ಯಾವುದೇ ರಾಜಕಾರಣಿಗಳು ಮಾಡದ ಕೆಲ್ಸವನ್ನ ಕಿಚ್ಚ ಸುದೀಪ್ ಮಾಡ್ತಿರೋದು ನಾಲ್ಕು ಜನಕ್ಕೆ ಮಾದರಿಯಾಗುತ್ತಿದೆ. ಈ ಕೆಲ್ಸ ಗಳು ಅವರ ವ್ಯಕ್ತಿತ್ವ ಏನು ಅಂತ ತೋರಿಸುತ್ತದೆ. ಕಿಚ್ಚ ಸುದೀಪ್ ಈ ಸಂದರ್ಭದಲ್ಲಿ ತಮ್ಮದೇ ಆದ ಸೇವೆ ಮಾಡುತ್ತೀರೋದಕ್ಕೆ ನಮಗೆ ಅವರ ಬಗ್ಗೆ ಇದ್ದ ಗೌರವ ದುಪ್ಪಟ್ಟಾಗಿದೆ.

ಕಳೆದ ವಾರ ಆಕ್ಸಿಜನ್ ಕೊರತೆಯಿಂದ ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಮರಣ ಹೊಂದಿದ 24 ಜನರ ಕುಟುಂಬಗಳಿಗೆ ಭರವಸೆ ತುಂಬಿ ಜೊತೆ ಇರ್ತೀನಿ ಅಂತ ಹೇಳಿದ್ದಾರೆ ಅಭಿನಯ ಚಕ್ರವರ್ತಿ. ತಮ್ಮ ಕಿಚ್ಚ ಸುದೀಪ್ ಚಾರಿಟೇಬಲ್ ಸೊಸೈಟಿ ಮೂಲಕ ಸಾಮಾಜಿಕ ಜವಾಬ್ದಾರಿ ಮೆರೆಯುತ್ತಿರುವ ಕಿಚ್ಚ, ಅನಾರೋಗ್ಯ ಲೆಕ್ಕಿಸದೇ ಸಹಾಯಕ್ಕೆ ಮುಂದಾಗಿರೋದು ಬೇರೆಯವರಿಗೆ ಮಾದರಿಯಾಗಿದ್ದಾರೆ.
https://youtu.be/RC5cvT7AZqA
ಕಳೆದ ನಾಲ್ಕು ವಾರದಿಂದ ಬಿಗ್ ಬಾಸ್ ಗೆ ಅನಾರೋಗ್ಯದಿಂದ ಗೈರು ಹಾಜರಾಗಿದ್ದು, ಇವಾಗ ಗುಣಮುಖರಾಗಿದ್ದಾರೆ. ಇಂಥದರ ಮಧ್ಯೇ ಸಹ ಈ ತರದ ಸಹಾಯಕ್ಕೆ ಆ ಕುಟುಂಬದ ಜೊತೆಗೆ ನಿಂತಿರೋದು, ಸಿನೆಮಾದಲ್ಲಿ ಅಷ್ಟೇ ಅಲ್ಲ ನಿಜ ಜೀವನದಲ್ಲೂ ಸಹ ಹೀರೊ ಅಂತ ಪದೇ ಪದೇ ನಿರೂಪಿಸುತಿದ್ದಾರೆ.









