿ, ನಾಗಪಂಚಮಿ ವಿಶೇಷ ಸಂಚಿಕೆಗಳು ಇದೇ ಆಗಸ್ಟ್ 5, ಸೋಮವಾರದಿಂದ ಶುರುವಾಗಲಿದೆ.

ನಂದಿನಿ ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 8.30ಕ್ಕೆ ಉದಯ ಟಿವಿಯಲ್ಲಿ ಪ್ರಸಾರವಾಗುತ್ತದೆ.

Advertisement

More Buzz

Buzz 12 hours ago

ಅಣ್ಣ ಫ್ರಂ ಮೆಕ್ಸಿಕೋ ಟೀಸರ್: ಡಾಲಿ ಧನಂಜಯ್‌ರಿಂದ ವಿಶ್ವವಿಖ್ಯಾತ ಅಸ್ತ್ರ!

Buzz 1 day ago

KD ಟ್ರೇಲರ್ ಬಿಡುಗಡೆ: ಧ್ರುವ ಸರ್ಜಾ, ಸಂಜಯ್ ದತ್ ರಬ್ಬರ್ smashing!

Buzz 4 days ago

ರುದ್ರತಾಂಡವ: ‘Ruthless’ ಕನ್ನಡ ಕಿರುಚಿತ್ರ | ಧನು ಹರ್ಷರ ವೀರೋಚಿತ ನಟನೆ!

Buzz 4 days ago

ದೇವ್ ದಾಸ್ ನಾ ಲೀಲಾ: ತುಳು ಚಿತ್ರದ ಟ್ರೇಲರ್ ಬಿಡುಗಡೆ!

Buzz 5 days ago

ಮಿಸ್ಟರ್ ಎಕ್ಸ್: 90ರ ದಶಕದ ಮರೆಯಲಾಗದ ಥ್ರಿಲ್ಲರ್!

Buzz 5 days ago

Mr. X: Kannada Cinema’s New Enigma Unfolds!

Buzz 7 days ago

ಅಚ್ಯುತ ಅವತಾರಂ: ಮೂರನೇ ಲುಕ್ ಬಿಡುಗಡೆ, 2026ರ വിഷುಗೆ ಸ್ಯಾಂಡಲ್‌ವುಡ್‌ಗೆ ಲಗ್ಗೆ!

Buzz 1 week ago

ಸೀತಾರಾಮ್’ ಎರಡನೇ ಪ್ರಕರಣ: ಥ್ರಿಲ್ಲರ್ ಸಿನೆಮಾ ಈಗ OTTಯಲ್ಲಿ!

Buzz 1 week ago

Assi: ZEE5 Film Tackles Stark Reality with Urgent Voice

Buzz 1 week ago

ಕೆಂಡದ ಸೆರಗು: ನಾಳೆ ತೆರೆಗೆ, ಮನಸ್ಸಲ್ಲಿ ಉಳಿಯುವ ಕಥೆಯಿದು!

Buzz 1 week ago

Ustaad Bhagat Singh Hits Netflix: Kannada Fans Rejoice!

Buzz 1 week ago

Do Deewane Seher Mein: Netflix Date Set!

Copyright ©2026 . All Rights Reserved. privacy | terms Whatsapp: 9538193653 Email: hello@flixoye.com