‘ದಶರಥ’ ಗೆ ಕಾನೂನು‌ ತಡೆ..!!!

Published on

162 Views

ಕ್ರೇಜಿಸ್ಟಾರ್ ರವಿಚಂದ್ರನ್ ಅಭಿನಯಿಸಿರುವ ‘ದಶರಥ’ ಚಿತ್ರವು ಈ ಶುಕ್ರವಾರ ತೆರೆಗೆ ಬರಬೇಕಿತ್ತು. ಅದರೆ ಕಾನೂನು‌ ತೊಂದರೆಯಿಂದಾಗಿ ‘ದಶರಥ’ ಚಿತ್ರದ ಬಿಡುಗಡೆಯನ್ನು ಮುಂದೂಡಲಾಗಿದೆ. ‘ದಶರಥ’ ಚಿತ್ರದಲ್ಲಿ ಬಹಳ ವರ್ಷಗಳ ನಂತರ ರವಿಚಂದ್ರನ್ ರವರು ಲಾಯರ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈಗ ಚಿತ್ರಕ್ಕೆ ಸಂಕಷ್ಟ ಎದುರಾಗಿದ್ದು, ಚಿತ್ರದ ಹಾಡಿನಿಂದಾಗಿ. ಚಿತ್ರದ ಎರಡನೇಯ ಹಾಡಿನಲ್ಲಿ ‘ ಕರಿಕೋಟ್ ಹಾಕೋರೆಲ್ಲಾ ಕೇಸ್ ಗೆಲ್ಲೋದಿಲ್ಲ, ಗೆದ್ದು ಬೀಗೋರೆಲ್ಲ ಹರಿಶ್ಚಂದ್ರರಲ್ಲ..ಹಾಡಿನ ಸಾಲಿಗೆ ಇಬ್ಬರು ವಕೀಲರಾದ ಗಾದಿ‌ ಲಿಂಗಪ್ಪ, ಪರಶುರಾಮ ಎಂಬುವರು ಆಕ್ಷೇಪ ವ್ಯಕ್ತ ಪಡಿಸಿದ್ದಾರೆ. ಈ‌ ಹಾಡನ್ನು‌ ತೆಗೆದು‌ ಹಾಕಬೇಕೆಂದು ಅರ್ಜಿ ಸಲ್ಲಿಸಿದ್ದಾರೆ. ಹೀಗಾಗಿ ಎಪ್ರಿಲ್ 5 ರಂದು ‘ದಶರಥ’ ತೆರೆಗೆ ಬರುತ್ತಿಲ್ಲ. ಸಹಕರಿಸಿ ಎಂದು‌ ರವಿಚಂದ್ರನ್ ರವರು ತಮ್ಮ ಫೇಸ್ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

Copyright ©2024 . All Rights Reserved. privacy | terms Whatsapp: 9538193653 Email: hello@flixoye.com