ಕಳೆದ ವಾರದ “ಸದಾ ನಿಮ್ಮೊಂದಿಗೆ” ಸಂಚಿಕೆಯಲ್ಲಿ “ಧನಂಜಯ್” ಅವರು ರವಿ ಎಂಬ ಮೀನುಗಾರರ ಕುಟುಂಬದ ಹೆಣ್ಣು ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಮೂಸಂಬಿ ಜ್ಯೂಸ್ ಮಾರಿ 1ಲಕ್ಷದ 30ಸಾವಿರ ರೂಗಳನ್ನು ನೀಡಿ ನೆರವಾಗಿದ್ದಾರೆ.
ಅದೇ ರೀತಿ ಈ ಭಾನುವಾರ ಬೆಂಗಾಲಿ ಬೆಡಗಿ ಪ್ರಿಯಾಂಕ ಉಪೇಂದ್ರ ಅವರು ಪುಷ್ಪಲತಾ ಗೋಸ್ಕರ ಗಾಂಧಿ ಬಜಾರಲ್ಲಿ ಹೂ ವ್ಯಾಪಾರ ಮಾಡಿದ್ದಾರೆ. ಇವರಿಗೆ 4 ಜನ ಹೆಣ್ಣುಮಕ್ಕಳಿದ್ದು ತುಂಬಾ ಬಡತದಲ್ಲಿ ಜೀವನವನ್ನು ಸಾಗಿಸುತ್ತಿದ್ದಾರೆ. ಇವರ ಕೊನೆಯ ಮಗಳಿಗೆ ಹೃದಯದಲ್ಲಿ ಸಮಸ್ಯೆ ಎದುರಾಗಿದೆ. ಈ ಬಡತನದ ಮಧ್ಯೆ ಇದಕ್ಕು ಅವರು ಕಷ್ಟಪಡುವಂತಾಗಿದೆ. ಇವರ ಕಷ್ಟಕ್ಕೆ ಕೈ ಜೋಡಿಸಿದ್ದು ಪ್ರಿಯಾಂಕ ಉಪೇಂದ್ರ. ಇವರು ಹೂ ಮಾರಾಟ ಮಾಡಿ ಎಷ್ಟು ಸಂಪಾದನೆ ಮಾಡಿದ್ರು, ಆ ಹಣದಿಂದ ಪುಷ್ಪಲತಾ ಅವರ ಮಗಳ ಚಿಕಿತ್ಸೆಗೆ ಎಷ್ಟು ಉಪಯೋಗವಾಗುತ್ತೆ? ಎಂಬುದನ್ನು ಕಾದುನೋಡಬೇಕಾಗಿದೆ.
“ಸದಾ ನಿಮ್ಮೋಂದಿಗೆ” ಇದೇ ಭಾನುವಾರ (19.08.18) ನಿಮ್ಮ ಉದಯ ವಾಹಿನಿಯಲ್ಲಿ ರಾತ್ರಿ 9ಕ್ಕೆ ಪ್ರಸಾರವಾಗುತ್ತದೆ.









