ಚಿನ್ನದ ಗೊಂಬೆ ಚಿತ್ರದ ಮೂಲಕ ಕನ್ನಡ ಚಿತ್ರರಂಗದಲ್ಲಿ ನಾಯಕನಾಗಿ
ಗುರುತಿಸಿಕೊಂಡ ಕೀರ್ತಿ ಕೃಷ್ಣ ಅವರು ಸದ್ಯ “ನಾರಯಣ ನಾರಯಣ”
ಅನ್ನೊ ಕಾಮಿಡಿ ಚಿತ್ರದಲ್ಲಿ ನಾಯಕನಾಗಿ ನಟಿಸುತ್ತಿದ್ದಾರೆ. ಈಗ ಮತ್ತೊಂದು ಚಿತ್ರದಲ್ಲಿ ನಾಯಕನಾಗಿ ನಟಿಸಲಿದ್ದಾರೆ. ತೆಲುಗು ಹಾಗೂ ಕನ್ನಡ ಎರಡು ಭಾಷೆಯಲ್ಲಿ ಈ ಚಿತ್ರ ತಯಾರಾಗಲಿದೆ. ಚಿತ್ರಕ್ಕೆ ಶೀರ್ಷಿಕೆ ಅಂತಿಮವಾಗಿಲ್ಲ ಈ ಚಿತ್ರದ ಮಹೂರ್ತ ಇಂದು ಕನಕಪುರದ ಕೆಂಕೇರಮ್ಮ ದೇವಸ್ಥಾನದಲ್ಲಿ ನೆರವೇರಿದೆ.
ವಿಶೇಷವೆಂದರೆ ತೆಲುಗಿನ ಖ್ಯಾತ ನಟರುಗಳಾದ ದೇವ್ ಗಿಲ್
ಪ್ರದೀಪ್ ರಾಹುತ್,ಸಯ್ಯಾಜಿ ಶಿಂಧೆ ಅವರು ಈ ಚಿತ್ರದಲ್ಲಿ ನಟಿಸಲಿದ್ದಾರೆ.

ಪುಷ್ಪ ಫಿಲಂಸ್ ಬ್ಯಾನರ್ ಅಡಿಯಲ್ಲಿ ನರಸಿಂಹ ಎಂಬುವವರು
ನಿರ್ಮಿಸಲಿರುವ ಈ ಚಿತ್ರವನ್ನು ತೆಲುಗು ಮೂಲದ ಲಕ್ಷ್ಮಣ್ ಅವರು
ನಿರ್ದೇಶನ ಮಾಡಲಿದ್ದಾರೆ. ಕೀರ್ತಿ ಕೃಷ್ಣ ಅವರಿಗೆ ಜೋಡಿಯಾಗಿ
ಮಮತಾ ರಾಹುತ್ ಅವರು ನಟಿಸಲಿದ್ದಾರೆ. ಚಿತ್ರಕ್ಕೆ ರಾಜ್ ಕಿರಣ್ ಅವರು ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ.









