ಭಂಡಾರಿ ಬ್ರದರ್ಸ್ ಮೇಲೆ‌ ದೂರು ನೀಡಿದ ನಮ್ಮ ಕರ್ನಾಟಕ ರಕ್ಷಣಾ ವೇದಿಕೆ

Published on

703 Views
Advertisement

ಭಂಡಾರಿ ಬ್ರದರ್ಸ್ ಮೇಲೆ‌ ದೂರು ನೀಡಿದ ನಮ್ಮ ಕರ್ನಾಟಕ ರಕ್ಷಣಾ ವೇದಿಕೆ

Advertisement

‘ ರಾಜರಥ’ ಸಿನಿಮಾದ ಕುರಿತು ನಡೆದ ಸಂದರ್ಶನದಲ್ಲಿ Rapid ರಶ್ಮಿ ‘ ರಾಜರಥ ಸಿನಿಮಾ ನೋಡದವರು—-? ‘ ಎಂದು ಅನೂಪ್ ಭಂಡಾರಿ ಗೆ ಕೇಳಿದ್ದಾರೆ. ಅದಕ್ಕೆ ಉತ್ತರವಾಗಿ ಅನೂಪ್ ‘ರಾಜರಥ ಸಿನಿಮಾ ನೋಡದವರು ಕಚಡ ನನ್ಮಕ್ಕಳು’ ಎಂದು ಹೇಳಿ ಕನ್ನಡಿಗರ ಕೋಪಕ್ಕೆ ಗುರಿಯಾಗಿದ್ದರು. ನಂತರ ಅನೂಪ್ ಮತ್ತು ನಿರೂಪ್ ಸೋಶಿಯಲ್ ಮೀಡಿಯಾ ಮತ್ತು ಟಿವಿ ಚಾನೆಲ್ ನಲ್ಲಿ ಕ್ಷಮೆಯನ್ನು ಕೇಳಿದ್ದಾರೆ. ‘ಇದು‌ ಸಿನಿಮಾ ರಿಲೀಸ್ ಗೂ ಮುಂಚೆ ನಡೆದ ಸಂದರ್ಶನ. ನನಗೆ ಕನ್ನಡ ಪ್ರೇಕ್ಷಕರ ಮೇಲೆ ತುಂಬನೇ ಗೌರವವಿದೆ. ನಾನು ಉದ್ದೇಶ ಪೂರ್ವಕವಾಗಿ ಪದ ಬಳಸಿಲ್ಲ. ನನ್ನ ಮೊದಲ ಚಿತ್ರ ‘ರಂಗಿತರಂಗ’ ಸಿನಿಮಾ ಯಶಸ್ವಿಯಾಗಲು ಕಾರಣ ಕನ್ನಡ ಪ್ರೇಕ್ಷಕರು.

ನನ್ನ ಸಿನಿಮಾದಲ್ಲಿ ಈ ಪದವನ್ನು ಬಳಸಿದರಿಂದ ನನಗೂ‌ ಸಡನ್ನಾಗಿ ಕಚಡ ಪದ ಬಾಯಿಗೆ ಬಂತು ಅಷ್ಟೇ’ ಎಂದರು. ಭಂಡಾರಿ ಬ್ರದರ್ಸ್ ಮಾತುಗಳು ಕನ್ನಡಿಗರನ್ನು ಕೆರಳಿಸಿದ ಕಾರಣ ಅವರನ್ನು 6 ತಿಂಗಳ ಕಾಲ ಚಿತ್ರರಂಗದಿಂದ ಬಹಿಷ್ಕಾರ ಹಾಕ್ಬೆಂದು ನಮ್ಮ ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷರಾದ ಜಯರಾಜ್ ನಾಯ್ಡು ದೂರು ದಾಖಲೆ ಮಾಡಿದ್ದಾರೆ. ಕನ್ನಡ ಸಿನಿಮಾವನ್ನು ನೋಡದೇ ಇರೋರು ಅಂತ ಹೇಳಿಲ್ಲ. ರಾಜರಥ ಸಿನಿಮಾವನ್ನು ನೋಡದವರು ಕಚಡಾಗಳು ಎಂದು ಸಂದರ್ಶನ ದಲ್ಲಿ ಹೇಳಿದ್ದಾರೆ. ಇದರಿಂದ ನೋವಾಗಿದೆ. ಕ್ಷಮೆ ಕೇಳಿದ್ದಾರೆ ಅನ್ನೋ ಮಾತ್ರಕ್ಕೆ ನಮ್ಮ ಹೋರಾಟ ನಿಲ್ಲಿಸೋಲ್ಲ. ವಾಣಿಜ್ಯ ಮಂಡಳಿಗೆ ಮನವಿಯನ್ನು ನೀಡಿದ್ದೇವೆ. Rapid ರಶ್ಮಿ ಹಾಗೂ ಚಿತ್ರದ ನಾಯಕಿ ಅವಂತಿಕಾ ಶೆಟ್ಟಿ ಇಲ್ಲಿವರೆಗೂ ಕ್ಷಮೆ ಕೇಳಿಲ್ಲ. ಅವರು ಕ್ಷಮೆ ಕೇಳ್ಬೇಕು ಎಂದು ಹೇಳಿದ್ದಾರೆ.

Advertisement

 

Advertisement

Advertisement

More Buzz

Buzz 2 weeks ago

Balaramana Dinagalu: Gangster Love Story Teaser Drops!

Buzz 3 weeks ago

ಅಣ್ಣ ಫ್ರಂ ಮೆಕ್ಸಿಕೋ ಟೀಸರ್: ಡಾಲಿ ಧನಂಜಯ್‌ರಿಂದ ವಿಶ್ವವಿಖ್ಯಾತ ಅಸ್ತ್ರ!

Buzz 3 weeks ago

KD ಟ್ರೇಲರ್ ಬಿಡುಗಡೆ: ಧ್ರುವ ಸರ್ಜಾ, ಸಂಜಯ್ ದತ್ ರಬ್ಬರ್ smashing!

Buzz 4 weeks ago

ರುದ್ರತಾಂಡವ: ‘Ruthless’ ಕನ್ನಡ ಕಿರುಚಿತ್ರ | ಧನು ಹರ್ಷರ ವೀರೋಚಿತ ನಟನೆ!

Buzz 4 weeks ago

ದೇವ್ ದಾಸ್ ನಾ ಲೀಲಾ: ತುಳು ಚಿತ್ರದ ಟ್ರೇಲರ್ ಬಿಡುಗಡೆ!

Buzz 4 weeks ago

ಮಿಸ್ಟರ್ ಎಕ್ಸ್: 90ರ ದಶಕದ ಮರೆಯಲಾಗದ ಥ್ರಿಲ್ಲರ್!

Buzz 4 weeks ago

Mr. X: Kannada Cinema’s New Enigma Unfolds!

Buzz 4 weeks ago

ಅಚ್ಯುತ ಅವತಾರಂ: ಮೂರನೇ ಲುಕ್ ಬಿಡುಗಡೆ, 2026ರ വിഷುಗೆ ಸ್ಯಾಂಡಲ್‌ವುಡ್‌ಗೆ ಲಗ್ಗೆ!

Buzz 4 weeks ago

ಸೀತಾರಾಮ್’ ಎರಡನೇ ಪ್ರಕರಣ: ಥ್ರಿಲ್ಲರ್ ಸಿನೆಮಾ ಈಗ OTTಯಲ್ಲಿ!

Buzz 4 weeks ago

Assi: ZEE5 Film Tackles Stark Reality with Urgent Voice

Buzz 4 weeks ago

ಕೆಂಡದ ಸೆರಗು: ನಾಳೆ ತೆರೆಗೆ, ಮನಸ್ಸಲ್ಲಿ ಉಳಿಯುವ ಕಥೆಯಿದು!

Buzz 4 weeks ago

Ustaad Bhagat Singh Hits Netflix: Kannada Fans Rejoice!

Copyright ©2026 . All Rights Reserved. privacy | terms Whatsapp: 9538193653 Email: hello@flixoye.com