ರಾಜ ಹಂಸ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ನಟರಾಗಿ ಪರಿಚಯವಾದ ಗೌರಿ ಶಂಕರ್ ಇಂದು ಹಸೆಮಣೆ ಏರಿದರು. ಬಹು ಕಾಲದ ಗೆಳತಿ ಅರುಣಾ ಅವರನ್ನು ಗುರುವಾರ ಕೊಲ್ಲೂರು ಮೂಕಾಂಬಿಕಾ ಸನ್ನಿಧಿಯಲ್ಲಿ ಬಾಳಾ ಸಂಗಾತಿಯನ್ನಾಗಿ ಸ್ವೀಕರಿಸಿದ್ದಾರೆ. ಸದ್ಯದ ವಾತಾವರಣಕ್ಕೆ ಪೂರಕವಾಗಿ ಸರಳ ಮತ್ತು ಶಾಸ್ತ್ರೋಕ್ತ ವಾಗಿ ಮದುವೆ ಕಾರ್ಯಕ್ರಮ ನಡೆದಿದೆ. ವಿವಾಹ ಕಾರ್ಯಕ್ರಮದಲ್ಲಿ ಇಬ್ಬರ ಕುಟುಂಬದ ಸದಸ್ಯರು ,ಆತ್ಮೀಯರು ಪಾಲ್ಗೊಂಡಿದ್ದರು.












