“ಕಾನೂರಾಯಣ” ಚಿತ್ರದ ಧ್ವನಿಸುರುಳಿ ಬಿಡುಗಡೆ

Published on

685 Views
Advertisement

ಸದಭಿರುಚಿಯ ಚಿತ್ರಗಳನ್ನು ನೀಡುತ್ತಾ ಪ್ರೇಕ್ಷಕರ ಮನಸ್ಸನ್ನು ಗೆದ್ದಂತೆ ಟಿ.ಎಸ್. ನಾಗಾಭರಣ ನಿರ್ದೇಶನದಲ್ಲಿ ಸಿದ್ಧವಾದಂತ “ಕಾನೂರಾಯಣ” ಚಿತ್ರದ ಧ್ವನಿಸುರುಳಿ ಬಿಡುಗಡೆ ಸಮಾರಂಭ ನಿನ್ನೆ ಕೆ.ಎಸ್. ಸಿ.ಎ ಹಾಲ್ ನಲ್ಲಿ ಅದ್ಧೂರಿಯಾಗಿ ನೆರವೇರಿತು. ಈ ಚಿತ್ರವು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಯೋಜನೆ ಸ್ವ ಸಹಾಯ ಸಂಘಗಳ ಒಕ್ಕೂಟ ಟ್ರಸ್ಟ್ ವತಿಯಿಂದ ನಿರ್ಮಾಣವಾಗಿದೆ.

ಗ್ರಾಮೀಣ ಅಭಿವೃದ್ಧಿಯ ಕುರಿತಾದ ಕಥಾ ಹಂದರವಾಗಿದು ಆರ್ಥಿಕ ಶಿಸ್ತು ವಿಚಾರವನ್ನು ಇಟ್ಟುಕೊಂಡು ಹಳ್ಳಿಯಲ್ಲಿ ನಡೆಯುವ ಹಲವು ಘಟನೆಗಳ ಸುತ್ತ ಈ ಕಾನೂರಾಯಣ ಸಾಗಲಿದೆಯಂತೆ. ಹೆಣ್ಣುಮಕ್ಕಳ ಶಿಸ್ತು , ಬದ್ಧತೆ , ಬದುಕಿನ ದಿಕ್ಕಿಗೆ ಯಾವ ಯಾವ ವಿಚಾರಗಳು ಮುಖ್ಯ ಎಂಬುದನ್ನು ಈ ಚಿತ್ರದ ಮೂಲಕ ಹೇಳಲು ಹೊರಟಿದ್ದಾರoತೆ.ಈ ಚಿತ್ರ ನಿರ್ಮಾಣವಾಗಿರುವುದೇ ಒಂದು ಬಹಳ ವಿಶೇಷವಾಗಿದೆ.

Advertisement

ಈ ಸ್ವಸಹಾಯ ಸಂಘದ ವತಿಯಿಂದ ಸುಮಾರು 20 ಲಕ್ಷ ಮಂದಿಯಿಂದ 20 ರೂಪಾಯಿಯಂತೆ ಹಣವನ್ನು ತೊಡಗಿಸುವ ಮೂಲಕ 4 ಕೋಟಿ ಹಣವನ್ನು ಸಂಗ್ರಹಿಸಿದ್ದಾರೆ. ಈ ಹಣದೊಂದಿಗೆ ಚಿತ್ರ ನಿರ್ಮಾಣ ಮಾಡಲು ಮುಂದಾಗಿದ್ದಾರೆ. ಇದರ ಮೂಲ ಉದ್ದೇಶ ಸ್ವ ಸಹಾಯ ಸಂಘದಿಂದ ಆಗುವ ಉಪಯೋಗ ಹಾಗೂ ಮಹಿಳೆಯರು ಯಾವ ರೀತಿ ಬದುಕನ್ನು ಕಟ್ಟಿಕೊಳ್ಳಬಹುದು ಎಂಬ ವಿಚಾರವನ್ನು ಈ ಚಿತ್ರದ ಮೂಲಕ ಹೇಳಲು ಹೊರಟಿದ್ದಾರೆ. ಇದರ ಜತೆಗೆ ಹಳ್ಳಿ ನಡೆಯುವ ಕೆಲವು ಘಟನೆಗಳು ಕೂಡ ಕಾರಣ ಸಿಗಲಿದೆಯಂತೆ ಮತ್ತೊಂದು ವಿಶೇಷವೆಂದರೆ ಈ ಚಿತ್ರಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಅವರು ಕೂಡ 20 ರೂಪಾಯಿಗಳನ್ನು ನೀಡಿದ್ದಾರಂತೆ. ಶ್ರುತಾಲಯ ಫಿಲಂಸ್ ಮೂಲಕ ಡಾ. ಮಂಜುನಾಥ್ ಕಾರ್ಯಕಾರಿ ನಿರ್ಮಾಪಕರಾಗಿದ್ದು ಟಿ.ಎಸ್. ನಾಗಾಭರಣ ನಿರ್ದೇಶನವಿರುವ ಈ ಚಿತ್ರಕ್ಕೆ ವಾಸುಕಿ ವೈಭವ್ ಸಂಗೀತವನ್ನು ನೀಡಿದ್ದು ಚಿತ್ರದಲ್ಲಿ ನ ಒಟ್ಟು 5 ಹಾಡುಗಳನ್ನು ನಿನ್ನೆ ಲೋಕಾರ್ಪಣೆ ಮಾಡಲಾಯಿತು. ಈ ಚಿತ್ರದಲ್ಲಿ ಹಿರಿಯ ನಟ ದೊಡ್ಡಣ್ಣ , ಸುಂದರ್ ರಾಜ್ , ಸೋನು ಗೌಡ ಸೇರಿದಂತೆ ಹಲವಾರು ಯುವ ಪ್ರತಿಭೆಗಳು ಕೂಡ ಅಭಿನಯಿಸಿದ್ದಾರೆ. ಇದೊಂದು ಗಿನ್ನಿಸ್ ದಾಖಲೆಯ ಚಿತ್ರ ಎಂದು ಕರೆಯಬಹುದು. ಯಾಕೆಂದರೆ ಇದೇ ಪ್ರಥಮ ಬಾರಿಗೆ ವಿಶ್ವದಲ್ಲೇ 20 ಲಕ್ಷ ಮಂದಿ ಹಣವನ್ನು ಹಾಕಿ ಚಿತ್ರ ನಿರ್ಮಿಸಿರೋದು ಎಂದರೆ ತಪ್ಪಾಗಲಾರದು.ಒಟ್ನಲ್ಲಿ ಕಾನೂರಾಯಣ ಚಿತ್ರದ ಈ ಪ್ರಯತ್ನವನ್ನು ಮೆಚ್ಚಲೇಬೇಕು

Advertisement

More Buzz

Trailers 3 days ago

ಬಾಲನ್ – ದಿ ಬಾಯ್ ಟ್ರೇಲರ್: ಭಯಾನಕ ಕಥೆಯ ಸುಳಿವು!

Trailers 3 days ago

ನೀ ನಂಗೆ ಅಲ್ಲವ ಟೀಸರ್: ರಾಹುಲ್ ಆರ್ಕೋಟ್ ಡೆಬ್ಯೂಟ್ novità

Buzz 1 week ago

ಪೀಬೊ ಬ್ರೈಸನ್ ನಿಧನ: ಡಿಸ್ನಿ ಗೀತೆಗಳ ಗಾಯಕನಿಗೆ 75ನೇ ವಯಸ್ಸಿನಲ್ಲಿ ಅಂತಿಮ ನಮನ

Buzz 2 weeks ago

Avengers: Doomsday ಕಾಫಿ ಶಾಪ್? ಅಭಿಮಾನಿಗಳ ನಿರಾಸೆ!

Buzz 2 weeks ago

ಕಲಾ ಹಿರನ್: ಸಲ್ಮಾನ್ ಖಾನ್‌ರ ಕಾನೂನು ನೋಟಿಸ್, ನಿರ್ಮಾಪಕ ಪ್ರತಿಕ್ರಿಯೆ!

Trailers 2 weeks ago

‘ಭಾರತ್ ಭಾಗ್ಯ ವಿಧಾತ’ ಟ್ರೇಲರ್: ಕಂಗನಾ 26/11 ವೀರ ನರ್ಸ್ ಪಾತ್ರದಲ್ಲಿ

Buzz 2 weeks ago

ಗೌರವ ಗೇರಾ: 84 ರೂ. ಜೊತೆಗಿದ್ದ ದಿನಗಳ ನೆನಪು!

Buzz 2 weeks ago

ತ್ರಿಶಾ ಕೃಷ್ಣನ್ ಟ್ವೀಟ್: ವಿಜಯ್‌ ಗೂಳಿಬಿರಿದು ವಿವಾದಕ್ಕೆ ಪ್ರತಿಕ್ರಿಯೆ!

Trailers 2 weeks ago

Massa Massa Lyrical Video Drops: Ram Charan & Janhvi Ignite Screens for Peddi

Short Films 2 weeks ago

ಜಾನು ಪಾಪ ನಾನು ಕಿರುಚಿತ್ರ: Bhaava Frames ನಿಂದ ನಗುವಿನ ಧಮಾಕಾ!

Short Films 2 weeks ago

KARAVATIKE ಕನ್ನಡ ಕಿರುಚಿತ್ರ ಟ್ರೇಲರ್: ಭಾವನೆಗಳ ಅದ್ಭುತ ಜರ್ನಿ!

Short Films 2 weeks ago

ಶಂಕರಶಾಸ್ತ್ರಿ ಮತ್ತು ಭಟ್ಟನ ಕೀಟ್ಲೆಗಳು: KGF ಬಾಯ್ಸ್‌ನ ಹೊಸ ಕಾಮಿಡಿ ವೈರಲ್!

Copyright ©2026 . All Rights Reserved. privacy | terms Whatsapp: 9538193653 Email: hello@flixoye.com