ಕಸ್ತೂರಿ ನಿವಾಸ -ಸೇವಂತಿ ಮತ್ತು ಕಾವ್ಯಾಂಜಲಿ – ಮನಸಾರೆ ಮಹಾಸಂಗಮ ಇದೇ ಸೋಮವಾರದಿಂದ ಉದಯ ಟಿವಿಯಲ್ಲಿ

Published on

604 Views
Advertisement

ಉದಯ ಟಿವಿಯಲ್ಲಿ ಮೊಳಗಲಿದೆ ಕಸ್ತೂರಿ ನಿವಾಸ – ಸೇವಂತಿ ಮತ್ತು ಕಾವ್ಯಾಂಜಲಿ – ಮನಸಾರೆ ಮಹಾಸಂಗಮ. ಪ್ರತಿ ಹೆಜ್ಜೆಯಲ್ಲಿ ದಿಟ್ಟ ನರ‍್ಧಾರವನ್ನು ತೆಗೆದುಕೊಳ್ಳುವ ಉದಯ ಟಿವಿಯು ಈ ಭಾರಿ ನಿಮ್ಮೆಲ್ಲರನ್ನು ರಂಜಿಸಲು ಮಹಾಸಂಗಮದ ಮನರಂಜನೆಯೊಂದಿಗೆ ನಿಮ್ಮೆದುರು ಬರಲಿದೆ. ದೇವಿ ಸನ್ನಿದಾನದಲ್ಲಿ ಸಂಗಮವಾಗುತ್ತಿದೆ ಕಸ್ತೂರಿ ನಿವಾಸ ಮತ್ತು ಸೇವಂತಿ ಕುಟುಂಬ. ಕಾವ್ಯಾಂಜಲಿಯ ಬಂಧವನ್ನು ಮತ್ತಷ್ಟು ಬೆಸೆಯಲು ಮನಸಾರೆಯೊಂದಿಗೆ ನಡೀತಿದೆ ಮಹಾಸಂಗಮ.
ಹಲವಾರು ಸಮಸ್ಯೆ ಮತ್ತು ಮನಸ್ತಾಪಗಳನ್ನು ಎದುರಿಸಿರುವ ಸೇವಂತಿ ದೇವರ ಮೊರೆ ಹೋಗಿದ್ದಾಳೆ. ಇನ್ನೊಂದೆಡೆ ದೇವರ ವಿಧಿ ಎನ್ನುವ ಹಾಗೆ ಕಸ್ತೂರಿ ನಿವಾಸದವರು ದೇವಿಯ ಕೃಪೆಗೆ ಪಾತ್ರರಾಗಲು ಹೊರಟಿದ್ದಾರೆ. ಕಸ್ತೂರಿ ನಿವಾಸದಲ್ಲಿರುವ ದ್ವೇಷ ದೂರಾಗುತ್ತಾ? ಸೇವಂತಿಯ ನಿಷ್ಕಲ್ಮಶ ಮನಸ್ಸಿಗೆ ಗೆಲುವು ಸಿಗುತ್ತಾ? ಎಂಬುದಕ್ಕೆ ಮಹಾಸಂಗಮದಲ್ಲಿ ತೆರೆ ಬೀಳಲಿದೆ.

Advertisement

ವೇದಾ ಹುಟ್ಟಿದಹಬ್ಬದಂದು ಮನೆಯವರೆಲ್ಲ ಸೇರಿ ಪ್ಲಾನ್ ಮಾಡಿ, ವೇದಾ ಗೆಳೆಯನಾದ ಮನಸಾರೆ ಧಾರಾವಾಹಿಯ ಆನಂದ್ ಮಹೇಂದ್ರ ಮತ್ತು ಕುಟುಂಬದವರನ್ನು ಕರೆಸಿ ವೇದಾಳಿಗೆ ರ‍್ಪೈಸ್ ಕೊಡುವರು. ಇದರ ಮಧ್ಯೆ ಕಾವ್ಯಾ ಹಠಕ್ಕೆ ಅಂಜಲಿಯೂ ಕೂಡ ವೇದಾ ಮನೆಗೆ ಬರುವ ಸನ್ನಿವೇಶ ಎದುರಾಗುತ್ತದೆ. ಹಾಗೆ ಇನ್ನೊಂದೆಡೆ ಪ್ರರ‍್ಥನಾ ಕುಟುಂಬದೊಂದಿಗೆ ಯುವ ಕೂಡ ಅಲ್ಲಿಗೆ ಬರುವಂತ್ತಾಗುತ್ತದೆ. ವೇದಾ ಮತ್ತು ಅಂಜಲಿಯ ನಡುವೆ ಇರುವ ಶೀತಲ ಸಮರ ತಾರಕಕ್ಕೇರುತ್ತಾ? ಸುಶಾಂತ್‌ ಮನಸಿನ ಒದ್ದಾಟ ಅಂಜಲಿಗೆ ತಿಳಿಯುತ್ತಾ? ಪ್ರರ‍್ಥನಾ ಪ್ರೀತಿಗೆ ಕಾಯುತ್ತಿರುವ ಯುವನಿಗೆ ಪ್ರೀತಿಯ ಸಹಿ ಸಿಗುತ್ತಾ? ಎಂಬುದು ಈ ಮಹಾಸಂಗಮದಲ್ಲಿ ಹೊರಬೀಳಲಿದೆ.

Advertisement

ಮನೆಯವರ ಸಂತೋಷಕ್ಕೆ ತನ್ನ ನೋವನ್ನು ಮರೆಮಾಚುವ ಸೇವಂತಿ ಒಂದೆಡೆಯಾದರೆ, ಮೃದುಲಾ ಮತ್ತು ಮಂಗಳ ನಡುವೆ ಇರುವ ಮನಸ್ತಾಪವನ್ನು ಸರಿಪಡಿಸಲು ಹೋರಾಡುತ್ತಿರುವ ಕಸ್ತೂರಿನಿವಾಸದ ಪರ‍್ವತಿ ಇನ್ನೊಂದೆಡೆ. ಅಕ್ಕ ತಂಗಿಯ ಬಾಂಧವ್ಯದ ಕಥೆಯಾದ ಕಾವ್ಯಾಂಜಲಿಯ ಜೊತೆ ಅಪ್ಪನ ಪ್ರೀತಿಗಾಗಿ ಹಂಬಲಿಸುತ್ತಿರುವ ಮಗಳ ಕಥೆ ಮನಸಾರೆ. ಇವೆರಡರ ಮಹಾಸಂಗಮದಲ್ಲಿ ಮಹತ್ತರ ತಿರುವು ಕಾಣಲಿದ್ದು, ಬೇಡಿಕೆಗೆ ತಕ್ಕಂತೆ ಕಥೆ ಹೆಣೆಯಲಾಗಿದೆ. ಕೊರೊನಾ ವೈರಸ್ ಹಿನ್ನಲೆ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡು ಚಿತ್ರೀಕರಣ ಪರ‍್ಣಗೊಳಿಸಿದ್ದು ಸೆಪ್ಟೆಂಬರ್ ೭ರ ಸಂಜೆ ೭ ರಿಂದ ೮ ರ ವರೆಗೆ ಕಸ್ತೂರಿ ನಿವಾಸ – ಸೇವಂತಿ ಮತ್ತು ರಾತ್ರಿ ೮.೩೦ ರಿಂದ ರಾತ್ರಿ ೯.೩೦ರ ವರೆಗೆ ಕಾವ್ಯಾಂಜಲಿ – ಮನಸಾರೆ ಮಹಾಸಂಗಮಗಳ ಮಹಾಸಂಚಿಕೆಗಳು ಉದಯ ಟಿವಿಯಲ್ಲಿ ಪ್ರಸಾರವಾಗಲಿದೆ.

Advertisement

Advertisement

More Buzz

Buzz 12 hours ago

ಅಣ್ಣ ಫ್ರಂ ಮೆಕ್ಸಿಕೋ ಟೀಸರ್: ಡಾಲಿ ಧನಂಜಯ್‌ರಿಂದ ವಿಶ್ವವಿಖ್ಯಾತ ಅಸ್ತ್ರ!

Buzz 1 day ago

KD ಟ್ರೇಲರ್ ಬಿಡುಗಡೆ: ಧ್ರುವ ಸರ್ಜಾ, ಸಂಜಯ್ ದತ್ ರಬ್ಬರ್ smashing!

Buzz 4 days ago

ರುದ್ರತಾಂಡವ: ‘Ruthless’ ಕನ್ನಡ ಕಿರುಚಿತ್ರ | ಧನು ಹರ್ಷರ ವೀರೋಚಿತ ನಟನೆ!

Buzz 4 days ago

ದೇವ್ ದಾಸ್ ನಾ ಲೀಲಾ: ತುಳು ಚಿತ್ರದ ಟ್ರೇಲರ್ ಬಿಡುಗಡೆ!

Buzz 5 days ago

ಮಿಸ್ಟರ್ ಎಕ್ಸ್: 90ರ ದಶಕದ ಮರೆಯಲಾಗದ ಥ್ರಿಲ್ಲರ್!

Buzz 5 days ago

Mr. X: Kannada Cinema’s New Enigma Unfolds!

Buzz 7 days ago

ಅಚ್ಯುತ ಅವತಾರಂ: ಮೂರನೇ ಲುಕ್ ಬಿಡುಗಡೆ, 2026ರ വിഷುಗೆ ಸ್ಯಾಂಡಲ್‌ವುಡ್‌ಗೆ ಲಗ್ಗೆ!

Buzz 1 week ago

ಸೀತಾರಾಮ್’ ಎರಡನೇ ಪ್ರಕರಣ: ಥ್ರಿಲ್ಲರ್ ಸಿನೆಮಾ ಈಗ OTTಯಲ್ಲಿ!

Buzz 1 week ago

Assi: ZEE5 Film Tackles Stark Reality with Urgent Voice

Buzz 1 week ago

ಕೆಂಡದ ಸೆರಗು: ನಾಳೆ ತೆರೆಗೆ, ಮನಸ್ಸಲ್ಲಿ ಉಳಿಯುವ ಕಥೆಯಿದು!

Buzz 1 week ago

Ustaad Bhagat Singh Hits Netflix: Kannada Fans Rejoice!

Buzz 1 week ago

Do Deewane Seher Mein: Netflix Date Set!

Copyright ©2026 . All Rights Reserved. privacy | terms Whatsapp: 9538193653 Email: hello@flixoye.com