flixOye
Buzz

ಬಾಲಿವುಡ್ ನಲ್ಲಿ 3 ಖಾನ್ ಗಳ ಬಗ್ಗೆ ತಲ್ಲಣ ಸೃಷ್ಟಿಸಿದ ಸ್ವಾಮಿ ! ಏನಿದು ವಿಷಯ ?

ಸುಬ್ರಮಣ್ಯನ್ ಸ್ವಾಮಿ ರವರು ಬಾಲಿವುಡ್ ಸೆಲೆಬ್ರೆಟಿಗಳಿಗೆ ಬಿಗ್ ಶಾಕ್ ನೀಡಿದ್ದಾರೆ. ಅದರಲ್ಲಿಯೂ ಅಮಿರ್ ಖಾನ್, ಸಲ್ಮಾನ್ ಖಾನ್ ಹಾಗೂ ಶಾರುಖ್ ಖಾನ್ ಬಗ್ಗೆ ಮಹತ್ವದ ಹೆಜ್ಜೆ ಇಟ್ಟಿದ್ದಾರೆ.

ಇದನ್ನೂ ಓದಿ: ಮುರಿದ ಮಿಕ್ಸರ್ ಗ್ರೈಂಡರ್ ಮತ್ತು ಟೆಲಿವಿಷನ್ ಬಳಸಿ 600 ಡ್ರೋನ್‌ಗಳನ್ನು ತಯಾರಿಸಿದ ‘ಡ್ರೋನ್ ಬಾಯ್’ ಕುತೂಹಲಕಾರಿ ಪ್ರಕರಣ.

ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಈ ರೀತಿ ಬರೆದುಕೊಂಡಿರುವ ಸ್ವಾಮಿ ರವರು, ಭಾರತ ಮತ್ತು ವಿದೇಶಗಳಲ್ಲಿ ಸಲ್ಮಾನ್ ಖಾನ್, ಅಮಿರ್ ಖಾನ್ ಹಾಗೂ ಶಾರುಖ್ ಖಾನ್ ಖರೀದಿ ಮಾಡಿರುವ ಆಸ್ತಿಗಳ ಕುರಿತು ಅದರಲ್ಲಿಯೂ ದುಬೈ ನಲ್ಲಿರುವ ಆಸ್ತಿಗಳ ಕುರಿತು ತನಿಖೆ ನಡೆಯಬೇಕು.

ಅವರ ಹೆಸರಿನಲ್ಲಿರುವ ಬಂಗಲೆಗಳ ಮೇಲೆ ತನಿಖೆ ಆಗಬೇಕು, ಅವರಿಗೆ ಈ ಬಂಗಲೆ ಗಳನ್ನು ಹಾಗೂ ಪ್ರಾಪರ್ಟಿ ಗಳನ್ನು ಯಾರು ಉಡುಗೊರೆಯನ್ನಾಗಿ ನೀಡಿದರು ಅಥವಾ ಹೇಗೆ ಅವರು ಇವೆಲ್ಲವನ್ನೂ ಖರೀದಿ ಮಾಡಿದರು ಎಂಬುದರ ಕುರಿತು ಸಂಪೂರ್ಣ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ.

ಸುಶಾಂತ್ ಸಿಂಗ್ ರಜಪೂತ್ ರವರ ಘಟನೆಯ ಕುರಿತು ಈ ಮೂರೂ ಖಾನ್ ಗಳು ಮೌನವಾಗಿದ್ದರು ಎಂದು ಟ್ವಿಟ್ಟರ್ ನಲ್ಲಿ ಬರೆದು ಕೊಂಡಿದ್ದರು. ಅದಾದ ಬಳಿಕ ಕೆಲವೇ ಕೆಲವು ಗಂಟೆಗಳನ್ನು ಈ ರೀತಿ ಟ್ವೀಟ್ ಮಾಡುವ ಮೂಲಕ ಮೂರು ಖಾನ್ ಗಳಿಗೆ ಬಿಗ್ ಶಾಕ್ ನೀಡಿದ್ದಾರೆ.

ಸಂಬಂಧಿತ · Related