ನಿತ್ಯಾನಂದ ಸ್ವಾಮಿಗಳ ಜೀವನ ಚರಿತ್ರೆ ‘ಜೈ ಗುರುದೇವ್’…

Published on

525 Views
Advertisement

ತುಳುಭಾಷೆಯಲ್ಲಿ ಈಗಾಗಲೇ ತುಳು ನಾಡಸಿರಿ, ಕೋಟೆ ಚೆನ್ನಯ್ಯ, ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಹೀಗೆ ಹಲವರ ಬಯಾಗ್ರಫಿ ಚಿತ್ರಗಳು ಬಂದಿವೆ. ಅದಕ್ಕೆ ಈಗ ಹೊಸ ಸೇರ್ಪಡೆ ‘ಜೈ ಗುರುದೇವ್’. 20ನೇ ಶತಮಾನದಲ್ಲಿ ನಿತ್ಯಾನಂದ ಸ್ವಾಮಿಗಳು ಕೇರಳ, ಕರ್ನಾಟಕದ ಕರಾವಳಿ, ಮುಂಬಯಿಯಲ್ಲಿ ಸಂಚರಿಸಿ ಅಸಂಖ್ಯಾತ ಪವಾಡಗಳನ್ನು ಸೃಷ್ಟಿಸಿ, ನೊಂದವರ ಬಾಳಿಗೆ ಬೆಳಕಾದ ಮಹಾಸಂತ, ಅವಧೂತ. ಅವರ ಜೀವನ ಚರಿತ್ರೆಯನ್ನು ಆಧರಿಸಿ ತುಳು ಚಿತ್ರವೊಂದು ತೆರೆಗೆ ಬರಲಿದೆ.
ತುಳು ಕನ್ನಡದಲ್ಲಿ ಹಲವಾರು ಚಿತ್ರಗಳಿಗೆ ಸಂಭಾಷಣೆ ನಿರ್ದೇಶನ ಮಾಡಿದ್ದ ಸುಧಾಕರ ಬನ್ನಂಜೆ ಈ ಚಿತ್ರದ ಕಥೆ-ಚಿತ್ರಕಥೆ-ಸಂಭಾಷಣೆ-ಸಾಹಿತ್ಯ ಬರೆದು ನಿರ್ದೇಶನದ ಹೊಣೆ ಹೊತ್ತಿದ್ದಾರೆ.

ತುಳುವಿನಲ್ಲಿ “ಪುಂಡಿಪಣವು” ಎಂಬ ಸದಭಿರುಚಿಯ ಚಿತ್ರ ನಿರ್ಮಿಸಿದ ರಾಮಕೃಷ್ಣ ಶೆಟ್ಟಿ ಅವರು ತವಿಷ್ ಎಂಟರ್ ಪ್ರೈಸಸ್ ಲಾಂಛನದಲ್ಲಿ ಈ ಚಿತ್ರ ನಿರ್ಮಿಸುತ್ತಿದ್ದಾರೆ.

Advertisement

ಔರ ಫಿಲ್ಮ್ಸ್, ಭಾರತಿ ಶೆಟ್ಟಿ, ದುಬಾಯ್ ಸಹನಿರ್ಮಾಪಕರು, ವಿ.ಮನೋಹರ್-ಸಂಗೀತ, ನಾಗರಾಜ ಅದ್ವಾನಿ -ಛಾಯಾಗ್ರಹಣ, ಕೆ.ಗಿರೀಶ್ ಕುಮಾರ್ – ಸಂಕಲನ, ತಮ್ಮ ಲಕ್ಷ್ಮಣ -ಕಲೆನಿರ್ದೇಶನ ಮಾಡಲಿದ್ದಾರೆ. ಕಲಾವಿದರ ಆಯ್ಕೆ ನಡೆಯುತ್ತಿದೆ.

Advertisement

ಈ ಚಿತ್ರದ ಪ್ರಥಮ ಪೋಸ್ಟರ್ ಬಿಡುಗಡೆ ಸಮಾರಂಭ ಬಂಟರ ಸಂಘ ಬೆಂಗಳೂರು ಇಲ್ಲಿ ನಡೆಯಿತು. ಬೆಂಗಳೂರು ಬಂಟರ ಸಂಘದ ಅಧ್ಯಕ್ಷರಾದ ಶ್ರೀ ಉಪೇಂದ್ರ ಶೆಟ್ಟಿ ಅವರು ಪ್ರಥಮ ಪೋಸ್ಟರ್ ಬಿಡುಗಡೆ ಮಾಡಿ ಶುಭ ಹಾರೈಸಿದರು.

Advertisement

ಚಿತ್ರ ನಿರ್ಮಾಪಕರಾದ ದಿವಾಕರ್, ರಾಜಾರಾಂ ಶೆಟ್ಟಿ ಉಪ್ಪಳ, ನಿರ್ದೇಶಕ ಮಂಜು ಹೆದ್ದೂರ್, ಸಂಗೀತ ನಿರ್ದೇಶಕ ವಿ. ಮನೋಹರ್, ಪ್ರಸಾದ್ ಶೆಟ್ಟಿ, ನಟ ರಿಪ್ಪನ್ ಎಡ್ವರ್ಡ್, ನಾಗರಾಜ ಅದ್ವಾನಿ, ಗಿರೀಶ್ ಕುಮಾರ್ ಮುಂತಾದವರು ಹಾಜರಿದ್ದರು.

More Buzz

Trailers 4 days ago

ಬಾಲನ್ – ದಿ ಬಾಯ್ ಟ್ರೇಲರ್: ಭಯಾನಕ ಕಥೆಯ ಸುಳಿವು!

Trailers 4 days ago

ನೀ ನಂಗೆ ಅಲ್ಲವ ಟೀಸರ್: ರಾಹುಲ್ ಆರ್ಕೋಟ್ ಡೆಬ್ಯೂಟ್ novità

Buzz 2 weeks ago

ಪೀಬೊ ಬ್ರೈಸನ್ ನಿಧನ: ಡಿಸ್ನಿ ಗೀತೆಗಳ ಗಾಯಕನಿಗೆ 75ನೇ ವಯಸ್ಸಿನಲ್ಲಿ ಅಂತಿಮ ನಮನ

Buzz 2 weeks ago

Avengers: Doomsday ಕಾಫಿ ಶಾಪ್? ಅಭಿಮಾನಿಗಳ ನಿರಾಸೆ!

Buzz 2 weeks ago

ಕಲಾ ಹಿರನ್: ಸಲ್ಮಾನ್ ಖಾನ್‌ರ ಕಾನೂನು ನೋಟಿಸ್, ನಿರ್ಮಾಪಕ ಪ್ರತಿಕ್ರಿಯೆ!

Trailers 2 weeks ago

‘ಭಾರತ್ ಭಾಗ್ಯ ವಿಧಾತ’ ಟ್ರೇಲರ್: ಕಂಗನಾ 26/11 ವೀರ ನರ್ಸ್ ಪಾತ್ರದಲ್ಲಿ

Buzz 2 weeks ago

ಗೌರವ ಗೇರಾ: 84 ರೂ. ಜೊತೆಗಿದ್ದ ದಿನಗಳ ನೆನಪು!

Buzz 2 weeks ago

ತ್ರಿಶಾ ಕೃಷ್ಣನ್ ಟ್ವೀಟ್: ವಿಜಯ್‌ ಗೂಳಿಬಿರಿದು ವಿವಾದಕ್ಕೆ ಪ್ರತಿಕ್ರಿಯೆ!

Trailers 2 weeks ago

Massa Massa Lyrical Video Drops: Ram Charan & Janhvi Ignite Screens for Peddi

Short Films 2 weeks ago

ಜಾನು ಪಾಪ ನಾನು ಕಿರುಚಿತ್ರ: Bhaava Frames ನಿಂದ ನಗುವಿನ ಧಮಾಕಾ!

Short Films 2 weeks ago

KARAVATIKE ಕನ್ನಡ ಕಿರುಚಿತ್ರ ಟ್ರೇಲರ್: ಭಾವನೆಗಳ ಅದ್ಭುತ ಜರ್ನಿ!

Short Films 2 weeks ago

ಶಂಕರಶಾಸ್ತ್ರಿ ಮತ್ತು ಭಟ್ಟನ ಕೀಟ್ಲೆಗಳು: KGF ಬಾಯ್ಸ್‌ನ ಹೊಸ ಕಾಮಿಡಿ ವೈರಲ್!

Copyright ©2026 . All Rights Reserved. privacy | terms Whatsapp: 9538193653 Email: hello@flixoye.com