“ಹಾಗೇ ವೈಕುಂಠ ಪುರದಲಿ” ಎಂಬುದು 2020 ರ ಭಾರತೀಯ ಆಕ್ಷನ್-ಡ್ರಾಮಾ ಚಲನ ಚಿತ್ರವಾಗಿದ್ದು, ತ್ರಿವಿಕ್ರಮ್ ಶ್ರೀನಿವಾಸ್ ನಿರ್ದೇಶಿಸಿದ್ದಾರೆ ಮತ್ತು ಗೀಥಾ ಆರ್ಟ್ಸ್ ಮತ್ತು ಹಾರಿಕಾ ಮತ್ತು ಹಸೈನ್ ಕ್ರಿಯೇಷನ್ಸ್ ಎಂಬ ಬ್ಯಾನರ್ನಲ್ಲಿ ತಯಾರಿಸಲಾಗಿದೆ. ಸಹ-ನಿರ್ಮಾಣವನ್ನು ಅಲ್ಲು ಅರವಿಂದ್ ಮತ್ತು ಎಸ್. ರಾಧಾ ಕೃಷ್ಣ ಅವರು ಮಾಡಿದ್ದಾರೆ.
ಈ ಚಿತ್ರದಲ್ಲಿ ಅಲ್ಲು ಅರ್ಜುನ್ ಮತ್ತು ಪೂಜಾ ಹೆಗ್ಡೆ ನಟಿಸಿದರೆ, ತಬು, ಜಯರಾಮ್, ಸುಶಾಂತ್, ನವದೀಪ್, ನಿವೇತಾ ಪೆತುರಾಜ್, ಸಮುದ್ರಕಾನಿ, ಮುರಳಿ ಶರ್ಮಾ, ರಾಜೇಂದ್ರ ಪ್ರಸಾದ್, ಸುನಿಲ್, ಸಚಿನ್ ಖೇಡೇಕರ್, ಮತ್ತು ಹರ್ಷ ವರ್ಧನ್ ಪ್ರಮುಖ ಪಾತ್ರಗಳನ್ನು ನಿರ್ವಹಿಸುತ್ತಿದ್ದಾರೆ.
ಈ ಚಿತ್ರದಲ್ಲಿ ಎಸ್.ಥಮನ್ ಸಂಯೋಜಿಸಿದ ಧ್ವನಿಪಥವನ್ನು ಹೊಂದಿದ್ದರೆ, ಛಾಯಾಗ್ರಹಣ ಮತ್ತು ಸಂಕಲವನ್ನು ಕ್ರಮವಾಗಿ ಪಿ.ಎಸ್. ವಿನೋದ್ ಮತ್ತು ನವೀನ್ ನೂಲಿ ನಿರ್ವಹಿಸಿದ್ದಾರೆ.
ಈ ಕಥಾವಸ್ತುವು ತನ್ನ ತಂದೆ ವಾಲ್ಮೀಕಿ (ಶರ್ಮಾ) ನಿಂದ ದ್ವೇಷಿಸಲ್ಪಟ್ಟ ಮತ್ತು ನಿರ್ಲಕ್ಷಿಸಲ್ಪಟ್ಟ ಬಂಟು (ಅಲ್ಲು ಅರ್ಜುನ್) ಅವರ ಮೇಲೆ ಹೆಣೆಯಲಾಗಿದೆ. ತನ್ನ ಜೈವಿಕ ತಂದೆ ವಾಲ್ಮೀಕಿಯಲ್ಲ ಆದರೆ ಶ್ರೀಮಂತ ಉದ್ಯಮಿ ರಾಮಚಂದ್ರ (ಜಯರಾಮ್) ಎಂದು ಬಂಟು ನಂತರ ತಿಳಿದುಕೊಳ್ಳುತ್ತಾನೆ. ಬಂಟು ತನ್ನ ಮೂಲ ಕುಟುಂಬವನ್ನು ರಕ್ಷಿಸಲು ವೈಕುಂಠಪುರ ರಾಮಚಂದ್ರನ ಮನೆಗೆ ಪ್ರವೇಶಿಸುತ್ತಾನೆ. ಆತ ಆ ಮನೆಯನ್ನು ಮತ್ತು ಆಮನೆಯವರನ್ನು ಹೇಗೆಲ್ಲಾ ರಕ್ಷಣೆ ಮಾಡುತ್ತಾನೆ ಎಂಬುದನ್ನು ಈ ಚಿತ್ರದಲ್ಲಿ ಬಹಳ ಸುಂದರವಾಗಿ ಚಿತ್ರಿಸಿದ್ದಾರೆ.
ಈ ದಸರಾ ಸಂದರ್ಭದಲ್ಲಿ “ಹಾಗೇ ವೈಕುಂಠಪುರದಲಿ” ಇದೇ ಭಾನುವಾರ (25.10.2020) ಸಂಜೆ 6.30 ಕ್ಕೆ ಉದಯ ಟಿವಿಯಲ್ಲಿ ಪ್ರಸಾರವಾಗಲಿದೆ.









