ಸಿಸಿಬಿ ವಿಚಾರಣೆಗೆ ಹಾಜರಾದ ಅನುಶ್ರೀ….

Published on

274 Views

ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಿರೂಪಕಿ, ನಟಿ ಅನುಶ್ರೀರವರು ಇಂದು ಮಂಗಳೂರಿನಲ್ಲಿ ಸಿಸಿಬಿ ಹಾಗೂ ಎನ್ ಸಿಬಿ ಮುಂದೆ ವಿಚಾರಣೆಗೆ ಹಾಜರಾಗಿದ್ದರು. ಸುಮಾರು 4 ಗಂಟೆಯ ವಿಚಾರಣೆಯ ನಂತರ ಹೊರ ಬಂದ ಅನುಶ್ರೀಯವರು ಡ್ರಗ್ಸ್ ನಿಂದ ಸಮಾಜ ಮುಕ್ತವಾಗಲಿ ಎಂದಿದ್ದಾರೆ.

ಎಸಿಪಿ ವಿನಯ್ ಅವರ ನೇತ್ರತ್ವದಲ್ಲಿ ವಿಚಾರಣೆಯನ್ನು ನಡೆಸಲಾಯಿತು. ಡ್ರಗ್ಸ್ ವಿಚಾರವಾಗಿ ಈಗಾಗಲೇ ಬಂಧಿತರಾಗಿರುವ ಕಿಶೋರ್ ಅಮನ್ ಶೆಟ್ಟಿ ಹಾಗೂ ತರುಣ್ ಅನುಶ್ರೀಯವರ ಹೆಸರನ್ನು ಬಾಯಿಬಿಟ್ಟ ಹಿನ್ನೆಲೆಯಲ್ಲಿ ಅನುಶ್ರೀಯವರನ್ನು‌ ವಿಚಾರಣೆಗೆ ಕರೆಸಲಾಗಿತ್ತು. ಈ ವಿಚಾರವಾಗಿ ಮಾಧ್ಯಮದವರ ಮುಂದೆ ಮಾತನಾಡಿದ ಅನುಶ್ರೀ ಸಿಸಿಬಿಯವರ ಎಲ್ಲ ಪ್ರಶ್ನೆಗಳಿಗೂ‌ ಉತ್ತರಿಸಿದ್ದೇನೆ.

ಮುಂದೆ ತನಿಖೆಗೆ ಕರೆದರೂ ಬರುತ್ತೇನೆ. ನಾನು ಯಾವುದೇ ಡ್ರಗ್ ಪಾರ್ಟಿಗಳಲ್ಲೂ ಪಾಲ್ಗೊಂಡಿಲ್ಲ ಎಂದಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಡ್ರಗ್ಸ್ ಅನ್ನೋ ಕೊಳೆಯನ್ನು ತೆಗೆಯಬೇಕು. ಭಾರತೀಯ ಚಿತ್ರರಂಗದಲ್ಲಿ ಕನ್ನಡ ಚಿತ್ರರಂಗಕ್ಕೆ ಒಳ್ಳೆಯ ಗೌರವವಿದೆ. ಅದನ್ನು ಉಳಿಸಿಕೊಳ್ಳಬೇಕಾಗಿದೆ.

ಸುಮಾರು 12 ವರ್ಷಗಳ ‌ಹಿಂದೆ ತರುಣ್ ಅವರ ಪರಿಚಯವಿದ್ದು, ಕಾರ್ಯಕ್ರಮವೊಂದಕ್ಕೆ ಅವರು ನನಗೆ ಕೋರಿಯಾಗ್ರಾಫರ್ ಆಗಿದ್ದರು. ಆ ನಂತರದಲ್ಲಿ ಅವರ ಡ್ಯಾನ್ಸ್ ಕ್ಲಾಸ್ ಉದ್ಘಾಟನಾ ಕಾರ್ಯಕ್ರಮದಲ್ಲಿ ನಾನು ಭಾಗಿಯಾಗಿದ್ದೇನೆ. ಅದರೆ ತರುಣ್ ಜೊತೆಗೆ ಯಾವುದೇ ಸಂಬಂಧವನ್ನು ನಾನು‌ ಹೊಂದಿರಲಿಲ್ಲ ಎಂದಿದ್ದಾರೆ.

Copyright ©2024 . All Rights Reserved. privacy | terms Whatsapp: 9538193653 Email: hello@flixoye.com