ರಾಜಶೇಖರ್ ನಿರ್ಮಿಸಿರುವ `ಅಮೃತ ಘಳಿಗೆ` ಚಿತ್ರ ಈ ವಾರ ಬಿಡುಗಡೆ

Published on

231 Views

ಶ್ರೀಬನಶಂಕರಿ ಫಿಲಮ್ಸ್ ಲಾಂಛನದಲ್ಲಿ ರಾಜಶೇಖರ್ ಅವರು ನಿರ್ಮಿಸಿರುವ `ಅಮೃತ ಘಳಿಗೆ` ಚಿತ್ರ ಈ ವಾರ ಬಿಡುಗಡೆಯಾಗುತ್ತಿದೆ.
ಅಶೋಕ್ ಕಡಬ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿರುವ ಈ ಚಿತ್ರಕ್ಕೆ ಕಾರ್ತಿಕ್ ವೆಂಕಟೇಶ್ ಸಂಗೀತ ನೀಡಿದ್ದಾರೆ. ಅರುಣ್ ಕುಮಾರ್ ಛಾಯಾಗ್ರಹಣ, ರಾಜೇಶ್ ಬ್ರಹ್ಮಾವರ್, ಜಗ್ಗು ನೃತ್ಯ ನಿರ್ದೇಶನ ಹಾಗೂ ಅರುಣ್ ಕುಮಾರ್ ಅವರ ಸಂಕಲನವಿರುವ ಈ ಚಿತ್ರದ ತಾರಾಬಳಗದಲ್ಲಿ ದತ್ತಣ್ಣ, ನೀತು, ಸಮಿತವಿನ್ಯ, ಶೃಂಗೇರಿ ರಾಮಣ್ಣ, ಪದ್ಮಾ ವಾಸಂತಿ, ರಾಜಶೇಖರ್ ಮುಂತಾದವರಿದ್ದಾರೆ.

Copyright ©2024 . All Rights Reserved. privacy | terms Whatsapp: 9538193653 Email: hello@flixoye.com