ಇತ್ತೀಚೆಗೆ ಮುಹೂರ್ತ ನೆರವೇರಿಸಿಕೊಂಡ ‘ಮಂಗಳೂರು ಟು ಬೆಂಗಳೂರು’

Published on

880 Views

ಇತ್ತೀಚೆಗೆ ‘ಮಂಗಳೂರು ಟು ಬೆಂಗಳೂರು’ ಚಿತ್ರದ ಮುಹೂರ್ತ ಸಮಾರಂಭವು ಗಾಂಧಿನಗರದ ಶ್ರೀ ಸತ್ಯನಾರಾಯಣ ಸ್ವಾಮಿ ದೇವಸ್ಥಾನ ದಲ್ಲಿ ಅದ್ಧೂರಿಯಾಗಿ ನೆರವೇರಿತು. ‘ಮಂಗಳೂರು ಟು ಬೆಂಗಳೂರು’ ಹೆಸರೇ ಹೇಳುವಂತೆ ಚಿತ್ರದ ಕಥೆಯು ಮಂಗಳೂರಿನಿಂದ ಶುರುವಾಗಿ ಬೆಂಗಳೂರಿಗೆ ಬರುತ್ತದೆ. ಈ‌ ಕಥೆನೇ ಒಂದು ಟ್ರಾವೆಲ್ ಆಗಿರುತ್ತದೆ ಎನ್ನುತ್ತಾರೆ ಚಿತ್ರದ ನಿರ್ದೇಶಕ ಕೋಲಾರ ಮುನಿರಾಜ್. ‘ಮಂಗಳೂರು ಟು ಬೆಂಗಳೂರು’ ಚಿತ್ರವೂ ರಾಜ್ಯಮಟ್ಟದ ಅಥ್ಲೆಟ್ ಒಬ್ಬರ ಜೀವನ ಕುರಿತಾದ ನೈಜ ಘಟನೆ ಆಧಾರಿತ ಚಿತ್ರ.

ಚಿತ್ರದಲ್ಲಿ ನಾಯಕಿಯಾಗಿ ಮೊದಲ ಬಾರಿಗೆ ವರ್ಣಿಕಾ ಗೌಡರವರು ಅಭಿನಯಿಸುತ್ತಿದ್ದಾರೆ. ಈ ಹಿಂದೆ ಉಪೇಂದ್ರ, ನಾಗತಿಹಳ್ಳಿ ಚಂದ್ರಶೇಖರ್ ರವರ ಜೊತೆ ಕೆಲಸ ಮಾಡಿ ಅನುಭವವಿರುವ ಕೋಲಾರ ಮುನಿರಾಜ್ ರವರಿಗೆ ತಮ್ಮ ನಿರ್ದೇಶನದ ಚೊಚ್ಚಲ ಚಿತ್ರ ‘ಮಂಗಳೂರು ಟು ಬೆಂಗಳೂರು’. ‘ರಾಹುಕಾಲ’ ಚಿತ್ರದಲ್ಲಿ ಎಸಿಪಿ ಪಾತ್ರದಲ್ಲಿ ಅಭಿನಯಿಸಿರುವ ಧನುಷ್ ಈ ಚಿತ್ರದಲ್ಲಿ ನಾಯಕನಟನಾಗಿ ಅಭಿನಯಿಸುತ್ತಿದ್ದಾರೆ. ನಾಯಕಿಯ ಅಣ್ಣನ ಪಾತ್ರದಲ್ಲಿ ನಟ ಬಾಲರಾಜ್ ಹಲವು ವರ್ಷಗಳ ನಂತರ ಈ ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ‘ಮುನ್ನಡೆ’, ನಾಕುಮುಖ ಚಿತ್ರದಲ್ಲಿ ನಾಯಕನಟನಾಗಿ ಅಭಿನಯಿಸಿದ ಧನಂಜಯ್ ಈ ಚಿತ್ರದಲ್ಲಿ ನೆಗಟೀವ್ ಶೆಡ್ ನಲ್ಲಿ ವಿಲನ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದಲ್ಲಿ ಒಟ್ಟು 5 ಹಾಡುಗಳಿದ್ದು, ಮಜಾಟಾಕೀಸ್ ಖ್ಯಾತಿಯ ರಾಜ್ ಮೋಹನ್ ಸಂಗೀತ ನೀಡಲಿದ್ದಾರೆ.

Copyright ©2024 . All Rights Reserved. privacy | terms Whatsapp: 9538193653 Email: hello@flixoye.com