ಇದೇ ತಿಂಗಳಲ್ಲಿ ನಿಮ್ಮ ಮುಂದೆ “ಕದ್ದು ಮುಚ್ಚಿ”
ಯಶಸ್ವಿನಿ ಕ್ರಿಯೇಷನ್ಸ್ ಬ್ಯಾನರ್ ನಡಿಯಲ್ಲಿ ವಿ.ಜಿ.ಮಂಜುನಾಥ್
ಅವರ ನಿರ್ಮಾಣದಲ್ಲಿ ವಸಂತ್ ರಾಜ್ ಅವರು ಕಥೆ ಚಿತ್ರಕಥೆ ಬರೆದು
ನಿರ್ದೇಶನ ಮಾಡಿರುವ ಕದ್ದುಮುಚ್ಚಿ ಚಿತ್ರವು ಇದೇ ತಿಂಗಳ 22ರಂದು ತೆರೆಗೆ ಬರುತ್ತಿದೆ. ಸಂಗೀತ ಮಾಂತ್ರಿಕ, ಗಾನ ಗಾರುಡಿಗ ನಾದಬ್ರಹ್ಮ ಹಂಸಲೇಖ ಅವರು ಈ ಚಿತ್ರಕ್ಕೆ ಸಾಹಿತ್ಯ ಬರೆದು ಸಂಗೀತ ಸಂಯೋಜನೆ ಮಾಡಿದ್ದಾರೆ.
ಈಗಾಗಲೇ ಬಿಡುಗಡೆಯಾಗಿರುವ ಹಾಡುಗಳು ಸೂಪರ್ ಹಿಟ್ ಆಗಿವೆ.
ವಿಜಯ್ ಸೂರ್ಯ ನಾಯಕನಾಗಿ ಮೇಘಶ್ರೀ ಇವರಿಗೆ ಜೋಡಿಯಾಗಿ
ಕಾಣಿಸಿಕೊಂಡಿರುವ ಈ ಚಿತ್ರದಲ್ಲಿ ದೊಡ್ಡಣ್ಣ, ಹೊನ್ನವಳ್ಳಿ ಕೃಷ್ಣ, ಚಿಕ್ಕಣ್ಣ, ಬಿ.ವಿ.ರಾಧಾ, ಸುಚೇಂದ್ರ ಪ್ರಸಾದ್ ಸೇರಿದಂತೆ ಬಹುದೊಡ್ಡ ತಾರಬಳಗವೇ ನಟಿಸಿದ್ದಾರೆ.
Advertisement
Advertisement
