flixOye
Buzz

ನಿರ್ಮಾಪಕ‌ ಕೆ.ಮಂಜು ವಿರುದ್ಧ ದೂರು ದಾಖಲು

ಸ್ಯಾಂಡಲ್ವುಡ್ ಖ್ಯಾತ ನಿರ್ಮಾಪಕ ಕೆ.ಮಂಜು ಹಣ ಪಡೆದು ವಂಚನೆ‌ ಮಾಡಿರುವ ಆರೋಪದಲ್ಲಿ ‌ಮಹಾದೇವಪುರ ಪೊಲೀಸ್ ‌ಠಾಣೆಯಲ್ಲಿ‌ ದೂರು‌ ದಾಖಲಾಗಿದ್ದು, ಐಪಿಸಿ ಸೆಕ್ಷನ್ 420, 506 ಮತ್ತು 34 ಅಡಿಯಲ್ಲಿ ಎಫ್ಐಆರ್ ಆಗಿದೆ.

Complaint against producer K Manju
2018 ರಲ್ಲಿ ರಾಜಗೋಪಾಲ್ ತಮ್ಮ‌ ಜಾಮೀನು ‌ಮಾರುತ್ತಿದ್ದರಂತೆ. ಈ‌ ಜಮೀನು ಖರೀದಿಗೆ ದೂರು‌ ಕೊಟ್ಟ ‘ಹೆಬ್ಬಟ್ ರಾಮಕ್ಕ’ ಸಿನಿಮಾ ನಿರ್ಮಾಪಕ ಪುಟ್ಟುರಾಜು ಆರ್ಟಿಟಿಎಸ್ ನಲ್ಲಿ ಹಣ ನೀಡಿದ್ದರಂತೆ, ರಾಜಗೋಪಾಲ್ ಗೆ ಅಡ್ವಾನ್ಸ್ ಹಣ ನೀಡಿದ್ದರು ಪುಟ್ಟುರಾಜು. ಅದರೆ ಆಗ‌ ಕೆ.ಮಂಜು ಅಗ್ರಿಮೆಂಟ್ ಮಾಡಿಕೊಂಡಿದ್ದರಂತೆ. ಬಳಿಕ‌ 4 ಮಂದಿ‌ ಸೇರಿ‌ ರಿಜಿಸ್ಟರ್ ಮಾಡಿಕೊಡುವುದಾಗಿ ಕೆ.ಮಂಜು ಹೇಳಿ ಹಣ ಪಡೆದಿದ್ದಾರೆ. ಹಣ ಪಡೆದು ವಾಪಸ್ಸು ನೀಡದೇ ವಂಚನೆ ಮಾಡಿದ್ದಾರೆ. ಹಣ ಕೇಳಿದ್ದಾರೆ ಜೀವ ಬೆದರಿಕೆ ಹಾಕ್ತಾರೆ ಎಂದು ನಿರ್ಮಾಪಕ ಪುಟ್ಟುರಾಜು ಆರೋಪ ಮಾಡಿದ್ದಾರೆ.

ಸಂಬಂಧಿತ · Related